ಕೊರೋನಾ ಬೆನ್ನಲ್ಲೇ ಜಗತ್ತಿಗೆ ಮತ್ತೊಂದು ಶಾಕ್: ಚೀನಾದಿಂದ ಪತ್ತೆಯಾಯ್ತು ಮತ್ತೊಂದು ಮಾ ರ ಕ ವೈರಸ್

in Kannada News/News 256 views

ಬೀಜಿಂಗ್: ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದ ಚೀನಾದಿಂದ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಹಕ್ಕಿಜ್ವರದ ರೂಪಾಂತರ ವೈರಸ್ H10N3 ಸೋಂಕು ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ.

Advertisement

ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರಲ್ಲಿ ಈ ವೈರಸ್ ಪತ್ತೆಯಾಗಿದ್ದಾಗಿ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಜ್ವರ ಹಾಗೂ ಇನ್ನಿತರ ಅನಾರೋಗ್ಯ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಹಕ್ಕಿಜ್ವರದ ರೂಪಾಂತರಿ ವೈರಸ್ ದೃಢಪಟ್ಟಿದೆ.

ಇದು ವ್ಯಕ್ತಿಯಲ್ಲಿ ಹರಡಿದ್ದಾದರೂ ಹೇಗೆ ಎಂಬ ಬಗ್ಗೆ ಚೀನಾ ಮಾಹಿತಿ ನೀಡಿಲ್ಲ. H10N3 ಕಡಿಮೆ ರೋಗಕಾರಕ ಗುಣ ಹೊಂದಿದ್ದು, ಇತರ ವೈರಸ್ ಗಳಿಗೆ ಹೋಲಿಸಿದರೆ ಅಷ್ಟೊಂದು ವೇಗವಾಗಿ ಹರಡುವುದಿಲ್ಲ. ಸಧ್ಯ ರೋಗಿ ಚೇತರಿಸಿಕೊಂಡಿದ್ದಾಗಿ ತಿಳಿಸಿದೆ.

ಇದನ್ನೂ ಓದಿ: ಕೊರೋನಾ ಹಾಗು ಮುಂಬರುವ ಗಂಡಾಂತರಗಳ ಬಗ್ಗೆ ಭವಿಷ್ಯವಾಣಿ

ಹಾಸನ: ಕರೊನಾ ಮೊದಲನೆಯ ಅಲೆ ಬಳಿಕ ಇದೀಗ ಎರಡನೆಯ ಅಲೆ ಹಾ ವ ಳಿ ಇಟ್ಟಿದೆ. ಸದ್ಯದಲ್ಲೇ ಮೂರನೆಯ ಅಲೆ ಕೂಡ ಬರಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಕೋವಿಡ್​-26, ಕೋವಿಡ್​-32 ಎದುರಿಸಲು ಸಿದ್ಧರಾಗಿರಿ ಎಂದು ಅಮೆರಿಕದ ಪರಿಣತರು ಮುನ್ನೆಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಕೋವಿಡ್​-19 ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಜನರು ಬೇಸರ-ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲದರ ನಡುವೆ ಕರೊನಾ ಯಾವಾಗ ಪೂರ್ತಿಯಾಗಿ ಮರೆಯಾಗಲಿದೆ ಎಂಬ ಬಗ್ಗೆ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯ ಹಾರನಹಳ್ಳಿ ಕೋಡಿ ಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಕರೊನಾ ಯಾವಾಗ ಸಂಪೂರ್ಣವಾಗಿ ಮರೆಯಾಗಲಿದೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ. ಅದರ ಜತೆಗೆ ಕರೊನಾಗಿಂತಲೂ ಭ ಯಾ ನ ಕ ರೋಗದ ಬರುವಿಕೆ ಕುರಿತು ಕೂಡ ಎಚ್ಚರಿಕೆ ನೀಡಿದ್ದಾರೆ. ಜೂ. 30ರ ಹಾಗೆ ಕರೊನಾ ಹಾವಳಿ ಕಡಿಮೆಯಾಗಲಿದೆ. ಆದರೆ ಮುಂದೆ ಇನ್ನೊಂದು ಅಲೆ ಇದೆ. ಈಗಾಗಲೇ ಕೋಟ್ಯಂತರ ಜನರನ್ನು ಭೂಮಿಯಲ್ಲಿ ಹೂತಿದ್ದಾರೆ. ಅದೇ ವಿ ಷ ವಾಗಿ ಭೂಮಿಯಿಂದ ಹೊರಬರಲಿದೆ. ಜನರು ಹೋಗ ಹೋಗುತ್ತಲೇ ಬಿ ದ್ದು ಸಾ ಯು ವ ಕಾಯಿಲೆಯೊಂದು ಬರಲಿದೆ ಎಂಬ ಭ ಯಾ ನ ಕ ಭವಿಷ್ಯ ನುಡಿದಿರುವ ಅವರು, ಕರೊನಾ ಪೂರ್ಣವಾಗಿ ಹೋಗಲು ಹತ್ತು ವರ್ಷಗಳು ಬೇಕು ಎಂದಿದ್ದಾರೆ.

ಕುಂಭದಿ ಗುರು ಬರಲು ತುಂಬುವವು ಕೆರೆ ಕಟ್ಟೆ, ಪ್ರಳಯದ ಮಳೆ ಆಗಲಿದೆ, ಮಿಂಚಿನಿಂದ ದುರ್ಯೋಗ ಇದೆ, ಸಂಕ್ರಾಂತಿ ಆಶ್ವೀಜ ಮೇಲೆ ಜಗತ್ತಿನಲ್ಲಿ ಅ ಪಾ ಯ ಕಾ ರಿ ಘಟನೆ ನಡೆಯಲಿದೆ ಎಂದಿರುವ ಅವರು ಜಗತ್ತಿನಲ್ಲೇ ರಾಜಕೀಯ ವಿಪ್ಲವ ಆಗಲಿದೆ. ಅಲ್ಲದೆ ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉ ರು ಳ ಲಿವೆ, ಸಾಮೂಹಿಕ ಸಾ ವು ಗಳು ಸಂಭವಿಸಲಿವೆ ಎಂದು ಹೇಳಿದ್ದಾರೆ. ಇನ್ನು ಸ ತ್ತು ಹೂ ಳ ಲ್ಪಟ್ಟವರು ಕೂಡ ಮಾತನಾಡುತ್ತಾರೆ. ಅದನ್ನು ನೀವು ನೋಡಬಹುದು, ಆದರೆ ನೀವು ಅವರ ಜೊತೆ ಮಾತನಾಡಲು ಸಾಧ್ಯವಿಲ್ಲ. ಇಂಥ ಪ್ರೇ ತ‌ ಬಾಧೆ ಸ್ವಲ್ಪದಿನಗಳಲ್ಲೇ ಕಾಣಿಸಲಿರುವುದು. ಆದರೆ ಕರ್ನಾಟಕದಲ್ಲಿ ಅಷ್ಟು ತೊಂದರೆ ಆಗದು ಎಂದು ಅವರು ತಿಳಿಸಿದ್ದಾರೆ.

Advertisement
Share this on...