ಬಿಜೆಪಿ ಸಭೆಯಲ್ಲಿ ಜೈ ಶ್ರೀರಾಮ್ ಕೂಗಿದ್ದ ವ್ಯಕ್ತಿಗೆ ಮತಾಂಧರಿಂದ ಧಮಕಿ: ವಿಷಯ ತಿಳಿಯುತ್ತಲೇ ಈ ಯುವಕನ ಜೊತೆ ಯೋಗಿ ಆದಿತ್ಯನಾಥ್ ಮಾಡಿದ್ದೇನು ನೋಡಿ

in Kannada News/News 487 views

ಉತ್ತರಪ್ರದೇಶದ ಅಮಿತ್ ಶಾಹ್ ರ‌್ಯಾಲಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಮುಸ್ಲಿಂ ಯುವಕನಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ ಭದ್ರತೆ ಒದಗಿಸಿದೆ. ಡಿಸೆಂಬರ್ 4, 2021 ರಂದು ಸಹರಾನ್‌ಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ‌್ಯಾಲಿಯಲ್ಲಿ ಅಹ್ಸಾನ್ ರಾವ್ ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದ್ದರು. ಅಂದಿನಿಂದ ಆತನಿಗೆ ಇಸ್ಲಾಮಿಕ್ ಮತಾಂಧರಿಂದ ನಿರಂತರವಾಗಿ ಧಮಕಿಗಳು ಬರುತ್ತಲೇ ಇದ್ದವು.

Advertisement

ಇತ್ತೀಚೆಗೆ ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ಆಯೋಜಿಸಲಾಗಿದ್ದ ರ‌್ಯಾಲಿಯಲ್ಲಿ ಅಹ್ಸಾನ್ ರಾವ್ ಅವರು ಕೆಲವು ಘೋಷಣೆಗಳನ್ನು ಕೂಗಿದ್ದರು, ನಂತರ ಅವರಿಗೆ ನಿರಂತರ ಬೆದರಿಕೆಗಳು ಬರುತ್ತಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ತೋಮರ್ ಹೇಳಿದ್ದಾರೆ. ಈ ಸಂಬಂಧ ಅಹ್ಸಾನ್ ರಾವ್ ಅವರು ಸಹರಾನ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದು ಭದ್ರತೆಗೆ ಒತ್ತಾಯಿಸಿದ್ದರು. ಅಹಸಾನ್ ರಾವ್ ಅವರ ಕೋರಿಕೆಯ ಮೇರೆಗೆ ಜಿಲ್ಲಾಡಳಿತ ಅವರಿಗೆ ಗನರ್ (ಬಂದೂಕುಧಾರಿ ಭದ್ರತಾ ಸಿಬ್ಬಂದಿ) ಒದಗಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಈ ರ‌್ಯಾಲಿಯಲ್ಲಿ ಘೋಷಣೆಗಳನ್ನು ಕೂಗಿದ ನಂತರ  ಅಹ್ಸಾನ್ ರಾವ್ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಂದಿನಿಂದ ಕೆಲವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ತಿಳಿಸಿದ ಅವರು ಭದ್ರತೆಗಾಗಿ ಎಸ್‌ಎಸ್‌ಪಿ ಸಹರಾನ್‌ಪುರ ಅವರಿಗೆ ಅರ್ಜಿಯನ್ನು ಸಲ್ಲಿಸಿದರು. ಭಜರಂಗದಳದ ರಾಜ್ಯ ಸಂಚಾಲಕ ವಿಕಾಸ್ ತ್ಯಾಗಿ ಅಹ್ಸಾನ್‌ಗೆ ಬೆದರಿಕೆ ಮತ್ತು ಬೆದರಿಕೆ ಹಾಕುವವರ ವಿರುದ್ಧ ಭಾರತ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದೀಗ ಜಿಲ್ಲಾಡಳಿತ ಅಹಸಾನ್ ರಾವ್ ಭದ್ರತಾ ಸಿಬ್ಬಂದಿಯನ್ನು ಒದಗಿಸಿದೆ.

ರಾಷ್ಟ್ರಕ್ಕೆ ಮುಡಿಪಾಗಿರುವುದರ ಮೂಲಕ ದೇಶದ ಹಿತಾಸಕ್ತಿಯನ್ನು ತಾನು ಯಾವಾಗಲೂ ಪ್ರಧಾನವಾಗಿ ಪರಿಗಣಿಸುತ್ತೇನೆ ಮತ್ತು ಅಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಅಹ್ಸಾನ್ ರಾವ್ ಹೇಳುತ್ತಾರೆ. ಜೈ ಶ್ರೀರಾಮ್ ಘೋಷಣೆ ಕೂಗಿ ತಾನು ಯಾವುದೇ ಅಪರಾಧ ಮಾಡಿಲ್ಲ ಮತ್ತು ತಾನು ವಾಸಿಸುವ ದೇಶವನ್ನು ಹೊಗಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳುತ್ತಾರೆ. ಅವರು ಮುಂದೆ ಮಾತನಾಡುತ್ತ, “ನೋಡಿ ಭಗವಾನ್ ರಾಮನು ನಮ್ಮ ಪೂರ್ವಜ ಮತ್ತು ನಾವೆಲ್ಲರೂ ಶ್ರೀರಾಮನ ವಂಶಸ್ಥರು. ನನಗೆ ಜೈ ಶ್ರೀ ರಾಮ್ ಹೇಳುವುದರಲ್ಲಿ ಅಥವಾ ಭಾರತ್ ಮಾತಾ ಕೀ ಜೈ ಎಂದು ಹೇಳುವುದರಲ್ಲಿ ಯಾವುದೇ ತೊಂದರೆ ಇಲ್ಲ. ನಾವು ಯಾವ ದೇಶದಲ್ಲಿ ವಾಸಿಸುತ್ತಿದ್ದೇವೋ ಆ ದೇಶ ಜೈ ಜೈಕಾರ ಮಾಡಲೇಬೇಕು” ಎಂದಿದ್ದಾರೆ.

ಕಟ್ಟರಪಂಥೀಯ ಧಮಕಿಗಳಿಗೆ ತಲೆಕೆಡಿಸಿಕೊಳ್ಳದ ಯುವಕ ಅಹ್ಸಾನ್ ರಾವ್, ಶ್ರೀರಾಮನು ನಮ್ಮ ಪೂರ್ವಜ, ನಾನು ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕೀ ಜೈ’ ಎಂದು ಜಪಿಸಲು ಹಿಂಜರಿಯುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದನು.

ಅಹ್ಸಾನ್ ರಾವ್ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ವೈರಲ್ ಆದ ಬಳಿಕ ದೇವಬಂದ್‌ನ ಉಲೇಮಾ ಮುಫ್ತಿ ಅಸಾದ್ ಖಾಸ್ಮಿ ಇಸ್ಲಾಂನಲ್ಲಿ ಇಂತಹ ಘೋಷಣೆಗಳನ್ನು ಎತ್ತಲು ಯಾವುದೇ ಅವಕಾಶವಿಲ್ಲ ಎಂದು ಹೇಳುತ್ತಾರೆ. ಈ ವ್ಯಕ್ತಿಯು ಮೌಲಾನಾಗಳೆದುರು ಬಂದು ಕೈ ಮುಗಿಯಬೇಕು ಮತ್ತು ಅಲ್ಲಾಹನೆದುರು ಪಶ್ಚಾತ್ತಾಪ ಪಡಬೇಕು, ಏಕೆಂದರೆ ಅಂತಹ ಘೋಷಣೆಗಳನ್ನು ಎತ್ತುವ ಮೂಲಕ ಅವನು ಇಸ್ಲಾಂ ಧರ್ಮವನ್ನು ತೊರೆಯುತ್ತಾನೆ. ಇದೇ ವೇಳೆ ನಮ್ಮ ದುನಿಯಾವಿ ಆಕಾವೋಂ (ಲೌಕಿಕ ಯಜಮಾನ) ರನ್ನು ಮೆಚ್ಚಿಸಲು ಇಂತಹ ಘೋಷಣೆಗಳನ್ನು ಕೂಗಬಾರದು ಎಂದರು. ಅಹ್ಸಾನ್‌ ಕ್ಷಮೆ ಕೇಳದಿದ್ದರೆ ಆತನನ್ನ ಇಸ್ಲಾಂನಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರು.

ಅದೇ ಸಮಯದಲ್ಲಿ, ಇಸ್ಲಾಂನಿಂದ ಉಲೇಮಾಗಳು ಹೊರಹಾಕುವ ವಿಷಯದ ಬಗ್ಗೆ ಮಾತನಾಡಿದ ಯುವಕ, “ಅವರಿಗೆ ಅವರದೇ ಆದ ಕೆಲಸವಿದೆ, ಆದರೆ ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಯಾರು ಏನು ಮಾಡ್ತಿದಾರೆ, ಮಾತಾಡ್ತಿದಾರೆ ಅನ್ನೋದು ನನ್ನ ಅಲ್ಲಾಹನಿಗೆ ತಿಳಿದಿದೆ. ಇದರಿಂದ ನನಗೇನೂ ವ್ಯತ್ಯಾಸವಾಗಲ್ಲ. ನನಗೆ ತಿಳಿದ ಮಟ್ಟಿಗೆ ದಾರುಲ್ ನಿಂದ ಇದುವರೆಗೆ ಅಂಥದ್ದೇನೂ ಬೆಳಕಿಗೆ ಬಂದಿಲ್ಲ. ಯಾರಾದರೂ ಬಂದರೆ ಆಗ ನಾನು ಮಾತನಾಡುತ್ತೇನೆ” ಎಂದಿದ್ದನು.

ಅಹ್ಸಾನ್ ರಾವ್ ಅವರಿಗೆ ಇತರ ಮುಸ್ಲಿಂ ಮೂಲಭೂತವಾದಿಗಳಿಂದ ಬೆದರಿಕೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು, ನಂತರ ಅವರು ರಕ್ಷಣೆಗಾಗಿ ವಿನಂತಿಸಿದ್ದರು.

Advertisement
Share this on...