“ಇಡೀ ದೇಶದಲ್ಲಿನ ಮದರಸಾಗಳನ್ನ ಬಂದ್ ಮಾಡುತ್ತೇವೆ”: ಠಾಕೂರ್ ರಘುರಾಜ್ ಸಿಂಗ್, ಸಚಿವ

in Kannada News/News 245 views

2022ರಲ್ಲಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ, ಪಕ್ಷದ ಕೆಲವು ನಾಯಕರು ತಮ್ಮ ಹೇಳಿಕೆಗಳ ಮೂಲಕ ಚರ್ಚೆಯಲ್ಲಿರಲಿ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸಚಿವರೊಬ್ಬರು ಮದರಸಾಗಳ ಕುರಿತು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಸಚಿವರು ಹೇಳಿಕೆ ನೀಡಿದ ಬಳಿಕ ಕೆಲವರು ಇದನ್ನ ಟೀಕಿಸುತ್ತಿರೋದು ಕಂಡು ಬರುತ್ತಿದೆ. ಈ ಸುದ್ದಿಯ ಮೂಲಕ ಉತ್ತರ ಪ್ರದೇಶದ ರಾಜ್ಯ ಸಚಿವ ಠಾಕೂರ್ ರಘುರಾಜ್ (ರಘುರಾಜ್ ಸಿಂಗ್) ತಮ್ಮ ಹೇಳಿಕೆಯಲ್ಲಿ ಏನು ಹೇಳಿದ್ದಾರೆಂದು ನಾವು ನಿಮಗೆ ಹೇಳುತ್ತೇವೆ. ಬನ್ನಿ ಈ ಬಗೆಗಿನ ಸುದ್ದಿಯನ್ನು ವಿವರವಾಗಿ ತಿಳಿಸುತ್ತೇವೆ.

Advertisement

ಯಾರು ಈ ಠಾಕೂರ್ ರಘುರಾಜ್ ಸಿಂಗ್?

ಠಾಕೂರ್ ರಘುರಾಜ್ ಸಿಂಗ್ ಅವರು ಉತ್ತರ ಪ್ರದೇಶದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿದ್ದಾರೆ. ರಘುರಾಜ್ ಸಿಂಗ್ ಮುಸ್ಲಿಮರ ಬಗ್ಗೆ ಆಗಾಗ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಈ ಬಾರಿ ಅವರು ಮದರಸಾಗಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ನಿಮಗೆ ತಿಳಿದಿರುವಂತೆ, ಈ ಮಸರಸಾಗಳು ಈಗ ದೇಶದಾದ್ಯಂತ ಎಲ್ಲಿ ನೋಡಿದರೂ ಕಂಡುಬರುತ್ತವೆ. ಮದರಸಾಗಳಲ್ಲಿ, ಒಂದು ಸಮುದಾಯದ ಜನರು ಶಿಕ್ಷಣ ಪಡೆಯಲು ಹೋಗುತ್ತಾರೆ. ಮದರಸಾದಲ್ಲಿ ಇಸ್ಲಾಮಿಕ್ ಶಿಕ್ಷಣ ನೀಡಲಾಗುತ್ತದೆ. ಇದೇ ಕಾರಣಕ್ಕೆ ರಘುರಾಜ್ ಸಿಂಗ್ ಅವರು ಮದರಸಾಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.

ದೇವರು ಅವಕಾಶ ನೀಡಿದರೆ ಎಲ್ಲಾ ಮದರಸಾಗಳನ್ನೂ ಬಂದ್ ಮಾಡಿಸುತ್ತೇವೆ

ದೇವರು ಅವಕಾಶ ಕೊಟ್ಟರೆ ರಾಜ್ಯದಲ್ಲಿ ಎಲ್ಲ ಮದರಸಾಗಳನ್ನೂ ಬಂದ್ ಮಾಡಿಸುತ್ತೇನೆ ಎಂದು ಉತ್ತರ ಪ್ರದೇಶದ ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲ ಮದರಸಾಗಳಲ್ಲಿ ನಡೆಯುತ್ತಿರುವ ಅಧ್ಯಯನಗಳ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ. ಮದರಸಾಗಳಲ್ಲಿ ಒಂದೇ ರೀತಿಯ ಶಿಕ್ಷಣ ನೀಡಲಾಗುತ್ತದೆ ಎಂದು ರಘುರಾಜ್ ಸಿಂಗ್ ಹೇಳಿದ್ದಾರೆ. ಬುರ್ಹಾನ್ ವಾನಿಯಂತಹವರು ಇಂತಹ ಮದರಸಾಗಳಿಂದಲೇ ಹೊರಬಂದವರು. ಎಲ್ಲಿಯವರೆಗೆ ದೇಶದಲ್ಲಿ ಮದರಸಾಗಳು ಬ್ಯಾನ್ ಆಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಅಸ್ಥಿರತೆ ಇರುತ್ತದೆ ಎಂದು ಹೇಳಿದ್ದಾರೆ.

250 ರಿಂದ 22000 ಕ್ಕೇರಿದ ಮದರಸಾಗಳ ಸಂಖ್ಯೆ

ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಕೇವಲ 250 ಮದರಸಾಗಳಿದ್ದರೆ ಈಗಿನ ಸಮಯಕ್ಕೆ ಅವುಗಳು 22000ಕ್ಕೆ ಏರಿಕೆಯಾಗಿವೆ ಎಂದರು. ಮನ್ನಾನ್ ವಾನಿ ಕಾಶ್ಮೀರದ ಮದರಸಾದಿಂದಲೇ ಶಿಕ್ಷಣ ಪಡೆದಿದ್ದ ಎಂದು ಅವರು ಹೇಳಿದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಬಗ್ಗೆಯೂ ಅವರು ಅನೇಕ ವಿಷಯಗಳನ್ನು ಹೇಳಿದ್ದಾರೆ. ಶೀಘ್ರದಲ್ಲೇ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಏಕೆಂದರೆ ಅಲ್ಲಿನ ಸರ್ಕಾರ ಕೇರಳದ ಜನರೊಂದಿಗೆ ಸರಿಯಗಿ ವರ್ತಿಸುತ್ತಿಲ್ಲ ಎಂದು ಹೇಳಿದ್ದಾರೆ.

Advertisement
Share this on...