ಈ ಇಬ್ಬರು ಬಿತ್ತಿದ್ದ ನಕ್ಸಲ್ ಬೀಜ‌ ಇಂದು ದೇಶದಲ್ಲಿ ಹೆಮ್ಮರವಾಗಿ ನಿಂತಿದೆ ನೋಡಿ

in Kannada News/News/ಕನ್ನಡ ಮಾಹಿತಿ 239 views

ಪ್ರತಿದಿನ ಒಂದಿಲ್ಲೊಂದು ನ-ಕ್ಸ-ಲ-ರ ಹಿಂ-ಸಾ-ತ್ಮ-ಕ ಚಟುವಟಿಕೆಗಳು ಮತ್ತು ಸೈ-ನಿ-ಕ-ರ ನಡುವೆ ಮುಖಾಮುಖಿಯಾದ ಘಟನೆಗಳ ಬಗ್ಗೆ ನಮಗೆ ಕೇಳಲು ಸಿಗುತ್ತವೆ. ಕಳೆದ 10 ವರ್ಷಗಳಲ್ಲಿ, ಛತ್ತೀಸ್‌ಗಢದಲ್ಲಿ ಒಟ್ಟು 3722 ನ-ಕ್ಸ-ಲೈ-ಟ್ ದಾ-ಳಿ-ಗಳು ನಡೆದಿದ್ದು, ಇದರಲ್ಲಿ 489 ಜವಾನರು ಹು-ತಾ-ತ್ಮ-ರಾಗಿದ್ದು ಮತ್ತು ಒಟ್ಟು 656 ನ-ಕ್ಸ-ಲ-ರು ಕೂಡ ಸಾ-ವ-ನ್ನ-ಪ್ಪಿ-ದ್ದಾ-ರೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ 736 ಸಾಮಾನ್ಯ ನಾಗರಿಕರೂ ಪ್ರಾ-ಣ ಕ-ಳೆ-ದು-ಕೊಂಡಿದ್ದಾರೆ.

ಇದೀಗ, ಛತ್ತೀಸ್‌ಗಢದಲ್ಲಿ ಅಂತಹುದೇ ನ-ಕ್ಸ-ಲೈ-ಟ್ ದಾ-ಳಿ ನಡೆದಿದ್ದು, ಅದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ದಾ-ಳಿ-ಯಲ್ಲಿ ದೇಶವು ತನ್ನ 22 ಸೈ-ನಿ-ಕ-ರನ್ನು ಕಳೆದುಕೊಂಡಿತು.  ಬಿಜಾಪುರದಲ್ಲಿ ಹೊಂ-ಚು ಹಾಕಿ ಕೂತಿದ್ದ 200 ರಿಂದ 300 ನ-ಕ್ಸ-ಲ-ರು ಈ ಕಾರ್ಯಾಚರಣೆಯಲ್ಲಿ ಸೈ-ನಿ-ಕ-ರ ಮೇಲೆ ದಾ-ಳಿ ನಡೆಸಿದರು, ಇದರಲ್ಲಿ ಸೈ-ನಿ-ಕ-ರು ಹುತಾತ್ಮರಾಗಿದ್ದರು. ಈ ಪ್ರಕರಣವು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ ಮತ್ತು ನ-ಕ್ಸ-ಲ-ರ ವಿ-ರು-ದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ‌‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನ-ಕ್ಸ-ಲಿ-ಸಂ ಹೇಗೆ ಮತ್ತು ಎಲ್ಲಿಂದ ಶುರುವಾಯಿತು ಎಂದು ಇಂದು ನಾವು ಈ‌ ಪೋಸ್ಟ್ ನಲ್ಲಿ ನಿಮಗೆ ತಿಳಿಸಲಿದ್ದೇವೆ.

Advertisement

– ನಕ್ಸಲ್ ಎಂಬ ಪದವು ಪಶ್ಚಿಮ ಬಂಗಾಳದ ನಕ್ಸಲ್ ವಾಡಿ ಎಂಬ ಸಣ್ಣ ಹಳ್ಳಿಯಿಂದ ಹುಟ್ಟಿಕೊಂಡಿತು. 1967 ರಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಚಾರು ಮಜುಂದಾರ್ ಮತ್ತು ಆತನ ಸಹಚರ ಕಾನು ಸಾನ್ಯಾಲ್ ಸರ್ಕಾರದ ಆಡಳಿತದ ವಿ-ರು-ದ್ಧ ಸ-ಶ-ಸ್ತ್ರ ಆಂದೋಲನವನ್ನು ಶುರು ಮಾಡಿದರು. ಚಾರು ಮಜುಂದಾರ್ ಮತ್ತು ಕಾನು ಸಾನ್ಯಾಲ್ ಚೀನಾದ ಕಮ್ಯುನಿಸ್ಟ್ ನಾಯಕ ಮಾವೋತ್ಸೋ ತ್ಸುಂಗ್ ನಿಂದ ಪ್ರಭಾವಿತರಾಗಿದ್ದರು. ಅವರ ಪ್ರಕಾರ ಭಾರತೀಯ ರೈತರು ಹಾಗು ಕಾರ್ಮಿಕರ ದು-ರ್ಗ-ತಿ-ಗೆ ಸರ್ಕಾರದ ತಪ್ಪು ನೀತಿಗಳೇ ಕಾರಣವೆಂದು ನಂಬಿದ್ದರು. ರೈತರು ಮತ್ತು ಕಾರ್ಮಿಕರೊಂದಿಗಿನ ಅಸಮಾನತೆ, ನ್ಯಾಯಸಮ್ಮತತೆಯನ್ನು ಸ-ಶ-ಸ್ತ್ರ ಚ-ಳು-ವ-ಳಿ-ಯಿಂದ ಮಾತ್ರ ತೊಡೆದುಹಾಕಬಹುದು ಎಂಬುದು ಅವರ ವಾದವಾಗಿತ್ತು.

– 1967 ರಲ್ಲಿ, ಕೆಲವು ನ-ಕ್ಸ-ಲ-ರು ತಮ್ಮನ್ನು ಔಪಚಾರಿಕವಾಗಿ ಕಮ್ಯುನಿಸ್ಟ್ ಪಕ್ಷದಿಂದ ಬೇರ್ಪಡಿಸಿಕೊಂಡರು ಮತ್ತು ಒಟ್ಟಾಗಿ ಅಖಿಲ ಭಾರತ ಸಮನ್ವಯ ಸಮಿತಿಯನ್ನು ರಚಿಸಿದರು. ಅದರ ನಂತರ ಈ ಬಂ-ಡು-ಕೋ-ರ-ರು ಒಗ್ಗೂಡಿ ಸರ್ಕಾರದ ವಿ-ರು-ದ್ಧ ಸ-ಶ-ಸ್ತ್ರ ಆಂದೋಲನವನ್ನು ನಡೆಸಿದರು.

– ದೀಪೇಂದ್ರ ಭಟ್ಟಾಚಾರ್ಯ ನೇತೃತ್ವದಲ್ಲಿ 1968 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಮಾರ್ಕ್ಸಿಸಂ ಆ್ಯಂಡ್ ಲೆನಿನಿಸಂ (ಸಿಪಿಎಂಎಲ್) ರಚನೆಯಾಯಿತು. ಅವರು ಮಾರ್ಕಸ್ ಮತ್ತು ಲೆನಿನ್‌ರ ಅಭಿಮಾನಿಯಾಗಿದ್ದರು ಮತ್ತು ಅವರಿಬ್ಬರ ತತ್ವಗಳ ಮೇಲೆಯೇ ಕೆಲಸ ಮಾಡಲು ಪ್ರಾರಂಭಿಸಿದರು.

– 1969 ರಲ್ಲಿ, ಚಾರು ಮಜುಂದಾರ್ ಮತ್ತು ಕಾನು ಸಾನ್ಯಾಲ್ ಭೂಸ್ವಾಧೀನಕ್ಕಾಗಿ ಭಾರತದಾದ್ಯಂತ ಸರ್ಕಾರದ ವಿ-ರು-ದ್ಧ ಆಂದೋಲನವನ್ನು ಪ್ರಾರಂಭಿಸಿದರು. ಭೂ-ಸ್ವಾ-ಧೀ-ನ-ಕ್ಕೆ ಮೊದಲ ಧ್ವನಿ ಕೇಳಿ ಬಂದಿದ್ದು ಇದೇ ನಕ್ಸಲ್ವಾಡಿಯಿಂದಲೇ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು. ಅದರ ನಂತರ 1977 ರಲ್ಲಿ ಕಮ್ಯುನಿಸ್ಟರು ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು ಮತ್ತು ಜ್ಯೋತಿ ಬಸು ಮುಖ್ಯಮಂತ್ರಿಯಾದರು.

– ಸಾಮಾಜಿಕ ಉನ್ನತಿಗಾಗಿ ಎಂದು ಪ್ರಾರಂಭವಾದ ಚಳುವಳಿಗಳು ಕ್ರಮೇಣ ರಾಜಕೀಯದತ್ತ ತಮ್ಮ ನಿಲುವನ್ನು ಬದಲಾಯಿಸಿದವು. ಚಳುವಳಿ ಶೀಘ್ರದಲ್ಲೇ ತನ್ನ ಉದ್ದೇಶಗಳಿಂದ ವಿಮುಖವಾಯಿತು, ಚಳುವಳಿ ಬಿಹಾರವನ್ನು ತಲುಪಿದಾಗ, ಅದು ಜ-ನಾಂ-ಗೀ-ಯ ವರ್ಗದ ಯು-ದ್ಧ-ವಾಗಿ ಮಾರ್ಪಟ್ಟಿತು. ಅಲ್ಲಿ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರ ಯು-ದ್ಧ-ವು ಹಿಂ-ಸೆ-ಯ ಸ್ವರೂಪವನ್ನು ಪಡೆದುಕೊಂಡಿತು.

– ಹಿಂ-ಸಾ-ತ್ಮ-ಕ ಆಂದೋಲನದಿಂದಾಗಿ 1972 ರಲ್ಲಿ ಚಾರು ಮಜುಂದಾರ್‌ನ್ನ ಬಂ-ಧಿ-ಸ-ಲಾಯಿತು, ನಂತರ ಆತ ಜೈ-ಲಿನಲ್ಲಿ ಹತ್ತನೇ ದಿನಕ್ಕೆ ಸಾ-ವ-ನ್ನ-ಪ್ಪಿ-ದ-ನು. ಆತನ ಸಹಚರ ಕಾನು ಸಾನ್ಯಾಲ್ ಮಾರ್ಚ್ 23, 2010 ರಂದು ರಾಜಕೀಯಕ್ಕೆ ಬ-ಲಿ-ಯಾಗಿ ಆ-ತ್ಮ-ಹ-ತ್ಯೆ ಮಾಡಿಕೊಂಡನು.

– ನ-ಕ್ಸ-ಲಿ-ಸಂ ಮುಖ್ಯವಾಗಿ ಆಂಧ್ರಪ್ರದೇಶ, ಛತ್ತೀಸ್‌ಗಢ್, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಸಕ್ರಿಯವಾಗಿದೆ. ಈ ರಾಜ್ಯಗಳಿಂದ ಪ್ರತಿದಿನ ನ-ಕ್ಸ-ಲಿ-ಸಂ-ಗೆ ಸಂಬಂಧಿತ ಘಟನೆಗಳ ಸುದ್ದಿ ಬರುತ್ತಲೇ ಇರುತ್ತವೆ.

– Vinod Hindu Nationalist

Advertisement
Share this on...