“ಈ ಸಿನೆಮಾ ಸೂಪರ್ ಹಿಟ್ ಆಗಲಿದೆ, ಹೀರೋ ಜೊತೆ ಮಲಗಿದರೆ ನಿನಗೆ ಚಾನ್ಸ್ ಸಿಗುತ್ತೆ, ಏನಂತೀಯ?” ಖ್ಯಾತ ನಟನ ಜೊತೆ ಮಲಗಲು ಹೇಳಿದ ನಿರ್ದೇಶಕ

in FILM NEWS/Kannada News/News 561 views

ಮುಂಬೈ: ಸಿನಿಮಾ ಚಾನ್ಸ್​ ಕೊಡುವುದಾಗಿ ಹೇಳಿ ಅವರನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಳ್ಳುವ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಪ್ರಸಿದ್ಧ ನಿರ್ದೇಶಕರೊಬ್ಬರು ನಟಿಗೆ ಸಿನಿಮಾದಲ್ಲಿ ಅವಕಾಶ ಕೊಡಲು ಹೀರೋ ಜತೆ ಮಲಗಲು ಹೇಳಿದ್ದರೆಂದು ಇದೀಗ ಸ್ವತಃ ನಟಿಯೇ ಬಾಯ್ಬಿಟ್ಟಿದ್ದಾರೆ.

ನಟಿ ಕಿಶ್ವರ್ ಮರ್ಚೆಂಟ್ ಈ ರೀತಿಯ ಆರೋಪವೊಂದನ್ನು ಮಾಡಿದ್ದಾರೆ. ಗರ್ಭಿಣಿಯಾಗಿರುವ ಅವರನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಸಂದರ್ಶನ ಮಾಡುವಾಗ ಅವರು ಈ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅದೊಂದು ದೊಡ್ಡ ಸಿನಿಮಾವಾಗಿತ್ತು. ಪ್ರಸಿದ್ಧ ಡೈರೆಕ್ಟರ್​ ಪ್ರಸಿದ್ಧ ಹೀರೋ ಜತೆಯೇ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಆ ಸಿನಿಮಾದಲ್ಲಿ ನಾನು ನಟಿಸುವುದಕ್ಕೆ ಹೀರೋ ಜತೆ ಮಲಗಬೇಕು ಎಂದೂ ಅವರು ಹೇಳಿದ್ದರು. ಸಿನಿಮಾ ಬಗ್ಗೆ ಮೀಟಿಂಗ್​ ಮಾಡಲು ಹೋದಾಗ ಆ ರೀತಿ ಹೇಳಿದರು. ಆದರೆ ನಾನು ಆ ಆಫರ್​ ಅನ್ನು ಸ್ವೀಕರಿಸದೆ ಹಾಗೆಯೇ ಎದ್ದು ಬಂದೆ ಎಂದು ಅವರು ಹೇಳಿದ್ದಾರೆ.

ಸಿನಿಮಾ ಕ್ಷೇತ್ರ ಪೂರ್ತಿಯಾಗಿ ಅದೇ ರೀತಿ ಇದೆ ಎಂದು ಹೇಳಲಾಗದು. ಹಾಗಂತ ಈ ರೀತಿ ಆಗುವುದೇ ಇಲ್ಲವೆಂದೂ ಹೇಳಲಾಗದು ಎಂದು ನಟಿ ಹೇಳಿದ್ದಾರೆ. ಅಂದ ಹಾಗೆ ಆ ಸಿನಿಮಾದ ಮೀಟಿಂಗ್​ನಲ್ಲಿ ನನ್ನ ತಾಯಿಯೂ ನನ್ನ ಜತೆ ಇದ್ದರು ಎಂದು ಅವರು ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನನ್ನ ಜೊತೆ ಮಲಗಿದರೆ ನೀನಂತೀಯೋ ಅದನ್ನ ಕೊಡ್ತೀನಿ ಎಂದ ಪ್ರೊಫೆಸರ್

ಚೆನ್ನೈ: ಇಂದು ಪ್ರತಿಯೊಬ್ಬರಿಗೂ ಸಹ ಸಾಮಾಜಿಕ ಜಾಲತಾಣ ಪ್ರವೇಶ ಮುಕ್ತವಾಗಿದೆ. ಹೀಗಾಗಿ ಸಣ್ಣ ತಪ್ಪು ಮಾಡಿದರೂ ಸೆಲೆಬ್ರಿಟಿಗಳು ಟ್ರೋಲ್​ ಆಗುವುದು ಸಾಮಾನ್ಯವಾಗಿದೆ. ಅಲ್ಲದೆ, ಕೆಲವೊಮ್ಮೆ ನೆಟ್ಟಿಗರಿಂದ ಮುಜುಗರ ಸಹ ಅನುಭವಿಸುತ್ತಾರೆ. ಇಂಥಹ ಸನ್ನಿವೇಶಗಳನ್ನು ಸೆಲೆಬ್ರಿಟಿಗಳು ಹಂಚಿಕೊಳ್ಳುವುದು ಸಹ ಇದೇ ಜಾಲತಾಣ ವೇದಿಕೆಯಲ್ಲೆ.

ತಮಿಳು ನಟಿ ಸೌಂದರ್ಯ ನಂದಕುಮಾರ್​ ಅವರು ಪ್ರಾಧ್ಯಾಪಕರೊಬ್ಬರಿಂದ ಕಿರುಕುಳ ಅನುಭವಿಸಿದ್ದಾರೆ. ತಾನೊಬ್ಬ ಲೆಕ್ಚರರ್​ ಎಂದು ಇನ್​​ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಕೆಟ್ಟದಾಗಿ ಮಾತನಾಡುವ ಮೂಲಕ ನಟಿಗೆ ಕಿರುಕುಳ ನೀಡಿದ್ದಾರೆ.

ನೀನು ನನ್ನೊಂದಿಗೆ ಮಲಗುವೆಯಾ? ಮಲಗುವುದಾದರೆ ನೀನು ಏನು ಕೇಳಿದರೂ ಕೊಡುತ್ತೇನೆ. ನೀನು ನನ್ನೊಂದಿಗೆ ಮಲಗಬೇಕು ಎಂದು ಲೆಕ್ಚರರ್​ ಮೆಸೇಜ್​ ಮಾಡಿರುವುದಾಗಿ ನಟಿ ಸೌಂದರ್ಯ ತಿಳಿಸಿದ್ದಾರೆ. ಅಂತಹ ಸಂದರ್ಭದಲ್ಲಿ ನನಗೆ ಏನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯಲಿಲ್ಲ ಎಂದಿದ್ದಾರೆ,

ಆದಾಗ್ಯೂ ಕೊನೆಯಲ್ಲಿ ಆತನ ನಡೆಯನ್ನು ಖಂಡಿಸಿರುವ ನಟಿ ಸೌಂದರ್ಯ ಪೊಲೀಸರು ಇಂತವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು. ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಲ್ಲಿರುವವರನ್ನು ಪೊಲೀಸರು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.

ಉಪನ್ಯಾಸಕರು ತಾವು ಕೆಲಸ ಮಾಡುವ ಕಾಲೇಜಿನಲ್ಲಿಯೂ ಇದನ್ನೇ ಹೇಳುತ್ತಾರೆಂದು ತಿಳಿದಾಗ ಸೌಂದರ್ಯ ನಂದಕುಮಾರ್ ಶಾಕ್​ ಆಗಿದೆ. ಜವಬ್ದಾರಿಯುತ ವೃತ್ತಿಯಲ್ಲಿರುವ ವ್ಯಕ್ತಿ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಎಂದು ಪ್ರಶ್ನಿಸಿರುವ ಸೌಂದರ್ಯ, ಆತ ಮಾಡಿರುವುದು ದೊಡ್ಡ ತಪ್ಪು ಎಂದಿದ್ದಾರೆ. ಅನೇಕ ಸಿನಿಮಾ ಮತ್ತು ಟಿವಿ ಸೀರಿಯಲ್​ಗಳಲ್ಲಿ ಸೌಂದರ್ಯ ನಟಿಸಿದ್ದಾರೆ.

ಮುಂದಿನ ಸುದ್ದಿ: ಹೋಟೆಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಈಗ ಬಹು ಬೇಡಿಕೆ ಖ್ಯಾತ ನಟ.. ಇವರ‌್ಯಾರು ಗೊತ್ತಾ?

ನಮಸ್ತೆ ಸ್ನೇಹಿತರೆ, ತುಂಬಾ ಕಷ್ಟದಿಂದ ಬಂದು ಸಿನಿಮಾ ರಂಗದಲ್ಲಿ ಸಾಧನೆಯ ಶಿಖರವೇರಿದ ಅದೆಷ್ಟೋ ನಟರು ನಮ್ಮ ಕಣ್ಣ ಮುಂದೆ ಬರುತ್ತಾರೆ.. ಈ ನಟ ಕೂಡ ತನಗೆ ಎಷ್ಟೇ ಕಷ್ಟವಿದ್ದರೂ.. ನಟನೆಯ ಮೇಲೆ ಆಸಕ್ತಿ ಕಳೆದು ಕೊಳ್ಳಲಿಲ್ಲ. ಮುಂದೊಂದು ದಿನ ತಾನೊಬ್ಬ ದೊಡ್ಡ ನಟನಾಗಬೇಕು, ತನ್ನ ನಟನೆಯನ್ನು ನೋಡಿ ಎಲ್ಲರೂ ಚಪ್ಪಾಳೆ ತಟ್ಟಬೇಕು ಎಂಬ ಕನಸು ಕಂಡರು. ಅತಿಯಾದ ಕಷ್ಟಗಳ ನಡುವೆಯೂ ತನ್ನ ಕನಸನ್ನ ನನಸಾಗಿಸಿಕೊಂಡರು.. ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುವ ನಟ ನಾಸರ್. ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟಗಳನ್ನು ನೋಡಿದ ನಾಸರ್ ನಾನೊಬ್ಬ ದೊಡ್ಡ ನಟನಾಗಬೇಕೆಂದು ಕನಸು ಕಂಡರು..

ನಟನಾಗುವ ಆಸೆ ಹೊತ್ತು ನಾಸರ್ ಮದ್ರಾಸ್ ನ ಒಂದು ಆ್ಯಕ್ಟಿಂಗ್ ಸ್ಕೂಲ್ ಗೆ ಸೇರಿದರು. ಈ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಾಸರ್ ಅವರ ಸೀನಿಯರ್ ಆಗಿದ್ದರು.. ತಮ್ಮ ಮನೆಯಲ್ಲಿ ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡಲಾಗದೇ ನಾಸರ್ ತಾಜ್ ಹೋಟೆಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಕೆಲಸ ಮಾಡಿಕೊಂಡೆ ಆ್ಯಕ್ಟಿಂಗ್ ಕಲಿತರು.. ಸಿನಿಮಾದಲ್ಲಿ ನಟಿಸುವ ಅವಕಾಶಗಳು ಪಡೆಯಲು ನಾಸರ್ ಹಲವಾರು ನಿರ್ದೇಶಕರ ಬಳಿ ಅಲೆದರು. ಆದರೆ ಯಾರು ಕೂಡ ಅವಕಾಶಗಳನ್ನು ನೀಡಲಿಲ್ಲ.. ನಂತರ ಏಗೋ ಕೊನೆಗೆ ನಾಸರ್ ಅವರಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಸಿಗುತ್ತದೆ.

ನಂತರದಲ್ಲಿ ನಾಸರ್ ಅವರಿಗೆ ತಮಿಳಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ರವರ ಪರಿಚಯವಾಗುತ್ತದೆ.. ಕೆ ಬಾಲಚಂದರ್ ರವರು ತಮ್ಮ ಸಿನಿಮಾ ಒಂದರಲ್ಲಿ ನಾಸರ್ ಅವರಿಗೆ ನಟಿಸಲು ಅವಕಾಶ ನೀಡುತ್ತಾರೆ. ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಂಡ ನಾಸರ್ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟರಾಗಿ ಬೆಳೆದರು.. ನಂತರ ನಿರ್ದೇಶನ, ನಿರ್ಮಾಣಕ್ಕು ಇಳಿದ ನಾಸರ್ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದರು. ಆದರೆ ಆ ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣದೇ.. ನಾಸರ್ ಕೈ ಖಾಲಿ ಮಾಡಿಕೊಂಡರು. ಮತ್ತೆ ಅಭಿನಯದ ಕಡೆಗೆ ಪೂರ್ತಿ ವಾಲಿದ ನಾಸರ್ ಅವರು ಈ ದಿನ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಅದ್ಬುತ ಪೋಷಕ ನಟರಾಗಿ ಬೆಳೆದಿದ್ದಾರೆ‌‌..

Advertisement
Share this on...