ಉಳುಮೆ ಮಾಡುವ ಸಮಯದಲ್ಲಿ ಸಿಕ್ತು ಪುರಾತನ ಕಾಲದ ಈ ವಸ್ತುಗಳಿಂದ ತುಂಬಿದ್ದ ಕಲಶ: ದಂಗಾದ ಅಧಿಕಾರಿಗಳು

in Uncategorized 8,610 views

ಸ್ನೇಹಿತರೇ, ಉತ್ಖನನದ ಸಮಯದಲ್ಲಿ ಹಳೆಯ ವಸ್ತುಗಳು ಸಿಕ್ಕಿವೆ ಎಂಬ ಸುದ್ದಿ ಅನೇಕ ಸ್ಥಳಗಳಲ್ಲಿ ಕೇಳಿಬರುತ್ತಲೇ ಇರುತ್ತವೆ, ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಹೊಲದಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ಸಿಕ್ಕ ಕಲಶ ಸಿಕ್ಕಿದ್ದು ಇದನ್ನ ಲೂ-ಟಿ ಮಾಡಲು ಜನ ನೀ ಮುಂದು ತಾ ಮುಂದು ಎಂದು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.

Advertisement

ಈ ಪ್ರಕರಣ ಬೆಳಕಿಗೆ ಬಂದಿರುವುದು ಉತ್ತರಪ್ರದೇಶದ ಅಮರೋಗಾ ಜಿಲ್ಲೆಯಲ್ಲಿ. ಅಮರೋಗಾದಲ್ಲಿ ಗಂಗೇಶ್ವರಿ ಬಳಿಯ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ಸಂದರ್ಭದಲ್ಲಿ ಕಲಶವೊಂದು ಪತ್ತೆಯಾಗಿದೆ. ಈ ಸುದ್ದಿ ತಿಳಿಯುತ್ತಲೇ ಹತ್ತಿರದ ಹಳ್ಳಿಗಳ ಜನರು ಸ್ಥಳಕ್ಕೆ ದೌಡಾಯಿಸುತ್ತಿದ್ದು ಈ ಕಲಶದಲ್ಲಿನ ನಾಣ್ಯಗಳನ್ನು ಲೂಟಿ ಮಾಡಲು ಪೈಪೋಟಿ ಏರ್ಪಟ್ಟಿತು. ಈ ಪ್ರದೇಶಕ್ಕೆ ತಲುಪಿದ ಪ್ರತಿಯೊಬ್ಬರೂ ಕಲಶದಲ್ಲಿನ ನಾಣ್ಯಗಳನ್ನು ಪಡೆಯಲು ಪ್ರಯತ್ನಿಸಿದರು, ಅದಕ್ಕಾಗಿಯೇ ಇಲ್ಲಿ ನಾಣ್ಯಗಳನ್ನು ಲೂಟಿ ಮಾಡಲು ಜನಸಮೂಹ ಜಮಾಯಿಸಿತು.
ಆದರೆ, ಈ ಸುದ್ದಿ ಸ್ಥಳೀಯ ಪೊ-ಲೀ-ಸ-ರಿಗೆ ವರದಿಯಾದ ಕೂಡಲೇ ಪೊ-ಲೀ-ಸ-ರು ಅಲ್ಲಿಗೆ ತಲುಪಿದರು, ಆದರೆ ಪೊ-ಲೀ-ಸ-ರು ತಲುಪುವ ಹೊತ್ತಿಗೆ ಕಲಶ್ ಮತ್ತು ಗ್ರಾಮದ ಜನರು ನಾಪತ್ತೆಯಾಗಿದ್ದಾರೆ. ಅಲ್ಲಿಂದ ಯಾವುದೇ ಕಲಶ ಮತ್ತು ನಾಣ್ಯಗಳು ಪೊಲೀಸರಿಗೆ ಸಿಕ್ಕಿಲ್ಲ.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಈ ಜಮೀನು ಶೌಕತ್ ಅಲಿ ಎಂಬ ರೈತನಿಗೆ ಸೇರಿದ್ದಾಗಿದೆ. ಹಲವಾರು ವರ್ಷಗಳಿಂದ ಈ ಜಮೀನಿನಲ್ಲಿ ಕ್ರಷರ್ ಕೆಲಸ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಕ್ರಷರ್ ಕೆಲಸ ನಿಂತು ಹೋಗಿತ್ತು. ಹೊಲದಲ್ಲಿ ಸಾಸಿವೆ ಬೆಳೆ ಬೆಳೆಯಲು ಬಿತ್ತನೆಗಾಗಿ ಶನಿವಾರ ಚಾಲಕ ಹೊಲಕ್ಕೆ ತಲುಪಿದ. ಉಳುಮೆ ಮಾಡುವಾಗ, ಭೂಮಿಯಲ್ಲಿ ಮಣ್ಣಿನಿಂದ ಆವೃತವಾಗಿದ್ದ ಕಲಶ ಸಿಕ್ಕಿದ್ದು ಆ ಕಲಶ ಬೆಳ್ಳಿ ನಾಣ್ಯಗಳಿಂದ ತುಂಬಿದ ಕಲಶವಾಗಿತ್ತು ಎಂದು ಜನರು ಹೇಳಿದರು.


ಈ ಸುದ್ದಿ ಅಕ್ಕಪಕ್ಕದ ಪ್ರದೇಶದ ಜನರಿಗೆ ತಿಳಿಯುತ್ತಲೇ ಸುತ್ತಮುತ್ತಲಿದ್ದ ಮಕ್ಕಳು ದೊಡ್ಡವರೆಲ್ಲರೂ ಬಂದು ನಾಣ್ಯಗಳನ್ನು ಕ-ಸಿ-ದು-ಕೊಳ್ಳಲು ಪ್ರಯತ್ನಿಸಿದರು.‌ ಅಷ್ಟೇ ಅಲ್ಲ, ರಸ್ತೆಯಲ್ಲಿ ನಡೆಯುವಾಗ ದಾರಿಹೋಕರೂ ಕೂಡ ನಾಣ್ಯಗಳನ್ನು ಕೊಂಡೊಯ್ದರು. ಸ್ವಲ್ಪ ಸಮಯದ ನಂತರ ಈ ಸುದ್ದಿ ಪೊ-ಲೀ-ಸ-ರಿಗೆ ತಲುಪಿತು ಮತ್ತು ಪೊ-ಲೀ-ಸ-ರು ತಕ್ಷಣ ಸ್ಥಳಕ್ಕೆ ತಲುಪಿದರು, ಆದರೆ ಪೊ-ಲೀ-ಸ-ರು ತಲುಪುವ ಹೊತ್ತಿಗೆ ಎಲ್ಲಾ ಜನರು ಅಲ್ಲಿಂದ ಕಾಲ್ಕಿತ್ತಿದ್ದರು. ಪೊ-ಲೀ-ಸ-ರು ರೈತ ಶೌಕತ್ ಅಲಿ ಅವರ ಮನೆಗೆ ತಲುಪಿ ವಿಚಾರಿಸಿದರು. ಆ ಸಮಯದಲ್ಲಿ ತಾನು ತನ್ನ ಬೇರೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಶೌಕತ್ ಅಲಿ ಹೇಳಿದರು. ಅವರಿಗೆ ತಮ್ಮ ಜಮೀನಿನಲ್ಲಿ ಸಿಕ್ಕ ಕಲಶದ ಬಗ್ಗೆಯೂ ಮಾಹಿತಿ ನೀಡಿದರು ಹಾಗು ತಮ್ಮ ಟ್ರ್ಯಾಕ್ಟರ್ ಡ್ರೈವರ್ ಕೊಟ್ಟ ಒಂದು ನಾಣ್ಯವನ್ನ ಅವರು ಪೋಲಿಸರಿಗೆ ನೀಡಿದ್ದಾರೆ.

ಈ ನಾಣ್ಯಗಳು ಯಾವ ಕಾಲದ್ದು, ಯಾರು ಇದನ್ನ ಇಲ್ಲಿ ಹೂತಿಟ್ಟಿದ್ದರು, ಅದರ ಮೇಲೆ ಬರೆದ ಲಿಪಿಗಳು ಯಾವುವು ಎಂಬುದರ ಬಗ್ಗೆ ಇದೀಗ ಪುರಾತತ್ತ್ವ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಝಾರ್ಖಂಡ್ ನಲ್ಲಿ ಸಿಕ್ಕಿತು 1000 ವರ್ಷಗಳ ಪುರಾತನ ನಿಧಿ: ಅಲ್ಲಿ ಸಿಕ್ಕ ನಾಣ್ಯ ಹಾಗು ಉಳಿದ ನಿಗೂಢ ವಸ್ತುಗಳನ್ನ ಕಂಡು ಚಕಿತರಾದ ಪುರಾತತ್ವ ಅಧಿಕಾರಿಗಳು

ಜಾರ್ಖಂಡ್‌ನ ಡಾಲ್ಟನ್‌ಗಂಜ್‌ನಲ್ಲಿರುವ ಪಾಂಕಿಯ ನೌಡಿಹಾ ಗ್ರಾಮದ ಭಲಹಿ ಯಲ್ಲಿ ಉತ್ಖನನ ಮಾಡುವಾಗ ಲೋಹದ ಜಗ್‌ಗಳಲ್ಲಿ ತುಂಬಿದ ನೂರಾರು ಮೊಘಲ್ ಕಾಲದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ನೆಲದೊಳಗೆ ಸಿಕ್ಕ ನೂರಾರು ನಾಣ್ಯಗಳನ್ನ ಹಳ್ಳಿಯ ಯುವಕನೊಬ್ಬ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ. ಘಟನೆಯ ಬಗ್ಗೆ ತಿಳಿದ ಪೊಲೀಸರು ಈ ಬಗ್ಗೆ ಆತನಲ್ಲಿ ವಿಚಾರಿಸಿದ ಬಳಿಕ ಆತ ಆ ನಾಣ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾನೆ. ಪ್ರಸ್ತುತ, ನಾಣ್ಯಗಳನ್ನು ಪೊಲೀಸ್ ಠಾಣೆಯಲ್ಲಿ ಇಡಲಾಗಿದೆ. ಈ ನಾಣ್ಯಗಳು ಕ್ರಿ.ಶ. 902, ವರ್ಷ 1100 ಮತ್ತು 1082 ರ ಕಾಲದ್ದಾಗಿದ್ದು, ಉರ್ದು ಮತ್ತು ಅರೇಬಿಕ್ ಭಾಷೆಗಳಲ್ಲಿದ್ದು ಇವುಗಳ ಮೇಲೆ ಮೊಹಮ್ಮದ್ ಆಲಾ ಹಜರತ್ ಸೇರಿದಂತೆ ಇನ್ನಿತರ ಹೆಸರುಗಳು ಇವುಗಳ ಮೇಲಿವೆ.

ನೌಡಿಹಾದ ಬಚನ್ ಬೈಥಾ ಜೆಸಿಬಿಯ ಮೂಲಕ ಕೆಲವು ದಿನಗಳ ಹಿಂದೆ ತನ್ನ ಹೊಲವನ್ನ ಸಮತಟ್ಟು ಮಾಡಿಸಿದ್ದರು. ಈ ಸಮಯದಲ್ಲಿ ಜಮೀನಿನ ಬದಿಯಲ್ಲಿ ಬದಿಗಳನ್ನ ನಿರ್ಮಿಸಲಾಗಿತ್ತು. ಏತನ್ಮಧ್ಯೆ, ಗುರುವಾರ ಮಳೆಯಿಂದಾಗಿ, ಬದುವಿನ ತುದಿಯಲ್ಲಿರುವ ಲೋಹದ ಧಾತುವಿನ ಮೇಲೆ ನೀರು ಬಿದ್ದಿತು, ನಂತರ ಮಡಕೆ ಭಾಗಶಃ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಶುಕ್ರವಾರ ಮಧ್ಯಾಹ್ನ, ಮೇಕೆ ಮೇಯಿಸಲು ಹೋದ ಮಕ್ಕಳು ಮಡಕೆಯನ್ನು ತೆಗೆದುಕೊಂಡು ಅದರೊಂದಿಗೆ ಆಟವಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಗ್ರಾಮದ ಪ್ರಸಾದ್ ಶರ್ಮಾ ಅವರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ.

ಕೆಲವು ಗ್ರಾಮಸ್ಥರ ಸಮ್ಮುಖದಲ್ಲಿ ಈ ಮಡಿಕೆಯನ್ನ ತೆರೆಯಲು ಒಪ್ಪಲಾಯಿತು, ನಂತರ ಪ್ರಸಾದ್ ಶರ್ಮಾ ಅದೇ ಸ್ಥಳದಲ್ಲಿ ಮಡಿಕೆಯನ್ನ ಮುರಿದರು. ಮಡಕೆ ಒಡೆದ ನಂತರ ನೂರಾರು ನಾಣ್ಯಗಳು ಒಳಗಿನಿಂದ ಹೊರಬಂದವು. ಅದಾದ ಬಳಿಕ ಪ್ರಸಾದ್ ಶರ್ಮಾ ಅವರು ಭೂ-ತ ಪ್ರೇ-ತದ ಭಯದಿಂದ ನಾಣ್ಯಗಳನ್ನು ಅಲ್ಲಿಯೇ ಬಿಟ್ಟು ಮನೆಗೆ ಬಂದರು. ಅಷ್ಟರಲ್ಲಿ, ಸುತ್ತಮುತ್ತಲಿನ ಕೆಲವರು ನಾಣ್ಯಗಳನ್ನು ನೋಡಲು ಹೋದರು. ಈ ಸಮಯದಲ್ಲಿ ಕೆಲವರು ನಾಣ್ಯಗಳನ್ನು ಸಹ ತೆಗೆದುಕೊಂಡು ಹೋದರು.

ಮತ್ತೊಂದೆಡೆ, ನೌಡಿಹಾದ ಜಹೀರ್ ಮಿಯಾನ್ ಅವರ ಮಗ ಸಲೀಮ್ ಮಿಯಾನ್ ನಾಣ್ಯವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋದ. ಗ್ರಾಮದಲ್ಲಿ ನಾಣ್ಯಗಳು ಸಿಕ್ಕಿರುವ ಬಗ್ಗೆ ಚರ್ಚೆ ನಡೆಯಿತು. ಏತನ್ಮಧ್ಯೆ ಜಮೀನಿನ ಮಾಲೀಕ ಬಚ್ಚನ್ ಬೈತಾ ಅವರಿಗೆ ಇಡೀ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ನಂತರ ಅವರು ಸಲೀಮ್ ಮಿಯಾನ್ ಅವರ ಮನೆಗೆ ಹೋಗಿ ನಾಣ್ಯಗಳನ್ನು ವಾಪಸ್ಸು ಕೊಡುವಂತೆ ಕೇಳಿದರು, ಆದರೆ ಸಲೀಮ್ ಮಿಯಾನ್ ನಾಣ್ಯಗಳನ್ನು ನೀಡಲು ನಿರಾಕರಿಸುತ್ತ ತನಗೆ ಆ ನಾಣ್ಯಗಳ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದರು. ಈ ಗಲಾಟೆಯ ಸುದ್ದಿ, ಪೊಲೀಸರಿಗೂ ಮುಟ್ಟಿತು.

ಸುದ್ದಿ ಸಿಕ್ಕ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಲೀಮ್ ಅನ್ಸಾರಿ ಮಗನನ್ನು ಪೊಲೀಸ್ ಠಾಣೆಗೆ ಕರೆತಂದರು. ಜಮೀನಿನ ಮಾಲೀಕ ಕೂಡ ತಮ್ಮ ಕುಟುಂಬ ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ತಲುಪಿ ನಾಣ್ಯ ಮತ್ತು ಭೂಮಿಯಿಂದ ಹೊರಬಂದ ಮಡಕೆಯ ಚಿತ್ರವನ್ನು ತೋರಿಸಿದರು. ಇದರ ನಂತರ, ಪೊಲೀಸ್ ಠಾಣೆಯ ಉಸ್ತುವಾರಿ ಸಲೀಮ್ ಅನ್ಸಾರಿ ಅವರನ್ನು ಮತ್ತೆ ಪ್ರಶ್ನಿಸಿದರು, ನಂತರ ಅನ್ಸಾರಿ 102 ನಾಣ್ಯಗಳು ಮತ್ತು ಜುಗುಲಾರ್ ಕುಂಬಾರಿಕೆಗಳನ್ನು ಠಾಣಾ ಉಸ್ತುವಾರಿಗೆ ಹಸ್ತಾಂತರಿಸಿದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಠಾಣೆಯ ಉಸ್ತುವಾರಿ ಜಿತೇಂದ್ರ ಕುಮಾರ್ ರಾಮನ್ ತಿಳಿಸಿದ್ದಾರೆ. ಪ್ರಸ್ತುತ, 102 ನಾಣ್ಯಗಳು ಮತ್ತು ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈ ವಿಷಯದ ಬಗ್ಗೆ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ಮತ್ತು ವಲಯ ಅಧಿಕಾರಿ ಕುಲೇಶ್ವರ ಮುರ್ಮು ಮಾತನಾಡುತ್ತ – ಪ್ರಕರಣದ ಬಗ್ಗೆ ಮಾಹಿತಿ ಬಂದಿದೆ. ಕೆಲವು ಚಿತ್ರಗಳನ್ನು ಸಹ ನೋಡಿದ್ದೇನೆ.  ಈ ಬಗ್ಗೆ ತಾವು ಉನ್ನತ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

ಬೆಟ್ಟದ ಬದಿಯಲ್ಲಿ ನಾಣ್ಯಗಳು‌ ಸಿಕ್ಕಿರುವುದರ ಬಗ್ಗೆ ಜನರು ಸಂಶಯದಿಂದ ಮಾತನಾಡುತ್ತ ಊಹಾಪೋಹಗಳನ್ನ ಹಬ್ಬಿಸುತ್ತಿದ್ದಾರೆ‌. ಈ ಹಿಂದೆ ಇಲ್ಲಿ ಮೊಘಲ್ ರಾಜನ ಕೋಟೆ ಇದ್ದಿರಬೇಕು ಎಂದು ಕೆಲವರು ಹೇಳುತ್ತಾರೆ. ಏಕೆಂದರೆ ಭೂಮಿಯಲ್ಲಿ ಸಿಕ್ಕ ನಾಣ್ಯದಲ್ಲಿ ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಹಳ್ಳಿಯಲ್ಲೇ ಇರೋ ಉರ್ದು ಮತ್ತು ಅರೇಬಿಕ್ ಭಾಷೆಯನ್ನ ಓದುವ ಜನರು ಈ ಬಗ್ಗೆ ಮಾತನಾಡುತ್ತ – ನಾಣ್ಯಗಳು ಕ್ರಿ.ಶ 902, 1100 ಮತ್ತು 1082 ರ ದ್ದಾಗಿವೆ, ಮೊಹಮ್ಮದ್ ಅಲಾ ಹಜರತ್ ಸೇರಿದಂತೆ ಉರ್ದು ಮತ್ತು ಅರೇಬಿಕ್ ಭಾಷೆಯಲ್ಲಿ ಇತರ ಹೆಸರುಗಳಿವೆ. ನೌಡಿಹಾ ಪಂಚಾಯತ್‌ನ ಮಂಗಳಪುರ ನೌಡಿಹಾ ಗ್ರಾಮದ ಪಕ್ಕದಲ್ಲಿರುವ ಕಿಶುಂಗಿರಿ ಮತ್ತು ಸತ್ಬಾಹಿನಿ ನಲಾ ಕಡೆಗೂ ಅನೇಕ ಜನರಿಗೆ ಈ ಹಿಂದೆ ಬೆಳ್ಳಿ ನಾಣ್ಯಗಳು‌ ಸಿಕ್ಕಿವೆ.

Advertisement
Share this on...