ಗುಡ್ ನ್ಯೂಸ್: ಮತ್ತೆ ಶುರುವಾಯ್ತು ಡಾ.ರಾಜು ರವರ ಕ್ಲಿನಿಕ್.! ಡಾ.ರಾಜು ರವರನ್ನ ಸಚಿವ ವಿ.ಸೋಮ ತಕ್ಷಣವೇ ಮನೆಗೆ ಕರೆಸಿಕೊಂಡದ್ದಾದರೂ ಯಾಕೆ?

in Helath-Arogya/Kannada News/News 1,069 views

ಬೆಂಗಳೂರು: ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಚ್ಚಿಸಲಾಗಿದ್ದ ಮೂಡಲಪಾಳ್ಯದ ಡಾ. ರಾಜು ಕೃಷ್ಣಮೂರ್ತಿಯವರ ಸಾಗರ್‌ ಕ್ಲಿನಿಕ್‌ ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಿತು.

ಆಸ್ಪತ್ರೆ ಮುಚ್ಚಿಸಿದ್ದರ ವಿರುದ್ಧ ಸಾರ್ವಜನಿಕರು ಮತ್ತು ರೋಗಿಗಳ ಸಂಬಂಧಿಕರು ಮಂಗಳವಾರ ಪ್ರತಿಭಟನೆ ನಡೆಸಿದ್ದರು.

’ಮಾಸ್ಕ್‌ ಹಾಕದೆ, ಸ್ಯಾನಿಟೈಸರ್‌ ಬಳಸದೆ ಚಿಕಿತ್ಸೆ ನೀಡುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ನೋಟಿಸ್ ನೀಡಿದ್ದರು. ದಿನಕ್ಕೆ ನೂರಾರು ಜನ ಬರುತ್ತಿರುವುದರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ವಿವರಣೆ ನೀಡಿದ್ದೆ. ಸರ್ಕಾರದ ಆದೇಶದನ್ವಯ, ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಮತ್ತೆ ಕ್ಲಿನಿಕ್‌ ಆರಂಭಿಸಲಾಗಿದೆ’ ಎಂದು ಡಾ. ರಾಜು ಕೃಷ್ಣಮೂರ್ತಿ ತಿಳಿಸಿದರು.

‘ಕೆಲಸ ಮಾಡುವುದು ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ನಾನೂ ಮನೆಯಲ್ಲಿದ್ದೆ. ಆದರೆ, ಸಾರ್ವಜನಿಕರು ತುಂಬಾ ಒತ್ತಾಯ ಮಾಡಿದ್ದರಿಂದ ಕೆಲಸ ಆರಂಭಿಸಿದ್ದೇನೆ’ ಎಂದೂ ಅವರು ಹೇಳಿದರು.

’ಸಾಗರ್‌ ಕ್ಲಿನಿಕ್‌ಗೆ 18ರಂದು ಭೇಟಿ ನೀಡಿ ಡಾ. ರಾಜು ಅವರಿಗೆ ನೋಟಿಸ್‌ ನೀಡಲಾಗಿತ್ತು. ಕ್ಲಿನಿಕ್‌ ಮತ್ತೆ ಆರಂಭವಾಗಿರುವುದರ ಬಗ್ಗೆ ಮಾಹಿತಿ ಇಲ್ಲ. ಕೆಪಿಎಂಇ ಕಾಯ್ದೆಯನ್ವಯ ಅವರು ಕ್ಲಿನಿಕ್ ನಡೆಸುವುದಕ್ಕೆ ಸಂಬಂಧಿಸಿದಂತೆ ಪರವಾನಗಿ ಪತ್ರವನ್ನೂ ಅವರು ಈವರೆಗೆ ನೀಡಿಲ್ಲ. ಗುರುವಾರ ಕ್ಲಿನಿಕ್‌ಗೆ ಭೇಟಿ ನೀಡಿ ಮತ್ತೆ ವಿವರಣೆ ಪಡೆಯಲಾಗುವುದು‘ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ. ಶ್ರೀನಿವಾಸ್ ತಿಳಿಸಿದರು.

‘ಜಿಲ್ಲಾ ಆರೋಗ್ಯಾಧಿಕಾರಿಗಳು ಪರವಾನಗಿ ಪತ್ರ ಕೇಳಿದಾಗ ನನ್ನ ಬಳಿ ಇರಲಿಲ್ಲ. ಮನೆಗೆ ಹೋಗಿ ತೆಗೆದುಕೊಂಡು ಬರುವುದಾಗಿ ಹೇಳಿದ್ದೆ. ಮನೆಗೆ ಹೋಗುವುದರೊಳಗೆ ಸಚಿವ ವಿ.ಸೋಮಣ್ಣ ಅವರು ತಮ್ಮ ಮನೆಗೆ ಕರೆಸಿಕೊಂಡು ವಿವರಣೆ ಪಡೆದರು. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪರವಾನಗಿ ಪತ್ರ ತೋರಿಸಲಾಗುವುದು’ ಎಂದು ಡಾ. ರಾಜು ಸ್ಪಷ್ಟಪಡಿಸಿದರು.

ಹೆಲ್ತ್ ಟಿಪ್: ‘ಕೊರೋನಾ’ ದಿಂದ ಯಾರಲ್ಲಿ ಉಸಿರಾಟದ ಸಮಸ್ಯೆ ಕಂಡುಬರುತ್ತದೆ? ಇದರಿಂದ ಹೇಗೆ ಪಾರಾಗಬೇಕು? ಈ ಬಗ್ಗೆ ಡಾ.ರಾಜು ನೀಡಿದ್ದಾರೆ ಉಪಯುಕ್ತ ಮಾಹಿತಿ: ವಿಡಿಯೋ‌ ನೋಡಿ

ಕೊರೊನಾ ಸೋಂಕಿತರು ಹೆಚ್ಚಾಗಿ ಉಸಿರಾಟದ ತೊಂದರೆಯಿಂದಲೇ ಬಳಲುತ್ತಿರುತ್ತಾರೆ. ಆದರೆ ಯಾರಲ್ಲಿ ಈ ಉಸಿರಾಟದ ತೊಂದರೆ ಹೆಚ್ಚು, ಅಂತವರು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಮಹತ್ವದ ಸಲಹೆಯೊಂದನ್ನು ಡಾ. ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.

ಕೊರೊನಾ ಸೋಂಕು ಇರುವ ಗರ್ಭಿಣಿಯರಲ್ಲಿ ಹಾಗೂ ದಪ್ಪಕಾಯದವರಲ್ಲಿ ಉಸಿರಾಟದ ತೊಂದರೆ ಹೆಚ್ಚು. ಕಾರಣ ಗರ್ಭಿಣಿಯರಲ್ಲಿ ಹಾಗೂ ದಢೂತಿಕಾಯದವರಲ್ಲಿ ಹೊಟ್ಟೆ ಭಾಗ ದಪ್ಪವಿರುವುದರಿಂದ ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಉಸಿರಾಟದಲ್ಲಿ ಏರುಪೇರಾಗುತ್ತದೆ.

ಹಾಗಾಗಿ ಇಂತವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಲ್ಲಿ ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ. ಬೆನ್ನಿಗೆ ಎರಡು ದಿಂಬುಗಳನ್ನಿರಿಸಿ 45 ಡಿಗ್ರಿ ಆಂಗಲ್ ನಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ಉಸಿರಾಟದ ತೊಂದರೆ ಕಂಡುಬಂದಲ್ಲಿ ಓಡಾಡುವುದು ಕೂಡ ಸೂಕ್ತವಲ್ಲ. ಓಡಾಡುವುದರಿಂದ ಸ್ಯಾಚುರೇಷನ್ ಲೆವಲ್ ಕಡಿಮೆಯಾಗಿ ಕುಸಿದು ಬೀಳುವ ಸಾಧ್ಯತೆ ಹೆಚ್ಚು. 15 ದಿನಗಳ ಸಂಪೂರ್ಣ ಬೆಡ್ ರೆಸ್ಟ್ ಮಾಡುವುದು ಒಳ್ಳೆಯದು ಎಂದು ಡಾ.ರಾಜು ಸಲಹೆ ನೀಡಿದ್ದಾರೆ.

ಹಾಗಾದರೆ ಉಸಿರಾಟದ ತೊಂದರೆಯಿಂದ ಪಾರಾಗಲು ಇನ್ನೂ ಏನೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಈ ಹೊಸ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಡಾ.ರಾಜು ಅವರ ಈ ವಿಡಿಯೋವನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Advertisement
Share this on...