ಮತಾಂತರವಾಗುವವರಿಗೆ ಬಿಗ್ ಶಾಕ್ ಕೊಟ್ಟ ಅಮಿತ್ ಶಾಹ್

in Kannada News/News 1,232 views

ದೇಶದ ಗೃಹಮಂತ್ರಿ ಅಮಿತ್ ಶಾಹ್ ಮಹತ್ವದ ಹೆಜ್ಜೆಯೊಂದನ್ನ ಇಡುವುದರ ಮೂಲಕ ಖಡಕ್ ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯದಿಂದಾಗಿ ವಿದೇಶಿ ಮೂಲದಿಂದ ಫಂಡಿಂಗ್ ಬರುತ್ತಿದ್ದ ಎನ್‌ಜಿಓ ಗಳಿಗೆ ಭಾರೀ ಹೊಡೆತ ಬಿದ್ದಿದೆ. ಹೌದು ಎನ್‌ಜಿಓ ಗಳ ಹೆಸರಿನಲ್ಲಿ ಹಿಂದುಗಳನ್ನ ಮತಾಂತರಿಸಲು ವಿದೇಶದಿಂದ ದುಡ್ಡು ಹರಿದುಬರುತ್ತಲೇ ಇದೆ. ಇದೀಗ ಗೃಹಸಚಿವ ಅಮಿತ್ ಶಾಹ್ ರವರು ದೇಶದ ಇಂತಹ ನಾಲ್ಕು ದೊಡ್ಡ ಕ್ರಿಶ್ಚಿಯನ್ ಸಂಘಟನೆಗಳ ವಿದೇಶಿ ಫಂಡಿಂಗ್‌ ಪಡೆಯುತ್ತಿದ್ದ ಎನ್‌ಜಿಓ ಗಳ ಲೈಸೆನ್ಸ್ ರದ್ದು ಮಾಡಿದ್ದಾರೆ. ಭಾರತ ಸರ್ಕಾರ ಇತ್ತೀಚೆಗಷ್ಟೇ ನಾಲ್ಕು ಮಿಷನರಿ ಸಂಘಟನೆಗಳ FCRA ಲೈಸೆನ್ಸ್ ರದ್ದು ಮಾಡಿದೆ.

Advertisement

ಗೃಹ ಸಚಿವಾಲಯದ DATA ಪ್ರಕಾರ, ಫೆಬ್ರವರಿ 10 ರಂದು New Life Fellowship Associationನ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಿದೆ!  ಎಫ್‌ಸಿಆರ್‌ಎ ಪರವಾನಗಿಗಳನ್ನು ಅಮಾನತುಗೊಳಿಸಿದ ಆರು ಎನ್‌ಜಿಒಗಳಲ್ಲಿ ನಾಲ್ಕು ಶಾಶ್ವತ ಸಂಘಗಳೂ ಇವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇವುಗಳಲ್ಲಿ ಝಾರ್ಖಂಡ್‌ನ ಇಕೋಸೌಲಿಸ್ ನಾರ್ತ್ ವೆಸ್ಟರ್ನ್ ಗೋಸ್ನರ್ ಇವಾಂಜೆಲಿಕಲ್, ಮಣಿಪುರದ ಇವಾಂಜೆಲಿಕಲ್ ಚರ್ಚ್ ಅಸೋಸಿಯೇಷನ್ ​​(ಇಸಿಎ), ಝಾರ್ಖಂಡ್‌ನ ನಾರ್ದರ್ನ್ ಇವಾಂಜೆಲಿಕಲ್ ಲೂಥರನ್ ಚರ್ಚದ ಹಾಗು ಮುಂಬೈನ ನ್ಯೂ ಲೈಫ್ ಫೆಲೊಶಿಪ್ ಅಸೋಸಿಯೇಷನ್ NLLA ಕೂಡ ಇವೆ.

ಇದು ಮಾತ್ರವಲ್ಲದೆ ಯುಎಸ್ಎ ಮೂಲದ ಇಬ್ಬರು ಕ್ರಿಶ್ಚಿಯನ್ ಡೋನರ್‌ಗಳು (ದಾನಿಗಳು) ಕೂಡ MHA ರಡಾರ್ ‌ಲ್ಲಿದ್ದಾರೆ.!  ಈ ಎರಡು ಡೊನರ್ ಗಳು ಕೆಳಕಂಡಂತಿವೆ – ಸೆವೆಂತ್ ಡೇ ಎಡ್ವೆಂಟಿಸ್ಟ್ ಚರ್ಚ್ ಮತ್ತು ಬ್ಯಾಪ್ಟಿಸ್ಟ್ ಚರ್ಚ್! ಪ್ರಸ್ತುತ ಇವುಗಳ ಫಂಡಿಂಗ್ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, 2017 ರಲ್ಲಿ, ಯುಎಸ್ ಮೂಲದ ಮತ್ತೊಂದು ಪ್ರಬಲ ಕ್ರಿಶ್ಚಿಯನ್ ಡೋನರ್ ಕಂಪ್ಯಾಷನ್ ಇಂಟರ್ನ್ಯಾಷನಲ್ ಅನ್ನು ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಾಗಿತ್ತು.

ಈ‌ ಸಂಸ್ಥೆಯು ಭಾರತದಲ್ಲಿ ಹಿಂದುಗಳನ್ನ ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸಲು ಎನ್‌ಜಿಓ ಮೂಲಕ ಹಣದ ಸರಬರಾಜು ಮಾಡಿತ್ತು ಎಂಬ ಮಾಹಿತಿ ದೇಶದ ಗೃಹ ಸಚಿವಾಲಯಕ್ಕೆ ಸಿಕ್ಕಿತ್ತು. ಏತನ್ಮಧ್ಯೆ, ಎನ್‌ಸಿಒಗಳಲ್ಲಿ ಲೈಸೆನ್ಸ್ ರದ್ದುಪಡಿಸಲಾಗಿರುವ ಎಫ್‌ಸಿಆರ್‌ಎ ಗಳಲ್ಲಿ ಇನ್ನೆರಡು ಸಂಸ್ಥೆಗಳಿದ್ದು ಅವುಗಳು ರಾಜನಂದಗಾಂವ್ ಲೆಪ್ರೋಸಿ ಹಾಸ್ಪಿಟಲ್ & ಕ್ಲಿನಿಕ್ ಮತ್ತು ಡಾನ್ ಬಾಸ್ಕೊ ಟ್ರೈಬಲ್ ಡೆವಲಪ್ಮೆಂಟ್ ಸೊಸೈಟಿ ಆಗಿವೆ.

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಮುಂದಾದ ಕೇಂದ್ರ ಸರ್ಕಾರ?

ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಬಿತ್ತರವಾದ ಸುದ್ದಿಯ ಪ್ರಕಾರ ಕೇಂದ್ರದ ಮೋದಿ ಸರ್ಕಾರ ಹಾಗು ಉತ್ತರಪ್ರದೇಶದ ಯೋಗಿ ಸರ್ಕಾರ ಪೌರತ್ವ ತಿದ್ದುಪಡಿ ಕಾನೂನಿನ ಬಳಿಕ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿವೆ. ಸದ್ಯ ದೇಶಾದ್ಯಂತ ಸಿಎಎ ವಿ’ರುದ್ಧ ಪ್ರತಿಭಟನೆಗಳು, ಹಿಂ’ಸಾಚಾರ ನಡೆಯುತ್ತಿವೆ. ಈ ಸಂದರ್ಭದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತಂದದ್ದೇ ಆದಲ್ಲಿ ಸಿಎಎ ಪ್ರತಿಭಟನೆಯ ಜೊತೆ ಜನಸಂಖ್ಯಾ ನಿಯಂತ್ರಣ ಕಾನೂನಿಗೆ ಸಂಬಂಧಿಸಿದ ಪ್ರತಿಭಟನೆಯ ಕಾವೂ ಹೆಚ್ಚಾಗಲಿದೆ.

ಭಾರತದಲ್ಲಿನ ಒಂದು ಕೋಮಿನ ಜನ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನ ಹೆರುತ್ತದೆ‌. ಆದರೆ ಪ್ರಧಾನಮಂತ್ರಿ ‌ನರೇಂದ್ರ ಮೋದಿಯವರು ದೇಶದ ಜನರಿಗೆ ಉತ್ತಮ ಶಿಕ್ಷಣ, ಆಹಾರ, ಉದ್ಯೋಗ ಹಾಗು ಉತ್ತಮ ಜೀವನ ರೂಪಿಸಲು ಜನಸಂಖ್ಯಾ ನಿಯಂತ್ರಣ ಕಾನೂನು ಅತ್ಯಗತ್ಯ ಎಂಬರ್ಥದಲ್ಲಿ ಈ ಹಿಂದೆ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಮಾತನಾಡಿದ್ದಾರೆ.

ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ರವರು ಈ ಕುರಿತು ಮಾತನಾಡುತ್ತ ಸಿಎಎ ಬಳಿಕ ಕೇಂದ್ರ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನಿನ ಬಗ್ಗೆ ಪರಾಮರ್ಶೆ ನಡೆಸುತ್ತಿದೆ ಎಂದಿದ್ದಾರೆ. ಈ ಬಗ್ಗೆ ತಾನು ಖುದ್ದಾಗಿ ಪ್ರಧಾನಮಂತ್ರಿಯವರ ಜೊತೆ ಮಾತನಾಡಿದ್ದಾಗಿಯೂ ಅವರು ತಿಳಿಸಿದ್ದಾರೆ. ಅವರು ಮಾತನಾಡುತ್ತ ಈ ವಿಷಯದ ಕುರಿತಾಗಿ ಸ್ವಯಂ ಪ್ರಧಾ‌ನಿ ಮೋದಿಯವರು ಚಿಂತನೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಅತ್ತ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರ್ಕಾರವೂ ಜನಸಂಖ್ಯಾ ನಿಯಂತ್ರಣ ಕಾನೂನಿಗಾಗಿ‌ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳ ಲಾಭ ರದ್ದುಪಡಿಸುವುದರ ಬಗ್ಗೆ ಚಿಂತನೆ ನಡೆಸಿದೆ. ಅಷ್ಟೇ ಅಲ್ಲದೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದಂತೆ ನಿರ್ಬಂಧ ಹೇರಲು ಮುಂದಾಗಿದೆ‌.

ಸುದ್ದಿ ಮೂಲಗಳ ಪ್ರಕಾರ ಉತ್ತರಪ್ರದೇಶದ ಆರೋಗ್ಯ ಸಚಿವ ಜಯಪ್ರತಾಪ್ ಸಿಂಗ್ ರವರು ಮಾತನಾಡುತ್ತ ವಿವಿಧ ರಾಜ್ಯಗಳ ಜನಸಂಖ್ಯಾ ನೀತಿಯ ಮೇಲೆ ಅಧ್ಯಯನ ನಡೆಸಲಾಗುತ್ತಿದೆ. ಯಾವ ಕ್ರಮ ಕೈಗೊಂಡರೆ ಉತ್ತಮವೆಂದಯ ಆ ಅಧ್ಯಯನದ ವರದಿ ಬಂದ ಬಳಿಕ ಅದನ್ನ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.‌ ಇಲ್ಲಿ ಗಮನಿಸುವ ಅಂಶವೆಂದರೆ ಭಾರತದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶವಾಗಿದ್ದು ಈ ರಾಜ್ಯದಲ್ಲೇ ಅತಿ ಹೆಚ್ಚು ಜನಸಂಖ್ಯೆಯಿದೆ.‌

ಮೂಲಗಳ ಪ್ರಕಾರ ಉತ್ತರಪ್ರದೇಶ ಸರ್ಕಾರ ಜನಸಂಖ್ಯಾ ನಿಯಂತ್ರಣಕ್ಕಾಗಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುದೆ. ಮೊದಲನೆಯದು, ಎರಡಕ್ಕಿಂತ ಹೆಚ್ಚಯ ಮಕ್ಕಳು ಹೊಂದಿರುವ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳನ್ನ ಹಿಂಪಡೆಯುವುದು ಹಾಗು ಎರಡನೆಯದು, ರಾಜ್ಯದ ಯಾವುದೇ ಚುನಾವಣೆಗಳಲ್ಲೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನ ಹೊಂದಿರುವ ವ್ಯಕ್ತಿ ಸ್ಪರ್ಧಿಸದಂತೆ ನಿರ್ಬಂಧಿಸುವುದಾಗಿದೆ. ಉತ್ತರಪ್ರದೇಶದ ಒಟ್ಟು ಜನಸಂಖ್ಯೆ 22 ಕೋಟಿಯಷ್ಟಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019 ರ ಆಗಷ್ಟ್ 15 ರಂದು ತಮ್ಮ ಭಾಷಣದಲ್ಲಿ ಜಬಸಂಖ್ಯಾ ಸ್ಪೋಟದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಮಾತನಾಡಿದ್ದರು. ಅವರು ಮಾತನಾಡುತ್ತ ಯಾವ ಸಮಾಜದ ಒಂದು ಪುಟ್ಟ ಭಾಗವನ್ನ ಕುಟುಂಬವನ್ನು ಪುಟ್ಟದಾಗಿರಿಸುತ್ತೋ ಅವರು ನಿಜಕ್ಕೂ ಶ್ಲಾಘನೆಗೆ ಅರ್ಹರು, ಅದು ನಿಜವಾದ ದೇಶಭಕ್ತಿ ಎಂದಿದ್ದರು.‌

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೂ ಕೂಡ 2019 ರ ಫೆಬ್ರವರಿಯಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ತಮ್ಮ ಚಿಂತೆಯನ್ನ ವ್ಯಕ್ತಪಡಿಸಿದ್ದರು, ಅವರು ಮಾತನಾಡುತ್ತ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ ಎಂದಿದ್ದರು.

Advertisement
Share this on...