ರವಿ ದಾಹಿಯಾ ಒಲಿಂಪಿಕ್ಸ್ ಮೆಡಲ್ ಗೆಲುವಿಗೆ ಮೂಲ ಕಾರಣರೇ ಈ ಬ್ರಹ್ಮಚಾರಿ ಹಂಸರಾಜ್ ಜೀ: ಯಾರು ಗೊತ್ತಾ ಈ ಮಹಾನ್ ಸಂತ?

in Kannada News/News/Story/ಕನ್ನಡ ಮಾಹಿತಿ/ಕ್ರೀಡೆ 127 views

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿ ದಹಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಅವರು ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಮೂರನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಕುಸ್ತಿಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ರವಿ ದಹಿಯಾ ಅವರ ಈ ವಿಜಯದ ಎಲ್ಲಾ ಕ್ರೆಡಿಟ್ ಅವರ ಗುರು ಬ್ರಹ್ಮಚಾರಿ ಹಂಸರಾಜ್ ಅವರಿಗೆ ಸಲ್ಲುತ್ತದೆ. ಬ್ರಹ್ಮಚಾರಿ ಹಂಸರಾಜ್ ಜೀ ಅವರಿಗೆ ಕುಸ್ತಿಯನ್ನು ಕಲಿಸಿದರು ಮತ್ತು ಪದಕಗಳನ್ನು ಗೆಲ್ಲುವಷ್ಟು ಸಮರ್ಥರನ್ನಾಗಿ ಮಾಡಿದ್ದಾರೆ.

Advertisement

ರವಿ ಆರು ವರ್ಷದವನಿದ್ದಾಗಲೇ ಅವರು ಬ್ರಹ್ಮಚಾರಿ ಹಂಸರಾಜ್ ಅವರ ಅಖಾಡಕ್ಕೆ ಬಂದರು. ಅವರು 12 ನೇ ವಯಸ್ಸಿನವರೆಗೂ ಇಲ್ಲಿ ತರಬೇತಿ ಪಡೆದರು. ಅದೇ ಸಮಯದಲ್ಲಿ, ಬ್ರಹ್ಮಚಾರಿ ಹಂಸರಾಜ್ ತನ್ನ ಶಿಷ್ಯ ಪದಕ ಗೆದ್ದ ಸಂತೋಷ ವ್ಯಕ್ತಪಡಿಸಿದರು. ಸಂತೋಷವನ್ನು ವ್ಯಕ್ತಪಡಿಸಿದ ಅವರು, “ನಾನು ಉತ್ತಮ ಕುಸ್ತಿಪಟುವಾಗಿರಲಿಲ್ಲ. ನನಗೆ ದೊಡ್ಡ ಕನಸುಗಳಿದ್ದವು, ಆದರೆ ನನಸಾಗಲಿಲ್ಲ. ದೇವರು ನನ್ನ ಕನಸುಗಳನ್ನು ಆಲಿಸಿದಂತಿದೆ. ಈಗ ನನ್ನ ವಿದ್ಯಾರ್ಥಿಗಳು ಪದಕಗಳನ್ನು ತರುತ್ತಿದ್ದಾರೆ. ನಾನು ಇಷ್ಟೊಂದು ಜನಪ್ರಿಯನಾಗಬೇಕೆಂದು ಕನಸು ಕಂಡಿರಲಿಲ್ಲ. ನಾನು ಯಾವಾಗಲೂ ಯಾವುದೇ ರೀತಿಯ ಪ್ರಚಾರದಿಂದ ದೂರವಿರುತ್ತೇನೆ ಮತ್ತು ಮಕ್ಕಳಿಗೆ ತರಬೇತಿ ನೀಡುವತ್ತ ಮಾತ್ರ ಗಮನ ಹರಿಸುತ್ತೇನೆ” ಎನ್ನುತ್ತಾರೆ.

ಬ್ರಹ್ಮಚಾರಿ ಹಂಸರಾಜ್ ರವರಿಂದ ಕುಸ್ತಿ ಕಲಿಯಲು ಅನೇಕ ಮಕ್ಕಳು ಅವರ ಅಖಾಡಕ್ಕೆ ಬರುತ್ತಾರೆ. ಅವರು ಹರಿಯಾಣದ ಸೋನಿಪತ್ ಜಿಲ್ಲೆಯ ನಹರಿ ಗ್ರಾಮದಲ್ಲಿ ತಮ್ಮ ಅಖಾಡವನ್ನು ನಡೆಸುತ್ತಿದ್ದಾರೆ. ಹಂಸರಾಜ್ ಕನಿಷ್ಠ ಜೀವನಶೈಲಿಯನ್ನು ಅಂದರೆ ಸಾಮಾನ್ಯ ಜನರಂತೆ ಜೀವನ ನಡೆಸುತ್ತಾರೆ. ಅವರು 1996 ರಲ್ಲಿ ತಮ್ಮ ಮನೆಯನ್ನು ತೊರೆದರು ಮತ್ತು ಅಂದಿನಿಂದ ಸನ್ಯಾಸಿಯ ಜೀವನವನ್ನು ನಡೆಸುತ್ತಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸರಾಜ್, ನಾನು ಮಕ್ಕಳಿಗೆ ತರಬೇತಿ ನೀಡಲು ಆರಂಭಿಸಲಿಲ್ಲ ಆದರೆ ಗ್ರಾಮಸ್ಥರೇ ತಮ್ಮ ಮಕ್ಕಳನ್ನು ನನ್ನ ಬಳಿಗೆ ಕರೆತರುತ್ತಿದ್ದರು. ಮೊದಲಿಗೆ ನಾನು ನಿರಾಕರಿಸಿದೆ. ಏಕೆಂದರೆ ನಾನು ಧ್ಯಾನ ಮಾಡಲು ಬಯಸಿದ್ದೆ. ಆದರೆ ನಂತರ ನಾನು ಒಂದು ರಂಗವನ್ನು ನಿರ್ಮಿಸಿದೆ. ಅಂದಿನಿಂದ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಇಲ್ಲಿ ತರಬೇತಿ ಪಡೆದಿದ್ದಾರೆ. ನಾನು ಯಾರಿಂದಲೂ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಹಳ್ಳಿ ನನಗೆ ತಿನ್ನಲು ಏನೇ ಕೊಟ್ಟರೂ ಅದನ್ನ ಸ್ವೀಕರಿಸುತ್ತೇನೆ ಮತ್ತು ಅದರ ಮೇಲೆಯೇ ನನ್ನ ಜೀವನ ನಡೆಯುತ್ತದೆ” ಎನ್ನುತ್ತಾರೆ ಬ್ರಹ್ಮಚಾರಿ ಹಂಸರಾಜ್.

ಹಂಸರಾಜ್ ಪ್ರಕಾರ, ರವಿಯನ್ನು ಅವರ ತಂದೆ 6 ರಿಂದ 7 ನೇ ವಯಸ್ಸಿನಲ್ಲಿ ಇಲ್ಲಿಗೆ ಕರೆತಂದಿದ್ದರು. ಆರು ವರ್ಷಗಳ ತರಬೇತಿಯ ನಂತರ ನಾನು ಅವನನ್ನು ಅಂತಾರಾಷ್ಟ್ರೀಯ ತರಬೇತುದಾರರ ಅಡಿಯಲ್ಲಿ ಛತ್ರಸಲ್ ಸ್ಟೇಡಿಯಂ ಗೆ ಕಳಿಸಿದೆ. ರವಿಯನ್ನು ಮೊದಲ ಬಾರಿಗೆ ಟಿವಿಯಲ್ಲಿ ಒಲಿಂಪಿಕ್ ತಂಡದಲ್ಲಿ ಆಯ್ಕೆ ಮಾಡಿದ ಸುದ್ದಿಯನ್ನು ನೋಡಿದಾಗ, ನಾನು ಅವನನ್ನು ಗುರುತಿಸಿದೆ. ನಾವು ಅಖಾಡದಲ್ಲಿ ಮೋನಿ ಎಂದು ಕರೆಯುತ್ತಿದ್ದೇವು ಎನ್ನುತ್ತಾರೆ ಬ್ರಹ್ಮಚಾರಿ ಹಂಸರಾಜ್.

ಅವರು ಮುಂದೆ ಮಾತನಾಡುತ್ತ, ನಾನು ನನ್ನ ಜೀವನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿಲ್ಲ.‌ ನಾನು ಏನು ಮಾಡುತ್ತಿದ್ದೇನೋ ಅದರಿಂದ ನಾನು ಸಂತೋಷವಾಗಿದ್ದೇನೆ. ಇಲ್ಲಿನ ಜನರು ನನ್ನನ್ನು ಗೌರವಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ ಈ ಮಕ್ಕಳಿಗೆ ತರಬೇತಿ ನೀಡಲು ನನ್ನ ಬಳಿ ಯಾವುದೇ ಸೌಲಭ್ಯವಿಲ್ಲ, ಹಾಗಾಗಿ ರಂಗದಲ್ಲಿ ಆರಂಭಿಕ 5 ರಿಂದ 6 ವರ್ಷಗಳ ತರಬೇತಿಯ ನಂತರ, ನಾನು ಮಕ್ಕಳನ್ನು ಛತ್ರಸಲ್ ಕ್ರೀಡಾಂಗಣಕ್ಕೆ ಕಳುಹಿಸುತ್ತೇನೆ. ರವಿ ಭರವಸೆಯ ಮಗು, ಅತ್ಯಂತ ಶಾಂತ ಮತ್ತು ಪ್ರಾಮಾಣಿಕ ವಿದ್ಯಾರ್ಥಿ. ಎಲ್ಲರೂ ಆತನಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಿದ್ದರು ಹಾಗು ರವಿ ಅದನ್ನ ಮಾಡಿ ತೋರಿಸಿದ.

ಅದೇ ಸಮಯದಲ್ಲಿ, ಭಾರತಕ್ಕಾಗಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಟೋಕಿಯೊದಿಂದ ಹಿಂದಿರುಗಿದ ನಂತರ, ರವಿ ದಹಿಯಾ ಮಾತನಾಡುತ್ತ, “ನಾನು ಚಿಕ್ಕವನಿದ್ದಾಗ, ನನ್ನ ಹಳ್ಳಿಯ ಹೊಲಗಳಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದೆ. ನಂತರ ನನ್ನ ಗುರೂಜಿ ಹಂಸರಾಜ್ ಜಿ ನನ್ನನ್ನು 12 ನೇ ವಯಸ್ಸಿನಲ್ಲಿ ಛತ್ರಸಲ್ ಕ್ರೀಡಾಂಗಣಕ್ಕೆ ಕರೆತಂದರು. ಎಲ್ಲ ಉತ್ತಮ ಕುಸ್ತಿಪಟುಗಳನ್ನು ಇಲ್ಲಿಂದಲೇ ತಯಾರಿಸಲಾಗುತ್ತದೆ ಎಂದು ಅವರು ನನಗೆ ಹೇಳಿದರು. ಅವರು ಅದೇ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದರು. ನಂತರ ನಾನು ಇಲ್ಲಿಗೆ ಬಂದೆ … ನನ್ನ ಗುರುಜಿ, ಕುಟುಂಬ ಮತ್ತು ಸ್ನೇಹಿತರು ಒಲಿಂಪಿಕ್ಸ್‌ನಲ್ಲಿ ನನ್ನಿಂದ ಹೆಚ್ಚಿನ ಭರವಸೆ ಹೊಂದಿದ್ದರು” ಎನ್ನುತ್ತಾರೆ ರವಿ ದಾಹಿಯಾ

Advertisement
Share this on...