ಶಾಲೆ ಇಲ್ಲದ ಕಾರಣ ನಟಿ ರಕ್ಷಿತಾ ಪ್ರೇಮ್ ಮಗ ಏನ್ಮಾಡ್ತಿದ್ದಾನೆ ನೋಡಿ: ಈ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು?

in FILM NEWS/Kannada News/News/ಮನರಂಜನೆ/ಸಿನಿಮಾ 146 views

ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ನಟನೆಯಿಂದ ದೂರ ಸರಿದಿರುವ ರಕ್ಷಿತಾ ಇದೀಗ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕ್ರೇಜಿ ಕ್ವೀನ್ ಆಗಾಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

Advertisement

ಇತ್ತೀಚಿಗೆ ರಕ್ಷಿತಾ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದೆ. ರಕ್ಷಿತಾ ತನ್ನ ಪುತ್ರ ಸೂರ್ಯ ತೋಟದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಗ ಹೀಗೆ ಕೃಷಿ ಕೆಲಸ ಮಾಡುತ್ತಿರುವುದನ್ನು ನೋಡಿದ್ರೆ ತುಂಬಾ ಹೆಮ್ಮೆಯಾಗುತ್ತೆ ಎಂದು ಹೇಳಿದ್ದಾರೆ.

ಸದ್ಯ ಕೊರೊನಾ ಕಾರಣದಿಂದ ಶಾಲೆಗಳು ಇನ್ನು ತೆರೆದಿಲ್ಲ. ಮಕ್ಕಳು ಕಳೆದ ಒಂದು ವರ್ಷದಿಂದ ಮನೆಯಲ್ಲೇ ಕಾಲಕಳೆಯುವಂತಾಗಿದೆ. ಈ ಸಮಯದಲ್ಲಿ ಅನೇಕ ಮಕ್ಕಳು ಕುಟುಂಬದ ಜೊತೆ ಇದ್ದು ಒಂದಿಷ್ಟು ಕೆಲಸಗಳನ್ನು ಕಲಿಯುತ್ತಿದ್ದಾರೆ. ಇದೀಗ ರಕ್ಷಿತಾ ಪುತ್ರ ಸೂರ್ಯ ಕೂಡ ತೋಟದಲ್ಲಿ ಕೆಲಸ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ನಾನು ಅವರ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ. ನನ್ನ ಪುಟ್ಟ ರೈತ. ಅವರು ತೋಟದಲ್ಲಿ ಕೆಲಸ ಮಾಡುವುದನ್ನು ಕಲಿಯುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತೆ. ಇದು ಭಾನುವಾರ ಸೂರ್ಯ ನಮ್ಮ ತೋಟದಲ್ಲಿ ಮಾಡುವ ಕೆಲಸ. ಇದು ನನಗೆ ತುಂಬಾ ಸಂತೋಷವನ್ನು ನೀಡುತ್ತೆ” ಎಂದು ಬರೆದುಕೊಂಡಿದ್ದಾರೆ.

ರಕ್ಷಿತಾ ಶೇರ್ ಮಾಡಿರುವ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಿರೂಪಕ, ನಟ ಅಕುಲ್ ಬಾಲಾಜಿ ಕಾಮೆಂಟ್ ಮಾಡಿ ಹೆಮ್ಮೆಯಾಗುತ್ತೆ ಎಂದು ಹೇಳಿದ್ದಾರೆ.

ಅಂದಹಾಗೆ ರಕ್ಷಿತಾ ಸದ್ಯ ಕನ್ನಡ ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತನ್ನ ಸಹೋದರ ರಾಣಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚೊಚ್ಚಲ ಸಿನಿಮಾ ಏಕ್ ಲವ್ ಯಾ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಅನೇಕ ವರ್ಷಗಳ ಬಳಿಕ ರಕ್ಷಿತಾ ಏಕ್ ಲವ್ ಯಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ತನ್ನನ್ನು ಹುಡುಕಿಕೊಂಡು ಹೈದ್ರಾಬಾದ್ ನಿಂದ ವಿರಾಜಪೇಟೆಗೆ ಬಂದ ಅಭಿಮಾನಿಯ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅತಿ ಕಡಿಮೆ ಅವಧಿಯಲ್ಲೇ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಅವರ ಅಪ್ಪಟ ಅಭಿಮಾನಿ ಆಕಾಶ್ ತ್ರಿಪಾಠಿ ಎನ್ನುವವರು ನೆಚ್ಚಿನ ನಟಿಯನ್ನು ನೋಡಿ, ಮಾತನಾಡಿಸಲು ಕೊಡಗು ಜಿಲ್ಲೆಯ ವಿರಾಜಪೇಟೆಗೆ ಬಂದಿದ್ದರು.

ಮೂಲತಹ ವಿರಾಜಪೇಟೆಯವರಾದ ರಶ್ಮಿಕಾ ಅಲ್ಲಿಯೇ ಇರುತ್ತಾರೆಂದು ತಿಳಿದು, ಹೈದರಾಬಾದ್ ನಿಂದ ಮೈಸೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಕೊಡಗಿಗೆ ಗೂಡ್ಸ್ ಆಟೋದಲ್ಲಿ ವಿಚಾರಪೇಟೆಗೆ ಭೇಟಿ ನೀಡಿದ್ದರು. ಬಳಿಕ ರಶ್ಮಿಕಾ ಮನೆ ಹುಡುಕಲು ದಿನಪೂರ್ತಿ ಅಲೆದಾಡಿದ್ದರು.

ಮನೆ ಹುಡುಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಅತನನ್ನು ವಿಚಾರಿಸಿದ ಬಳಿಕ ಹೈದರಾಬಾದ್ ನಿಂದ ರಶ್ಮಿಕಾರನ್ನು ನೋಡಲು ಬಂದಿರುವುದಾಗಿ ತಿಳಿದುಬಂದಿದೆ. ಪೊಲೀಸರು ಆತನಿಗೆ ಬೈದು ಬುದ್ಧಿವಾದ ಹೇಳಿ ಹೈದರಾಬಾದ್ ಗೆ ಕಳುಹಿಸಿದ್ದಾರೆ. ಅಂದಹಾಗೆ ರಶ್ಮಿಕಾ ಸದ್ಯ ಮುಂಬೈನಲ್ಲಿ ವಾಸ್ತವ್ಯ ಹೂಡಿರುವುದರದಿಂದ ನೆಚ್ಚಿನ ನಟಿಯನ್ನು ಭೇಟಿಯಾಗಲು ಆಕಾಶ್ ಗೆ ಸಾಧ್ಯವಾಗಿಲ್ಲ.

ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಶ್ಮಿಕಾ ನಿಮ್ಮನ್ನು ಬೇಟಿಯಾಗಲು ಸಾಧ್ಯವಾಗಿಲ್ಲ ಎಂಬ ನೋವು ನನ್ನಲ್ಲಿ ಇದೆ. ಆದರೆ ಇಂತ ಸಾಹಸ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

“ನನ್ನ ಗಮನಕ್ಕೆ ಈಗ ಬಂತು. ನಿಮ್ಮಲ್ಲಿ ಒಬ್ಬರು ತುಂಬಾ ದೂರ ಪ್ರಯಾಣ ಮಾಡಿ ನನ್ನನ್ನು ನೋಡಲು ಮನೆಗೆ ಹೋಗಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ. ನಿಮ್ಮನ್ನು ಭೇಟಿಯಾಗಿಲ್ಲ ಎನ್ನುವ ನೋವು ನನಗಿದೆ. ಒಂದು ದಿನ ಖಂಡಿತ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೀಗ ಪ್ರೀತಿ ತೋರಿಸಿ. ನಾನು ತುಂಬಾ ಪಡುತ್ತೇನೆ” ಎಂದು ಹೇಳಿದ್ದಾರೆ.

ರಶ್ಮಿಕಾ ಸದ್ಯ ಅಮಿತಾಬ್ ಬಚ್ಚನ್ ಗುಡ್ ಬೈ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ಮಿಷನ್ ಮಜ್ನು ಕೂಡ ರಶ್ಮಿಕಾ ಕೈಯಲ್ಲಿದೆ. ಬಾಲಿವುಡ್ ನ ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದು ರಶ್ಮಿಕಾ ಸದ್ಯ ಮುಂಬೈನಲ್ಲೇ ನೆಲೆಸಿದ್ದಾರೆ.

Advertisement
Share this on...