‘ಶೇಖ್ ನಗರ’ ಆಯ್ತು ‘ಶಿವನಗರ’, ‘ಅಮ್‌ಫಲ್ಲಾ ಚೌಕ್’ ಆಯ್ತು ‘ಹನುಮಾನ್ ಚೌಕ್’: ಯೋಗಿ ಮಾದರಿಯಲ್ಲಿ ಬದಲಾಗುತ್ತಿದೆ ಜಮ್ಮು ಕಾಶ್ಮೀರ

in Uncategorized 189 views

ನಗರಗಳ ಮರುನಾಮಕರಣದ ಕಸರತ್ತು ಇದೀಗ ಜಮ್ಮುವಿನಲ್ಲೂ ಶುರುವಾಗಿದೆ. ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ ಒಂದು ನಗರ ಮತ್ತು ಚೌಕ್ ನ ಹೆಸರನ್ನು ಮರುನಾಮಕರಣ ಮಾಡಲು ನಿರ್ಣಯವನ್ನು ಅಂಗೀಕರಿಸಿದೆ ಎಂದು ವರದಿಯಾಗಿದ್ದು ಇದರಲ್ಲಿ ಶೇಖ್ ನಗರವನ್ನು ಶಿವನಗರ ಮತ್ತು ಅಮ್‌ಫಲ್ಲಾ ಚೌಕ್ ಅನ್ನು ಹನುಮಾನ್ ಚೌಕ್ ಎಂದು ಮಾಡಲಾಗಿದೆ.

Advertisement

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ನಿರ್ಣಯವನ್ನು ಅಂಗೀಕರಿಸಿದ ಮಾಹಿತಿಯನ್ನು ಮೇಯರ್ ಚಂದರ್ ಮೋಹನ್ ನೀಡಿದ್ದಾರೆ. ಶೇಖ್ ನಗರವನ್ನು ಶಿವನಗರ ಎಂದು ಬದಲಾಯಿಸಲು ಬಿಜೆಪಿ ಕೌನ್ಸಿಲರ್ ಪ್ರಸ್ತಾವನೆಯನ್ನು ನೀಡಿದ್ದು, ನಂತರ ಜಮ್ಮುವಿನ ಎರಡು ಪ್ರದೇಶಗಳನ್ನು ಮರುನಾಮಕರಣ ಮಾಡಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.

ಶನಿವಾರ ನಡೆದ ಜಮ್ಮು ಮಹಾನಗರ ಪಾಲಿಕೆಯ ಸಭೆಯಲ್ಲಿ ಬಿಜೆಪಿ ಕೌನ್ಸಿಲರ್ ಶಾರದಾ ಕುಮಾರಿ ಶೇಖ್ ನಗರವನ್ನು ಶಿವನಗರವೆಂದು ಮರುನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಬಿಜೆಪಿ ಕೌನ್ಸಿಲರ್ ಶಾರದಾ ಕುಮಾರಿ, ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಮಂಡಿಸಲಾಗಿದೆ. ಜಮ್ಮು ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಎರಡು ಪ್ರದೇಶಗಳ ಹೆಸರನ್ನು ಬದಲಾಯಿಸುವ ನಿರ್ಣಯದ ನಂತರ, ಈಗ ಜಮ್ಮು ಕಾಶ್ಮೀರದ ಸಿವಿಲ್ ಸೆಕ್ರೆಟರಿಯೇಟ್‌ಗೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಇದರಿಂದ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದು‌ ಅವರು ಹೇಳಿದ್ದಾರೆ..

ಕಳೆದ ವರ್ಷ ಜಮ್ಮುವಿನ ಗಾಂಧಿನಗರದಲ್ಲಿರುವ ಸರ್ಕಾರಿ ಮಹಿಳಾ ಪಿಜಿ ಕಾಲೇಜಿಗೆ ಡೋಗ್ರಿ ಭಾಷೆಯ ಮೊದಲ ಆಧುನಿಕ ಕವಯಿತ್ರಿ ಪದ್ಮಶ್ರೀ ಪದ್ಮಾ ಸಚ್‌ದೇವ್ ಅವರ ಹೆಸರನ್ನು ಇಡಲಾಗಿತ್ತು. ಇದನ್ನು ಚಂದ್ರ ಮೋಹನ್ ಗುಪ್ತಾ ಉದ್ಘಾಟಿಸಿದ್ದರು. ಪದ್ಮಾ ಸಚ್‌ದೇವ್ ಕವಯಿತ್ರಿ ಮಾತ್ರವಲ್ಲದೆ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು 1971 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು ಮತ್ತು ಕಳೆದ ವರ್ಷವಷ್ಟೇ ನಿಧನರಾಗಿದ್ದರು.

ಜಮ್ಮುವಿಗೂ ಮೊದಲು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಳಗಳ ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಈ ಅನುಕ್ರಮದಲ್ಲಿ ಅಲಹಾಬಾದ್‌ನ್ನ ಪ್ರಯಾಗರಾಜ್ ಜೊತೆಗೆ ಅನೇಕ ನಗರಗಳ ಹೆಸರನ್ನ ಮರುನಾಮಕರಣ ಮಾಡಲಾಗಿತ್ತು. ಅಲಿಗಢ್, ಫರೂಕಾಬಾದ್, ಸುಲ್ತಾನ್‌ಪುರ, ಬದೌನ್, ಫಿರೋಜಾಬಾದ್ ಮತ್ತು ಶಹಜಹಾನ್‌ಪುರವನ್ನು ಮರುನಾಮಕರಣ ಮಾಡುವ ಆಲೋಚನೆಯೂ ನಡೆಯುತ್ತಿದೆ ಎಂದು ವರದಿಯಾಗಿದೆ. ಇವುಗಳ ಹೊರತಾಗಿ ಆಗ್ರಾ, ಮೈನ್‌ಪುರಿ ಮತ್ತು ಘಾಜಿಪುರ ಹೆಸರನ್ನು ಬದಲಾಯಿಸಲು ಪ್ರಸ್ತಾವನೆಗಳನ್ನೂ ಸಿದ್ಧಪಡಿಸಲಾಗುತ್ತಿದೆ.

ಒಂದಲ್ಲ ಎರಡಲ್ಲ ಉತ್ತರಪ್ರದೇಶದ ಬರೋಬ್ಬರಿ ಈ 12 ಪ್ರಮುಖ ನಗರಗಳ ಹೆಸರುಗಳನ್ನೇ ಬದಲಿಸಲು ಮುಂದಾದ ಯೋಗಿ ಆದಿತ್ಯನಾಥ್

ಮತ್ತೊಮ್ಮೆ ಯುಪಿಯಲ್ಲಿ ನಗರಗಳ ಹೆಸರನ್ನು ಬದಲಾಯಿಸಲು ಸಿದ್ಧತೆ ನಡೆದಿದೆ. ಈ 12 ನಗರಗಳ ಪೈಕಿ 6 ಜಿಲ್ಲೆಗಳ ಹೆಸರನ್ನು ಮೊದಲು ಬದಲಾಯಿಸಲಾಗುವುದು ಎಂದು ಹೇಳಲಾಗುತ್ತಿದೆ.

ಮೊಟ್ಟಮೊದಲು ಇರಲಿವೆ ಈ ಇವುಗಳ ನಂಬರ್

‘ಇಂಡಿಯಾ ಡಾಟ್ ಕಾಮ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಲಿಗಢ್, ಫರೂಕಾಬಾದ್, ಸುಲ್ತಾನ್‌ಪುರ, ಬದೌಯು, ಫಿರೋಜಾಬಾದ್ ಮತ್ತು ಶಹಜಹಾನ್‌ಪುರ ಹೆಸರುಗಳು ಈ ಪಟ್ಟಿಯಲ್ಲಿವೆ. ಅಲಿಘಡ್ ಹೆಸರನ್ನು ಬದಲಾಯಿಸಲು, ಕಳೆದ ವರ್ಷ ಆಗಸ್ಟ್ 6, 2021 ರಂದು, ಪಂಚಾಯತ್ ಸಮಿತಿಯು ಅದರ ಹೊಸ ಅಧ್ಯಕ್ಷ ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ, ಹೆಸರು ಬದಲಾವಣೆಯೊಂದಿಗೆ ನಿರ್ಣಯವನ್ನು ಅಂಗೀಕರಿಸಿತ್ತು. ಇದೀಗ ಈ ಜಿಲ್ಲೆಗೆ ಹರಿಘಢ್ ಅಥವಾ ಆರ್ಯಗಢ್ ಎಂದು ನಾಮಕರಣ ಮಾಡಲು ಸಿದ್ಧತೆ ನಡೆದಿದೆ.

ಅದೇ ಸಮಯದಲ್ಲಿ, ಫರೂಕಾಬಾದ್ ಜಿಲ್ಲೆಯಿಂದ ಸತತ ಎರಡನೇ ಬಾರಿಗೆ ಸಂಸದರಾಗಿರುವ ಮುಖೇಶ್ ರಜಪೂತ್ ಅವರು ಇತ್ತೀಚೆಗೆ ಫರೂಕಾಬಾದ್ ಹೆಸರನ್ನು ಪಾಂಚಾಲ್ ನಗರ ಎಂದು ಬದಲಾಯಿಸಲು ಒತ್ತಾಯಿಸಿದ್ದಾರೆ. ಈ ಜಿಲ್ಲೆ ದ್ರೌಪದಿಯ ತಂದೆ ದ್ರುಪದ ಪಾಂಚಾಲ್ ರಾಜ್ಯದ ರಾಜಧಾನಿಯಾಗಿತ್ತು ಹಾಗಾಗಿ ಅದರ ಹೆಸರು ಪಾಂಚಾಲ್ ನಗರ ಎಂದು ಬದಲಾಯಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

ಅದೇ ರೀತಿ, ಸುಲ್ತಾನ್‌ಪುರದ ಲಂಭುವಾ ಕ್ಷೇತ್ರದಿಂದ ಬಿಜೆಪಿಯ ಶಾಸಕರಾಗಿದ್ದ ದೇವಮಣಿ ದ್ವಿವೇದಿ ಅವರು ಜಿಲ್ಲೆಯ ಹೆಸರನ್ನು ‘ಕುಶಭವನಪುರ’ ಎಂದು ಬದಲಾಯಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಶಹಜಾನ್‌ಪುರದ ಶಾಸಕರಾಗಿದ್ದ ಮಾನವೇಂದ್ರ ಸಿಂಗ್ ಅವರು ಜಿಲ್ಲೆಯ ಹೆಸರನ್ನು ಯೋಗಿ ಸರ್ಕಾರಕ್ಕೆ ಬದಲಾಯಿಸುವ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ. ಷಹಜಹಾನ್‌ಪುರವನ್ನು ‘ಶಾಜಿಪುರ’ ಎಂದು ಮರುನಾಮಕರಣ ಮಾಡಲು ಸಲಹೆ ನೀಡಿದ್ದಾರೆ. ಅದೇ ರೀತಿ 2021ರ ಆಗಸ್ಟ್ 2ರಂದು ಫಿರೋಜಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಫಿರೋಜಾಬಾದ್ ಜಿಲ್ಲೆಯನ್ನು ಚಂದ್ರನಗರ ಎಂದು ಮರುನಾಮಕರಣ ಮಾಡಲು ನಿರ್ಣಯ ಅಂಗೀಕರಿಸಲಾಯಿತು. ಬದಾಯು ಹೆಸರನ್ನು ಬದಲಾಯಿಸುವ ಯಾವುದೇ ಪ್ರಸ್ತಾಪ ಇನ್ನೂ ಬಂದಿಲ್ಲವಾದರೂ, ಈ ಜಿಲ್ಲೆಯ ಹೆಸರೂ ಸಿಎಂ ಯೋಗಿ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿಯಾಗುವುದರ ಜೊತೆ ಜೊತೆಗೆ, ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದ ಪ್ರಸಿದ್ಧ ಗೋರಖನಾಥ ದೇವಾಲಯದಲ್ಲಿರುವ ಮಠದ ಮಹಂತ್ ಕೂಡ ಆಗಿದ್ದಾರೆ. ಉತ್ತರಪ್ರದೇಶದ ಸಿಎಂ ಆಗುವ ಮುನ್ನವೇ ಅವರು ಗೋರಖ್‌ಪುರದ ಸಂಸದರಾಗಿದ್ದ ಅವಧಿಯಲ್ಲಿ ಹಲವು ಪ್ರದೇಶಗಳ ಹೆಸರನ್ನು ಬದಲಾಯಿಸಿದ್ದರು. ಈ ಸಂಚಿಕೆಯಲ್ಲಿ ಉರ್ದು ಬಜಾರ್ ಅನ್ನು ಹಿಂದಿ ಬಜಾರ್‌ ಎಂದು, ಹುಮಾಯೂನ್‌ಪುರವನ್ನು ಹನುಮಾನ್ ನಗರವೆಂದು, ಮೀನಾ ಬಜಾರ್ ಅನ್ನು ಮಾಯಾ ಬಜಾರ್‌ ಎಂದು ಮತ್ತು ಅಲಿನಗರವನ್ನು ಆರ್ಯ ನಗರ ವೆಂದು ಪರಿವರ್ತಿಸಲಾಗಿತ್ತು. ಅದೇ ಸಮಯದಲ್ಲಿ, ಅವರ ಹಿಂದಿನ ಅಧಿಕಾರಾವಧಿಯಲ್ಲಿ, ಮೊಘಲ್‌ಸರಾಯ್ ರೈಲು ನಿಲ್ದಾಣಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಹೆಸರನ್ನು ಇಡಲಾಗಿತ್ತು, ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಲಾಗಿತ್ತು ಮತ್ತು ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿತ್ತು.

ಈ ಜಿಲ್ಲೆಗಳಲ್ಲೂ ಹೆಸರುಗಳನ್ನ ಬದಲಿಸುವ ಪ್ರಸ್ತಾವನೆ

ಆಗ್ರಾ- ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಆಗ್ರಾದ ಜಾಗದಲ್ಲಿ ಅಗ್ರವನ್ ಜಿಲ್ಲೆ ಎಂಬ ಹೊಸ ಹೆಸರಿನ ಪರ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ಮೈನ್‌ಪುರಿ- ಆಗಸ್ಟ್ 16 ರಂದು ಮೈನ್‌ಪುರಿಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮಟ್ಟದ ಸಭೆಯ ನಂತರ, ಹೆಸರನ್ನು ಮಯಾನ್‌ಪುರಿ ಎಂದು ಬದಲಾಯಿಸಲು ಒತ್ತಾಯಿಸಲಾಯಿತು.

ಗಾಜಿಪುರ- ಇಲ್ಲಿಂದ ಹಿರಿಯ ನಾಯಕ ಕೃಷ್ಣಾನಂದ ರೈ ಅವರ ಪತ್ನಿ ಅಲ್ಕಾ ರೈ ಅವರು ಒಂದು ವರ್ಷದ ಹಿಂದೆ ಗಾಜಿಪುರದ ಹೆಸರನ್ನು ಗಢಿಪುರಿ ಎಂದು ಬದಲಾಯಿಸಲು ಒತ್ತಾಯಿಸಿದ್ದಾರೆ.

ಕಾನ್ಪುರ- ರಸೂಲಾಬಾದ್ ಮತ್ತು ಸಿಕಂದರಾಬಾದ್ ಮತ್ತು ಕಾನ್ಪುರ ಗ್ರಾಮಾಂತರದ ಅಕ್ಬರ್‌ಪುರ ರಾಣಿಯಾ ಹೆಸರುಗಳ ಬಗ್ಗೆ ಪ್ರಸ್ತಾವನೆಗಳನ್ನು ಮಾಡಲು ಆಡಳಿತವು ಸೂಚನೆಗಳನ್ನು ಸ್ವೀಕರಿಸಿದೆ.

ಸಂಭಲ್- ಜಿಲ್ಲೆಗೆ ಕಲ್ಕಿ ನಗರ ಅಥವಾ ಪೃಥ್ವಿರಾಜ್ ನಗರ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಇದೆ.

ದೇವಬಂದ್- ಬಿಜೆಪಿ ಶಾಸಕ ಬ್ರಜೇಶ್ ಸಿಂಗ್ ರಾವತ್ ಕೂಡ ದೇವಬಂದ್ ಅನ್ನು ದೇವವೃಂದಪುರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.

Advertisement
Share this on...