ನಮ್ಮ ಸಿಂಗರ್ಸ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

in ಮನರಂಜನೆ/ಸಿನಿಮಾ 3,712 views

ಒಂದು ಕಾಲದಲ್ಲಿ ಟಾಪ್ ಸಿಂಗರ್ಸ್ ಒಂದು ಹಾಡನ್ನು ಹಾಡುವುದಕ್ಕೆ ಕೇವಲ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಈಗ ಕಾಲ ಬದಲಾಗಿದೆ ಹಾಗೇ ಈಗೀನ ಸಿಂಗರ್ಸ್ ನ ಸಂಭಾವನೆಯೂ ಸಹ ಬದಲಾಗಿದೆ. ಈ ಹಿಂದೆ ಒಂದು ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಸಿಂಗರ್ ಹಾಡುತ್ತಿದ್ದರು. ಈಗ ಪ್ರತಿಯೊಂದು ಹಾಡನ್ನು ಬೇರೆ-ಬೇರೆ ಸಿಂಗರ್ ಹಾಡುತ್ತಾರೆ. ಹಾಗಾದರೆ ಕನ್ನಡದ ಈ ಖ್ಯಾತ ಸಿಂಗರ್ಸ್ ಒಂದು ಹಾಡು ಹಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಗೊತ್ತಾ..? ಕನ್ನಡದ ಗಾಯಕಿಯರಲ್ಲಿ ಹೆಚ್ಚು ಸಂಭಾವನೆ ಪಡೆಯುವ ಅನುರಾಧಾ ಭಟ್ ಅವರು ಒಂದು ಹಾಡಿನ 50 ರಿಂದ 70 ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನು ಅರ್ಚನಾ ಉಡುಪ ಅವರು ಒಂದು ಹಾಡನ್ನು ಹಾಡಲು 30 ರಿಂದ 40 ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಸಿಂಗರ್ ನಂದಿತಾ ಅವರು ಒಂದು ಹಾಡಿಗೆ 40 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಅಂತೆ ಹಾಗೂ ಶಮಿತ ಮಲ್ನಾಡ್ ಅವರು ಒಂದು ಹಾಡಿಗೆ 30 ರಿಂದ 40 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Advertisement

ಕನ್ನಡದ ಖ್ಯಾತ ಗಾಯಕರಲ್ಲಿ ಒಬ್ಬರಾದ ರಾಜೇಶ್ ಕೃಷ್ಣನ್ ಅವರು ಒಂದು ಹಾಡನ್ನು ಹಾಡಲು ಒಂದು ಲಕ್ಷ ಸಂಭಾವನೆ ಪಡೆಯುತ್ತಾರೆ.
ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ಚಿತ್ರ ಅವರು ಒಂದು ಹಾಡಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಕನ್ನಡ ಟಾಪ್ ಸಿಂಗರ್ ಗಳಲ್ಲಿ ಒಬ್ಬರು ಆಗಿರುವ ವಿಜಯ್ ಪ್ರಕಾಶ್ ಅವರು ಒಂದು ಹಾಡನ್ನು ಹಾಡಲು ಒಂದರಿಂದ ಒಂದುವರೆ ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಬಾಲಿವುಡ್ ನ ಸಿಂಗಲ್ ಆಗಿದ್ದರೂ ಸಹ ಹೆಚ್ಚು ಕನ್ನಡದ ಹಾಡುಗಳನ್ನು ಹಾಡಿರುವ ಸೋನು ನಿಗಮ್ ಅವರು ಒಂದು ಕನ್ನಡ ಹಾಡನ್ನು ಹಾಡಲು ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈಗ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಸ ರಿ ಗ ಮ ಪ ಕಾರ್ಯಕ್ರಮದ ಖ್ಯಾತಿಯ ಸಂಚಿತ್ ಹೆಗ್ಗಡೆ ಅವರು ಒಂದು ಹಾಡಿಗೆ 50 ರಿಂದ 60 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.


ತಮ್ಮ ಕೋಗಿಲೆಯಂತಹ ಕಂಠದ ಮೂಲಕ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುವ ಶ್ರೇಯಾ ಘೋಷಲ್ ಅವರು ಒಂದು ಹಾಡಿಗೆ ಒಂದರಿಂದ ಒಂದುವರೆ ಲಕ್ಷ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಒಂದು ಕಾಲದ ಮ್ಯೂಸಿಕ್ ರೆಕಾರ್ಡ್ ಸಿಸ್ಟಂಗೆ ಹೋಲಿಸಿದರೆ ಈಗ ಪ್ರಸ್ತುತ ಟೆಕ್ನಾಲಜಿಯನ್ನು ಬಳಸಿ ಹೊಸ-ಹೊಸ ರೆಕಾರ್ಡಿಂಗ್ ಸಿಸ್ಟಂಗಳು ಸಹ ಬಳಕೆಯಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ ಅದರೊಂದಿಗೆ ಸಂಗೀತ ಕ್ಷೇತ್ರದಲ್ಲಿ ಹಲವಾರು ಹೊಸ-ಹೊಸ ವಿಧಾನಗಳನ್ನು ಸಹ ಅಳವಡಿಸಿಕೊಂಡಿದ್ದಾರೆ.

– ಸುಷ್ಮಿತಾ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...