ಇನ್ನೋಬ್ಬರನ್ನು ಹೀಯಾಳಿಸುವ ಮುಂಚೆ ನಮ್ಮ ಯೋಗ್ಯತೆ ತಿಳಿದಿರಲಿ..!

in ಮನರಂಜನೆ/ಸಿನಿಮಾ 1,910 views

ಕೆಲವು ದಿನಗಳ ಹಿಂದೆ ಫೇಸ್ಬುಕ್ ಮತ್ತು ವಾಟ್ಸ್ಅಪ್ ಗಳಲ್ಲಿ ಈ ಹುಡುಗನ ಫೋಟೋ ತುಂಬಾನೇ ವೈರಲ್ ಆಗಿತ್ತು. ಕೆಲವರಂತೂ ಈ ಹುಡುಗನ ಫೋಟೋ ಹಾಕಿ ದೇವರೇ ನಿನಗೆ ಕಣ್ಣಿಲ್ವಾ? ಕರುಣೆ ಇಲ್ಲವೇ? ಈ ಹುಡುಗನಿಗೆ ಇಂತಹ ಹುಡುಗಿನಾ? ನಾವೇನು ಕರ್ಮ ಮಾಡಿದ್ದೀವಿ. ಹಾಗೆ ಹೀಗೆ ಅಂತ ಫೇಸ್ಬುಕ್ ಮತ್ತು ವಾಟ್ಸ್ಅಪ್ ಗಳಲ್ಲಿ ಟ್ರೋಲ್ ಮಾಡಿದ್ದರು. ಆದರೆ ಅವನು ಯಾರು? ಅವನು ಮಾಡಿರುವ ಸಾಧನೆ ಏನು? ಅವನ ಹಿನ್ನೆಲೆ ಏನು? ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ತುಂಬಾ ಜನ ಪ್ರಯತ್ನವೇ ಪಡಲಿಲ್ಲ. ಈ ಹುಡುಗನ ಹೆಸರು ಅರುಣ್ ಕುಮಾರ್ ಅಂತ. ಆದರೆ ಅರುಣ್ ಕುಮಾರ್ ಅಂತ ಕರೆದರೆ ಯಾರಿಗೂ ಕೂಡ ಗೊತ್ತಾಗುವುದಿಲ್ಲ. ಅಟ್ಲಿ ಅಂತ ಕರೆಯ ಬೇಕಾಗುತ್ತದೆ. ಯಾಕೆಂದರೆ ಈತ ಫೇಮಸ್ ಆಗಿರುವುದು ಅಟ್ಲಿ ಅನ್ನುವ ಒಂದು ಹೆಸರಿನಿಂದ. ಈತ ಸೆಪ್ಟೆಂಬರ್ 21, 1986 ರಂದು ತಮಿಳುನಾಡಿನ ಮಧುರೈ ನಲ್ಲಿ ಜನಿಸುತ್ತಾನೆ. ಮತ್ತೆ ಇವರ ವಿದ್ಯಾಭ್ಯಾಸ ನೋಡುವುದಾದರೆ ಸತಿಭಾಮ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಈತ ತನ್ನ ಎಜುಕೇಷನ್ ಮುಗಿದ ನಂತರ ಚಿತ್ರರಂಗದ ಕಡೆ ಹೆಚ್ಚಿನ ಒಲವು ಇದ್ದ ಕಾರಣ ಭಾರತ ಚಿತ್ರರಂಗ ಕಂಡ ಯಶಸ್ವಿ ನಿರ್ದೇಶಕ ಶಂಕರ್ ಅವರ ಹತ್ತಿರ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇಂದಿರನ್, ನನ್ಬನ್ ಈ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅರುಣ್ ಕುಮಾರ್ ಅವರಿಗೆ ಒಂದು ಒಳ್ಳೆಯ ಅವಕಾಶ ಕೂಡ ಬಂತು.

Advertisement


ನಂತರ ಆತ ಸ್ವತಂತ್ರ ನಿರ್ದೇಶಕನಾಗಿ 2013 ರಲ್ಲಿ ರಾಜ-ರಾಣಿ ಅನ್ನುವ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ. ಆ ಚಿತ್ರ ಸೂಪರ್ ಹಿಟ್ ಆಗುತ್ತದೆ. ಮತ್ತೆ ಬೇರೆ ಭಾಷೆಗಳು ಡಬ್ ಆಗುತ್ತವೆ. ಮತ್ತೆ ಕೆಲವು ಭಾಷೆಗಳಲ್ಲಿ ರಿಮೇಕ್ ಕೂಡ ಆಗುತ್ತವೆ. ನಂತರ 2016 ರಲ್ಲಿ ವಿಜಯ್ ಅವರನ್ನ ಹಾಕಿಕೊಂಡು ತೆರಿ ಅನ್ನುವ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ. ಅದು ಕೂಡ ಸೂಪರ್ ಹಿಟ್ ಆಗುತ್ತದೆ. 2017 ರಲ್ಲಿ ಪುನಃ ವಿಜಯ್ ಅವರ ನಟನೆಯಲ್ಲಿ ಮರ್ಸಲ್ ಅನ್ನುವ ಸಿನಿಮಾವನ್ನ ನಿರ್ದೇಶನ ಮಾಡುತ್ತಾರೆ. ಅದು ಕೂಡ ಸೂಪರ್ ಹಿಟ್ ಆಗುತ್ತದೆ. ಇತರಹ ಆತನು ನಿರ್ದೇಶನ ಮಾಡಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗುತ್ತೆ. ತಮಿಳುನಾಡಿನ ಸ್ಟಾರ್ ನಟರುಗಳು ಈತನ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ.


ಆದರೆ ಈತನ ಆಸೆ ಮಾತ್ರ ರಜನಿಕಾಂತ್ ಅವರನ್ನ ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಅಂತ ತುಂಬಾನೇ ಆಸೆ ಇದೆ. ಆತ ಒಂದು ಚಿತ್ರವನ್ನ ನಿರ್ದೇಶನ ಮಾಡಿಕೊಡುವುದಕ್ಕೆ ಪಡೆಯುತ್ತಿರುವ ಸಂಭಾವನೆ 1.30 ಕೋಟಿ ರೂಪಾಯಿ. ಅಟ್ಲಿ ಅವರು ಕೃಷ್ಣಪ್ರಿಯ ಅನ್ನುವ ನಟಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮನುಷ್ಯನ ಬಣ್ಣ ನೋಡಿ ಮತ್ತೆ ಆತನ ಸೌಂದರ್ಯ ನೋಡಿ ನಾವು ಅವರ ಯೋಗ್ಯತೆಯನ್ನು ಯಾವತ್ತೂ ಅಳೆಯುವುದಕ್ಕೆ ಹೋಗಬಾರದು. ಯಾಕೆಂದರೆ ಪ್ರತಿಭೆ ಅನ್ನುವುದು ಯಾರಪ್ಪನ ಸ್ವತ್ತು ಅಲ್ಲ, ಅದು ಸುಂದರವಾಗಿರುವವರ ಬಳಿಯೇ ಇರಬೇಕು ಮತ್ತೆ ಶ್ರೀಮಂತನ ಬಳಿಯೇ ಇರಬೇಕು ಅನ್ನುವ ಒಂದು ಕಾನೂನು ಏನಿಲ್ಲಾ. ಶ್ರದ್ಧೆ ಮತ್ತು ಶ್ರಮ ಎರಡಿದ್ದರೆ ಯಾರು ಬೇಕಾದರೂ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು.

– ಸುಷ್ಮಿತಾ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...