“ಸರ್ ಆಕ್ಸಿಜನ್ ಸಿಗದೆ ನಮ್ಮಣ್ಣ ಸತ್ತೋದ್ರು, ನೀವೇನ್ ಮಾಡ್ತಿದೀರಿ?” ಎಂದು ಫೋನ್ ಮಾಡಿದ ವ್ಯಕ್ತಿಗೆ “ನಾ ಏನ್ ಮಾಡ್ಲಿ? ನಾಲಾಯಕ್ ಫೋನ್ ಇಡು” ಎಂದ BJP ಶಾಸಕ.! ಆಡಿಯೋ ವೈರಲ್

in Kannada News/News 192 views

ಬಾಗಲಕೋಟೆ: ಆಕ್ಸಿಜನ್​ ಬೆಡ್​ ಸಿಗದೆ ಕೋವಿಡ್​ನಿಂದ ಅಣ್ಣನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಶಾಸಕರಿಗೆ ಕರೆ ಮಾಡಿದರೆ, ಅವರಿಗೆ ಸಮಾಧಾನ ಹೇಳುವ ಬದಲು ‘ನಾಲಾಯಕ್ ಇಡು ಫೋನ್.. ದೊಡ್ಡ ಕಿಸಾಮತಿ ಮಾಡ್ತಿ’ ಎಂದು ಬೈದಿರುವ ಆಡಿಯೋ ವೈರಲ್​ ಆಗಿದೆ.

Advertisement

ಅಶೋಕ ದೊಂಡಿಬಾಗ ಗಾಯಕವಾಡ ಎಂಬುವರ ಸಹೋದರ ಕೋವಿಡ್​ಗೆ ಬಲಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಕ್ಸಿಜನ್​ ಸಿಗದೆ ತನ್ನ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಫೋನ್ ಮಾಡಿದ್ದ ಅಶೋಕ, ‘ನೀವು ಶಾಸಕರು ಇದ್ದೀರಿ. ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ದವಾಖಾನೆ ಮುಂದೆ ಕೂರಬೇಕು. ಮನೆಯಲ್ಲಿ ಕೂರಲಿ ಎಂದು ನಿಮ್ಮನ್ನು ಆರಿಸಿ ಕಳಿಸಿಲ್ಲ’ ಎನ್ನುತ್ತಿದ್ದಂತೆ ಗರಂ ಆದ ಶಾಸಕರು, ‘ಶಾಣ್ಯಾ ಅದಿ ಫೋನ್ ಇಡು, ನಾಲಾಯಕ್ ಇಡು ಪೋನ್, ದೊಡ್ಡ ಕಿಸಾಮತಿ ಮಾಡ್ತಿ…’ ಎಂದು ಬೈದಿದ್ದಾರೆ.

ಅಶೋಕ ದೊಂಡಿಬಾಗ ಅವರ ಅಣ್ಣ ಸಂಜಯ್ ದೊಂಡಿಬಾಗ(41) ಕೋವಿಡ್​ನಿಂದ ಶನಿವಾರ ಮೃತಪಟ್ಟಿದ್ದರು. ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ನಿವಾಸಿ ಆಗಿದ್ದ ಸಂಜಯ್​ಗೆ ಆಕ್ಸಿಜನ್ ಬೆಡ್ ಸಿಕ್ಕಿರಲಿಲ್ಲ. ಬೆಡ್​ಗಾಗಿ ಸಂಜಯ್​ ಕುಟುಂಬ ಬಾಗಲಕೋಟೆ, ಜಮಖಂಡಿ, ವಿಜಯಪುರ ಎಲ್ಲೆಡೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಆಕ್ಸಿಜನ್ ಸಿಗದೆ ವಿಜಯಪುರದಲ್ಲಿ ಸಂಜಯ್ ಮೃತಪಟ್ಟಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಇದೇ ಕಾರಣಕ್ಕೆ ಮೃತನ ಸಹೋದರ ಶಾಸಕರಿಗೆ ಈ ಅವ್ಯವಸ್ಥೆಯಿಂದ ನನ್ನಣ್ಣ ಸತ್ತ ಎಂದು ಹೇಳಲು ಪೋನ್ ಮಾಡಿದ್ದ. ಶಾಸಕರು ಸಮಾಧಾನಿಸುವ ಬದಲು ಸಿಡುಮಿಡಿಗೊಂಡು ಬೈದಾಡಿದ್ದಾರೆ.

ಸಂಜಯ್ ದೊಂಡಿಬಾಗ್

ಕೋವಿಡ್​ನಿಂದ ಮೃತಪಟ್ಟವನ ಸಹೋದರನಿಗೆ ಶಾಸಕರ ಬೈಗುಳ ಆಡಿಯೋ ವೈರಲ್​ ಆಗಿದೆ. ಅದೆಂಥಾ ಮಾತು ಹೇಳಿಬಿಟ್ಟಿರಿ ಶಾಸಕರೇ? ನಿಮ್ಮನ್ನು ಆಯ್ಕೆ ಮಾಡಿದ್ದಕ್ಕೂ ಸಾರ್ಥಕ ಆಯ್ತು ಬಿಡಿ. ಸಾವಿನ ಮನೆಯ ದುಃಖ ಅನುಭವಿಸೋರಿಗೆ ಗೊತ್ತು ಎಂದು ಶಾಸಕರ ನಡೆಯನ್ನ ಸಾರ್ವಜನಿಕರು ಟೀಕಿಸಿದ್ದಾರೆ.

Advertisement
Share this on...