ರಾಜ್ಯದಲ್ಲಿ ಭಾರೀ ಬಹುಮತದಿಂದ ಗೆದ್ದರೂ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಮಮತಾ ಬ್ಯಾನರ್ಜಿ: ಅಮಿತ್ ಶಾಹ್ ರಣತಂತ್ರಕ್ಕೆ ಕಂಗಾಲಾದ ಮಮತಾ

in Kannada News/News/ರಾಜಕೀಯ 425 views

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದು ಮೂರನೆಯ ಬಾರಿಗೆ ಮುಖ್ಯಮಂತ್ರಿ ನಂತರವೂ ತನ್ನದೇ ಪಕ್ಷದ ಶಾಸಕರು ಪಕ್ಷಾಂತರ ಅಥವ ರಾಜೀನಾಮೆ ನೀಡಬಹುದು ಎಂಬ ಭಯದಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಏಳು ಶಾಸಕರನ್ನು ಬಿಜೆಪಿ ಮುಖಂಡ ಸುವೆಂಡು ಅಧಿಕಾರಿಯ ಭದ್ರಕೋಟೆಯಲ್ಲು ಮಂತ್ರಿಗಳನ್ನಾಗಿ ಮಾಡಿದ್ದಾರೆ. ಆದರೆ ರಾಜಕೀಯ ಪಂಡಿತರು ಹೇಳುವ ಪ್ರಕಾರ ಪ್ರತಿಪಕ್ಷದ ನಾಯಕ ಸುವೇಂಡು ಅಧಿಕಾರಿಯ ಮೇಲೆ ಒತ್ತಡ ಹೇರಲು ಮಮತಾ ಹೀಗೆ ಮಾಡಿದ್ದಾರೆ ಎಂದು ಹೇಳುತ್ತಾರೆ.

Advertisement

ರಾಜ್ಯದ ಮಂತ್ರಿಗಳ ಭದ್ರಕೋಟೆ ಮೇದಿನಿಪುರ್

ಮಮತಾ ಬ್ಯಾನರ್ಜಿಯ ಎರಡನೇ ಅವಧಿಯಲ್ಲಿ, ಮಮತಾ ಬ್ಯಾನರ್ಜಿಯ ಅತ್ಯಾಪ್ತರೆಂದೇ ಕರೆಯಲ್ಪಡುವ ಶುಭೇಂದು ಅಧಿಕಾರಿ ಕೂಡ ಅದೇ ಪ್ರದೇಶದಿಂದ ಬಂದವರಾಗಿದ್ದರು. ಆದರೆ ಚುನಾವಣೆಗೂ ಮುನ್ನವೇ ಅವರು ಟಿಎಂಸಿಯನ್ನು ತೊರೆದು ಬಿಜೆಪಿಗೆ ಸೇರಿದರು ಮತ್ತು ನಂದಿಗ್ರಾಮದಿಂದ ಸ್ಪರ್ಧಿಸಿ ಮಮತಾ ಬ್ಯಾನರ್ಜಿಯನ್ನ ಸೋಲಿಸಿದರು. ಮೇದಿನಿಪುರದ ತನ್ನ ಶಾಸಕರು ಪಕ್ಷಾಂತರ ಅಥವ ರಾಜೀನಾಮೆ ನೀಡಬಹುದು ಎಂಬ ಭಯ ಮಮತಾ ಬ್ಯಾನರ್ಜಿಯನ್ನ ಕಾಡುತ್ತಿದೆ. ಅದೇ ಕಾರಣದಿಂದ ಮಮತಾ ಬ್ಯಾನರ್ಜಿ ಶುಭೇಂದು ಅಧಿಕಾರಿಯ ಹಿಡಿತವಿರುವಂತಹ ಪ್ರದೇಶಗಳ 7 ಟಿಎಂಸಿ ಶಾಸಕರನ್ನು ಮಂತ್ರಿಗಳಾಗಿ ಮಾಡಿದ್ದಾರೆ.

ವಿಶೇಷವೆಂದರೆ, ರಾಜ್ಯದ ಇತರ ಪ್ರದೇಶಗಳಿಗಿಂತ ಮೇದಿನಿಪುರ ಬಂಗಾಳ ರಾಜಕೀಯದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿರುವ ಪ್ರದೇಶವಾಗಿದೆ. ಶುಭೇಂದು ಅಧಿಕಾರಿಯು ಒಂದು ಕಾಲದಲ್ಲಿ ಈ ಪ್ರದೇಶದಿಂದ ಮಮತಾ ಸರ್ಕಾರದಲ್ಲಿ ಸಚಿವರಾಗಿದ್ದರು. ಶುಭೇಂದು ಅಧಿಕಾರ ಇರುವವರೆಗೂ ಯಾವುದೇ ನಾಯಕನಿಗೂ ಆ ಪ್ರದೇಶವನ್ನು ಚೇಸ್ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಈಗ ಮಮತಾ ಈ ಪ್ರದೇಶದ ನಾಯಕರ ಬಗ್ಗೆ ಹೆಚ್ಚಿನ ಗಮನ ನೀಡಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಆ ಪ್ರದೇಶದಲ್ಲಿ ಶುಭೇಂದು ಅಧಕಾರಿ ಹಿಡಿತವನ್ನು ದುರ್ಬಲಗೊಳಿಸಬಹುದು ಮಮತಾ ಉದ್ದೇಶವಾಗಿದೆ.

ಶುಭೇಂದು ಅಧಿಕಾರಿಯ ಹಿಡಿತವನ್ನ ದುರ್ಬಲಗೊಳಿಸುವ ಉದ್ದೇಶ

ರಾಜಕೀಯ ವಿಶ್ಲೇಷಕರು ಇದನ್ನು ಮಮತಾ ಬ್ಯಾನರ್ಜಿ ಬಿಜೆಪಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಶುಭೇಂದು ಅಧಿಕಾರಿಯ ಹಿಡಿತವನ್ನು ಈ ಪ್ರದೇಶದಲ್ಲಿ ದುರ್ಬಲಗೊಳಿಸುವುದಾಗಿ ನೋಡುತ್ತಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಮೇದಿನಿಪುರದಿಂದ ಈವರೆಗೂ ಬಂಗಾಳದ ಸರ್ಕಾರದಲ್ಲಿ ಇಷ್ಟು ಮಂತ್ರಿಗಳನ್ನು ಎಂದಿಗೂ ಆಯ್ಕೆ ಮಾಡಿರಲಿಲ್ಲ. ಎಡ ಸರ್ಕಾರದಲ್ಲಿ ಈ ಪ್ರದೇಶದಿಂದ ಗರಿಷ್ಠ 6 ಮಂತ್ರಿಗಳನ್ನು‌ ಮಾತ್ರ ಮಾಡಲಾಗಿತ್ತು. ಆದರೆ ಮಮತಾ ಬ್ಯಾನರ್ಜಿ ಮೇದಿನಿಪುರ ಪ್ರದೇಶದಿ 7 ಜನ ಶಾಸಕರಿಗೆ ಮಂತ್ರಿಗಳನ್ನಾಗಿ ಮಾಡಿದ್ದಾರೆ.

ಮಮತಾ ಬ್ಯಾನರ್ಜಿಯನ್ನು ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಶುಭೇಂದು ಅಧಿಕಾರಿಯು ಸೋಲಿಸಿದ್ದಾರೆ. ಈ ಭರ್ಜರಿ ಗೆಲುವಿನ ನಂತರ ಬಿಜೆಪಿ ಅವರನ್ನು ವಿಧಾನಸಭೆಯ ನಾಯಕ ಮತ್ತು ಪ್ರತಿಪಕ್ಷದ ನಾಯಕರಾಗಿ ಆಯ್ಕೆ ಮಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮೇದಿನಿಪುರದಿಂದ ಶುಭೇಂದು ಅಧಿಕಾರಿ ಅವರ ಹಿಡಿತವನ್ನು ಕಡಿಮೆ ಮಾಡಬೇಕೆಂದು ಟಿಎಂಸಿ ನಾಯಕತ್ವ ಬಯಸಿದೆ. ಆದ್ದರಿಂದ, ಈ ಪ್ರದೇಶದಿಂದ 7 ಮಂತ್ರಿಗಳನ್ನು ನೇಮಿಸಲಾಗಿದೆ. ಮಂತ್ರಿಗಳಾಗಿರುವ ಶಾಸಕರಲ್ಲಿ ಬಿರ್ಬಾಹ ಹನ್ಸ್ಡಾ, ಸೋಮೆನ್ ಮಹಾಪಾತ್ರ, ಅಖಿಲ್ ಗಿರಿ, ಮನಸ್ ಭುಯಾನ್, ಹುಮಾಯೂನ್ ಕಬೀರ್, ಶ್ರೀಕಾಂತ್ ಮಹತೋ ಮತ್ತು ಶಿಯುಲಿ ಸಹಾ ಸೇರಿದ್ದಾರೆ.

ಬಿರ್ಬಾಹ ಹನ್ಸ್ಡಾ ಜಾರ್ಗ್ರಾಮ್ನ ಶಾಸಕ, ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಸೋಮೆನ್ ಮಹಾಪಾತ್ರ ಮತ್ತು ಅಖಿಲ್ ಗಿರಿ ಹಿಂದಿನ ಮೇದಿನಿಪುರವನ್ನು ಪ್ರತಿನಿಧಿಸುತ್ತಾರೆ. ಅತಿ ಹೆಚ್ಚು ನಾಲ್ಕು ಮನಸ್ ಭುಯಾನ್, ಹುಮಾಯೂನ್ ಕಬೀರ್, ಶ್ರೀಕಾಂತ್ ಮಹತೋ ಮತ್ತು ಶಿಯುಲಿ ಸಹಾ ಅವರನ್ನು ಪಶ್ಚಿಮ ಮದಿನಿಪುರದಿಂದ ಮಂತ್ರಿಗಳನ್ನಾಗಿ ಮಾಡಲಾಗಿದೆ. ಸೋಮೆನ್ ಮಹಾಪಾತ್ರ ಮತ್ತು ಮನಸ್ ಭುಯಾನ್ ಅವರಿಗೆ ಪೂರ್ಣ ಮಂತ್ರಿ ಸ್ಥಾನಮಾನ ನೀಡಲಾಗಿದೆ. ಹುಮಾಯೂನ್ ಕಬೀರ್ ಮತ್ತು ಅಖಿಲ್ ಗಿರಿ ಅವರನ್ನು ಸ್ವತಂತ್ರ ಉಸ್ತುವಾರಿಯೊಂದಿಗೆ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಶುಭೇಂದು ಅಧಿಕಾರಿ ಮೇದಿನಿಪುರದಲ್ಲಿ ಭಾರೀ ಪ್ರಭಾವ ಹೊಂದಿದ್ದಾರೆ. ಆ ಪ್ರಭಾವವನ್ನ ಕಡಿಮೆ ಮಾಡಲು ಮಮತಾ
ಈ ಪ್ರದೇಶದ ಇತರ ನಾಯಕರತ್ತ ಗಮನ ಹರಿಸಲು ಮುಂದಾಗಿದ್ದಾರೆ.

Advertisement
Share this on...