“ನಿಮ್ಮ ನಾಯಕ ನಮ್ಮಲ್ಲೇನಾದರೂ ಜನಿಸಿದ್ದರೆ ನಾವು ಇಡೀ ಬ್ರಹ್ಮಾಂಡವನ್ನೇ ಆಳುತ್ತಿದ್ದೇವು”: ಬರಾಕ್ ಒಬಾಮಾ

in Kannada News/News/Story/ಕನ್ನಡ ಮಾಹಿತಿ 2,903 views

ಛತ್ರಪತಿ ಶಿವಾಜಿ ಮಹಾರಾಜರೇನಾದರೂ ನಮ್ಮ ಇಂಗ್ಲೆಂಡಿನಲ್ಲಿ ಹುಟ್ಟಿದ್ದಿದ್ದರೆ ಬರೀ ಈ ಜಗತ್ತನ್ನಷ್ಟೇ ಅಲ್ಲ ಇಡೀ ಬ್ರಹ್ಮಾಂಡವನ್ನೇ ಆಳುತ್ತಿದ್ದೆವು

Advertisement
– ಮೌಂಟ್ ಬ್ಯಾಟನ್, ಇಂಗ್ಲೆಂಡ್

ಭಾರತವೇನಾದರೂ ಸ್ವತಂತ್ರವಾಗಬೇಕಾದರೆ ಅದಕ್ಕಿರೋದು ಒಂದೇ ದಾರಿ ಅದು ಶಿವಾಜಿ ಮಹಾರಾಜರ ಹಾಗೆ ಹೋರಾಡುವುದು ಮಾತ್ರ – ನೇತಾಜಿ ಸುಭಾಷ ಚಂದ್ರ ಬೋಸ್

ನೇತಾಜಿಯವರೇ ನಿಮ್ಮ ದೇಶ ಸ್ವತಂತ್ರವಾಗಿ ಬ್ರಿಟೀಷರನ್ನ ನಿಮ್ಮ ದೇಶದಿಂದ ಒದ್ದೋಡಿಸೋಕೆ ಯಾವ ಹಿಟ್ಲರ್ ನ ಅವಶ್ಯಕತೆಯೂ ಇಲ್ಲ, ನೀವು ಶಿವಾಜಿ‌ಮಹಾರಾಜರ ಇತಿಹಾಸವನ್ನೊಮ್ಮೆ ಓದಿ ಬಿಡಿ ಸಾಕು – ಅಡಾಲ್ಫ್ ಹಿಟ್ಲರ್, ಜರ್ಮನಿ

ಶಿವಾಜಿ ಎಂಬುದು ಕೇವಲ ಹೆಸರಲ್ಲ ಅದು ಭಾರತದ ಯುವಶಕ್ತಿಗೆ ಆದರ್ಶ, ಆ ಆದರ್ಶ, ಛಾತಿಯಿಂದಲೇ ಭಾರತವನ್ನು ಸ್ವತಂತ್ರ ಮಾಡಬಹುದು – ಸ್ವಾಮಿ ವಿವೇಕಾನಂದ

ಶಿವಾಜಿ ಮಹಾರಾಜರೇನಾದರೂ ಅಮೇರಿಕಾದಲ್ಲಿ ಜನ್ಮ ತಾಳಿದ್ದಿದ್ದರೆ ಆತನನ್ನ ನಾವು ಪ್ರಖರವಾಗಿ ಹೊಳೆಯುವ, ಮುಟ್ಟಿದರೆ ಸುಟ್ಟು ಬೂದಿಯಾಗುವ ದೇಶದ ಸೂರ್ಯ ಎಂದೇ ಕರೆಯುತ್ತಿದ್ದೆವು – ಬರಾಕ್ ಒಬಾಮಾ, ಅಮೇರಿಕಾ

ಶಿವಾಜಿ ಮಹಾರಾಜರೇನಾದರೂ ಇನ್ನೂ ಹತ್ತು ವರ್ಷಗಳ ಕಾಲ ಬದುಕಿದ್ದಿದ್ದರೆ ನಾವು ಬ್ರಿಟಿಷರು ಭಾರತಕ್ಕೆ ಬರೋದು ಬಿಡಿ ಭಾರತದ ತಂಟೆಗೂ ಹೋಗುತ್ತಿರಲಿಲ್ಲವೇನೋ – ಬ್ರಿಟಿಷ್ ಗವರ್ನರ್

ಕಾಬುಲ್ ನಿಂದ ಕಂದಹಾರ್ ವರೆಗೆ ನನ್ನ ತೈಮೂರ್ ಕುಟುಂಬ ಮೊಘಲ್ ಸಂಸ್ಥಾನವನ್ನ ಸ್ಥಾಪಿಸಿತ್ತು. ಇರಾಕ್, ಇರಾನ್, ತುರ್ಕಿಸ್ತಾನ್ ದೇಶಗಳನ್ನ ನಮ್ಮ ಪೂರ್ವಜರ ಸೇನೆ ಬಗ್ಗು ಬಡಿದಿತ್ತು. ಆದರೆ ಶಿವಾಜಿ‌ ಮಹಾರಾಜರು ನಮ್ಮ ಗೆಲುವಿಗೆ ಬ್ರೇಕ್ ಹಾಕಿದ್ದರು.

ಶಿವಾಜಿ ಮಹಾರಾಜರನ್ನ ಸೋಲಿಸೋಕೆ ನಾನು ನನ್ನ ಸಂಪೂರ್ಣ ಯುಕ್ತಿ, ಶಕ್ತಿಯನ್ನ ಪ್ರಯೋಗಿಸಿದರೂ ಆತನನ್ನ ನನ್ನ ಅಡಿಯಾಳಾಗಿಸಲು ಸಾಧ್ಯವಾಗಲಿಲ್ಲ.

ಓ ಅಲ್ಲಾಹ್ ನೀನು ನನಗೆ ಭಯಗೊಳ್ಳದ, ಅಪ್ರತಿಮ ಸಾಹಸಿಯೊಬ್ಬನನ್ನ ನನಗೆ ಶತ್ರುವಾಗಿ ನೀಡಿದ್ದೀಯ, ದಯವಿಟ್ಟು ಸ್ವರ್ಗದ ನಿನ್ನ ಆ ಬಾಗಿಲನ್ನ ತೆರೆದಿಟ್ಟಿರು, ಜಗತ್ತಿನ ಆ ಸರ್ವಶ್ರೇಷ್ಟ, ಸಹೃದಯಿ ಸೇನಾನಿ ನಿನ್ನ ಹತ್ತಿರ ಬರುತ್ತಿದ್ದಾನೆ – ಔರಂಗಜೇಬ್ (ಶಿವಾಜಿ ಮಹಾರಾಜರ ಸಾವಿನ ನಂತರ ತಾನು ಮಾಡುತ್ತಿದ್ದ ನಮಾಜ್ ನಲ್ಲಿ ಬೇಡಿಕೊಂಡಿದ್ದು)

ಆ ದಿನ ಶಿವಾಜಿ ಬರೀ ನನ್ನ ಬೆರಳುಗಳನ್ನಷ್ಟೇ ಅಲ್ಲ ನನ್ನ ಅಹಂಕಾರವನ್ನೂ ಕತ್ತರಿಸಿಬಿಟ್ಟಿದ್ದ. ಆತನನ್ನ ಕನಸಿನಲ್ಲೂ ಭೇಟಿಯಾಗೋಕೆ ನನಗೆ ಭಯ ಆಗುತ್ತೆ – ಶಾಹಿಸ್ತಾ ಖಾನ್

ನನ್ನ ರಾಜ್ಯದಲ್ಲಿ ಶಿವಾಜಿಯನ್ನ ಸೋಲಿಸುವ ಗಂಡು ಹುಟ್ಟೇ ಇಲ್ಲವೇ?  – ಶಿವಾಜಿ‌ಮಹಾರಾಜರ ಪರಾಕ್ರಮದಿಂದ ಬೇಸತ್ತಿದ್ದ ಆದಿಲ್ ಶಾಹ್

17 ನೆ ಶತಮಾನದಲ್ಲಿ ಯೂರೋಪಿನ ಸುಪ್ರಸಿದ್ಧ ಹಾಗು ಅತಿ ಬೇಡಿಕೆಯ ಪತ್ರಿಕೆಯಾಗಿದ್ದ “ಲಂಡನ್ ಗೆಜೆಟ್” ಶಿವಾಜಿ ಮಹಾರಾಜರ ಬಗ್ಗೆ “ಆತ ಭಾರತದ ರಾಜ” ಆದರೆ ಸಣ್ಣ ವಯಸ್ಸಿನಲ್ಲೇ ಆತನ ನರಣ ಇತಿಹಾಸದ ಪುಟಗಳನ್ನೇ ಬದಲಿಸಿಬಿಟ್ಟಿತು ಎಂದು ತನ್ನ ಪತ್ರಿಕೆಯಲ್ಲಿ ಬರೆಯುತ್ತೆ.

ಶಿವಾಜಿ ಮಹಾರಾಜರಂತಹ ಅಪ್ರತಿಮ ಸಾಹಸಿ ಕೇವಲ 30 ವರ್ಷಗಳ ಕಾಲದ ತನ್ನ ಹಿಂದವಿ ಸ್ವರಾಜ್ಯದ ಕನಸಿನಿಂದಲೇ ಜಗತ್ತಿಗೆ ಸರ್ವಶ್ರೇಷ್ಟ ರಾಜನಾಗಿ ಆದರಿಸುವ ಹಾಗೆ ಆಗಿದ್ದಾನೆ.

ಕನಸಲ್ಲೂ ಶಿವಾಜಿ ಮಹಾರಾಜರನ್ನ ಭೇಟಿಯಾಗಲ್ಲ ಅಂತ ಹೇಳಿದ್ಸ ಶಾಹಿಸ್ತಾ ಖಾನ್ ಅಬು ತಾಲಿಬಾನ್ ಹಾಗು ತುರ್ಕಿಸ್ತಾನದ ರಾಜನಾಗಿದ್ದ. ಬೆಹಲೋಲ್ಕಾಮ್ ಪಠಾಣ್, ಸಿಕಂದರ್ ಪಠಾಣ್, ಚಿದ್ರಾಖಾನ್ ಪಠಾಣ್ ರಂತಹ ಅಫ್ಘಾನಿಸ್ತಾನದ ಸರದಾರರೂ ಶಿವಾಜಿ ಎಂದರೆ ಬೆಚ್ಚಿ ಬೀಳುತ್ತಿದ್ದರು.

ಇಷ್ಟೇ ಅಲ್ಲ ಮಂಗೋಲಿಯಾದ ಅಪ್ರತಿಮ ಸಾಹಸಿ ಯೋಧ ದಿಲೇರಖಾನ್ ಪಠಾಣನಂತೋನನ್ನೂ ಶಿವಾಜಿ ಮಹಾರಾಜರು ಹೊಸಕಿ ಹಾಕಿದ್ದರೆಂದರೆ ಶಿವಾಜಿಗೆ ಅದೆಂಥಾ ಶಕ್ತಿ ಇತ್ತು ಅನ್ನೋದನ್ನೊಮ್ಮೆ ಊಹಿಸಿ

ಸಿದ್ಧಿ ಜೋವಹಾರ್ ಹಾಗು ಸಿದ್ದಿ ಸಲಬಾ ನಿಂದ ಹಿಡಿದು ಖಾನ್ ಗಳವರೆಗೆ ಇರಾನಿ ಯೋದ್ಧರು ಸಮುದ್ರದ ಕೋಟೆಗಳ ಮೂಲಕ ಶಿವಾಜಿಗೆ ಕೆಣಕಲು ಮುಂದಾಗಿದ್ದಕ್ಕೆ ಶಿವಾಜಿ ಮಹಾರಾಜರು ತಾವು ಮರಣವನ್ನಪ್ಪುವುದಕ್ಕೂ ಮುನ್ನ ಭಾರತದ ಮೊಟ್ಟ ಮೊದಲ ಇಂಡಿಯನ್ ನೇವಿ(ಭಾರತೀಯ ನೌಕಾಸೇನೆ)ಯನ್ನ ಕಟ್ಟಿ ಹೋಗಿದ್ದರು.

ಈ ಜಗತ್ಪ್ರಸಿದ್ಧ ಉಂಬೇರಖಿಂದ್ ಯುದ್ಧದ ಉಲ್ಲೇಖ ಗಿನ್ನಿಸ್ ವರ್ಲ್ಡ್ ಬುಕ್ ನಲ್ಲೂ ದಾಖಲಾಗಿದ್ದು ಅದರಲ್ಲಿ ಉಜ್ಬೇಕಸ್ತಾನ(ರಷ್ಯಾ)ನ ಕರ್ತಲಾಬ್ ಖಾನ್ ನ 30 ಸಾವಿರ ಸೈನಿಕರ ಪಡೆಯನ್ನು ಶಿವಾಜಿ ಮಹಾರಾಜರ ಕೇವಲ ಒಂದು ಸಾವಿರದ ಮಾವಳಾಸ್ ಸೇನೆ ಸೋಲಿಸಿತ್ತು. ನೆನಪಿರಲಿ ಈ ಯುದ್ಧದಲ್ಲಿ ಒಬ್ಬನೇ ಒಬ್ಬ ಶತ್ರುವನ್ನ ಶಿವಾಜಿ ಸೈನ್ಯ ಜೀವಸಹಿತ ವಾಪಸ್ ಓಡಿ ಹೋಗೋಕೆ ಬಿಟ್ಟಿರಲಿಲ್ಲ.

ಸ್ನೇಹಿತರೇ ಗೂಗಲ್ ನಲ್ಲಿ “Shivaji the Management Guru” ಅಂತ ಒಮ್ಮೆ ಹುಡುಕಿ ನೋಡಿ ಬೋಸ್ಟನ್ ಯೂನಿವರ್ಸಿಟಿಯಲ್ಲಿ ಶಿವಾಜಿ ಮಹಾರಾಜರ ಒಂದು ಸಬ್ಜೆಕ್ಟನ್ನೇ ಆ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದೆ. ಭಾರತೀಯ ಧರ್ಮಯೋಧನ ಬಗ್ಗೆ ವಿದೇಶಗಳಲ್ಲೂ ಝೇಂಕಾರ ಮೊಳಗುತ್ತಿದ್ದರೆ ಇಲ್ಲಿ ನಾವು ಮಾತ್ರ ಶಿವಾಜಿ ಮರಾಠಾ ರಾಜನಾಗಿದ್ದ, ಆತ ಕನ್ನಡ ವಿರೋಧಿಯಾಗಿದ್ದ, ಆತ ಹಾಗೆ ಮಾಡಿದ್ದ ಹೀಗೆ ಮಾಡಿದ್ದ ಅಂತ ಕ್ಷುಲ್ಲಕ, ಅಸಂಬದ್ಧ ವಾದಗಳನ್ನ ಮಾಡುತ್ತ ನಮ್ಮ ನೆಲದ ಆ ಅಪ್ರತಿಮ ರಾಜನನ್ನು ಹೀಯಾಳುಸುತ್ತಿದ್ದೇವಲ್ಲ ನಾಚಿಕೆಯಾಗಬೇಕು!!!

– Vinod Hindu Nationalist

Advertisement
Share this on...