“ಅಂದು ದರ್ಶನ್ ಸರ್ ಇಲ್ಲದೆ ಹೋಗಿದ್ರೆ ನಾನು ಇವತ್ತಿಗೂ ಆಟೊ ಡ್ರೈವರ್ ಆಗೇ ಇರ್ತಿದ್ದೆ” ಖ್ಯಾತ ನಿರ್ದೇಶಕ

in FILM NEWS/Kannada News/News 728 views

ಅಸಿಸ್ಟೆಂಟ್​ ಸ್ಟಂಟ್​ ಮಾಸ್ಟರ್​ ಆಗಿ ಕನ್ನಡ ಚಿತ್ರರಂಗಕ್ಕೆ ಅಚಾನಕ್​ ಎಂಟ್ರಿ ಕೊಟ್ಟ ರವಿವರ್ಮಾಗೆ ಇಂಡಿಪೆಂಡೆಂಟ್​​ ಸ್ಟಂಟ್​ ಮಾಸ್ಟರ್​ ಆಗಿ ಬ್ರೇಕ್​ ನೀಡಿದ್ದೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ಧರ್ಮ ಸಿನಿಮಾ.

Advertisement

2004ರಲ್ಲಿ ತೆರೆ ಕಂಡ ಈ ಸಿನಿಮಾ ರವಿವರ್ಮಾ ಬದುಕಿನ ದಿಕ್ಕನ್ನೇ ಬದಲಿಸಿತ್ತು. ದರ್ಶನ್​ರಿಂದ ಈ ಆಫರ್​ ಬರದೇ ಹೋಗಿದ್ದಲ್ಲಿ, ಚಿತ್ರರಂಗಕ್ಕೂ ಬರುವ ಮೊದಲು ಆಟೋ ಓಡಿಸುತ್ತಿದ್ದ ರವಿವರ್ಮಾ ಮತ್ತೆ ರಾತ್ರಿ ಆಟೋ ಓಡಿಸಬೇಕು ಅಂತ ಫಿಕ್ಸ್​ ಆಗಿದ್ದರು. ಅದೇ ಸಮಯಕ್ಕೆ ಆಫರ್​ ಕೊಟ್ಟ ದರ್ಶನ್​ ಅವರನ್ನ ರವಿವರ್ಮಾ ನೆನಪಿಸಿಕೊಂಡಿದ್ದಾರೆ. ದರ್ಶನ್​ ತಮಗೆ ಗಾಡ್​ ಫಾದರ್​ ಅಂತಾರೆ ರವಿವರ್ಮಾ.

ನಾನು ಇಂಡಿಪೆಂಡೆಂಟ್​ ಆದ ಮೇಲೆ ನನಗೆ ಇಲ್ಲಿ ಯಾರೂ ಕೆಲಸ ಕೊಟ್ಟಿರಲಿಲ್ಲ. ಅವರಿಗೂ ಒಂದು ನಂಬಿಕೆ ಬೇಕಲ್ಲ. ಬರೀ ಅಸಿಸ್ಟೆಂಟ್​ ಆಗಿ ಕೆಲಸ ಮಾಡಿದ್ದೆ. ಈಗಾದ್ರೆ ಮೊಬೈಲ್​ನಲ್ಲೇ ನಮ್ಮ ಕೆಲಸಗಳನ್ನ ತೋರಿಸಬಹುದು. ಆ ಟೈಮ್​ನಲ್ಲಿ ಒಂದು ಹ್ಯಾಂಡಿ ಕ್ಯಾಮ್​ ತೆಗೆದುಕೊಳ್ಳೋಕೂ ನನ್ನ ಹತ್ರ ದುಡ್ಡಿರಲಿಲ್ಲ. ಬಾಯಿ ಮಾತಲ್ಲಿ ನನ್ನ ಕೆಲಸಗಳ ಬಗ್ಗೆ ಹೇಳ್ತಿದ್ದಿದ್ದು ವರ್ಕ್​ ಔಟ್​ ಆಗ್ತಿರಲಿಲ್ಲ. ಎರಡು- ಎರಡೂವರೆ ವರ್ಷ ನನಗೆ ಯಾರೂ ಕೆಲಸ ಕೊಟ್ಟಿಲ್ಲ. ಸರಿ ನನ್ನ ಲೈಫ್​ ಇಷ್ಟೆ, ಏನೂ ಇಲ್ಲ ಅಂತ ಅಂದುಕೊಂಡಿದ್ದಾಗ, ನನ್ನ ಕರೆಸಿ ನನಗೆ ಕೆಲಸ ಕೊಟ್ಟಿದ್ದೇ ದರ್ಶನ್​

ಅವರ ಧರ್ಮ ಸಿನಿಮಾದಲ್ಲಿ ಕರೆಸಿ ಕೆಲಸ ಕೊಟ್ರು. ನಾನು ಅಸಿಸ್ಟೆಂಟ್​ ಆಗಿ ಕೆಲಸಕ್ಕೆ ಸೇರಿದಾಗ ದರ್ಶನ್​ ಲೈಟ್​ ಮ್ಯಾನ್​ ಆಗಿ ಕೆಲಸ ಮಾಡ್ತಿದ್ರು. ನಮ್ಮ ಮಧ್ಯೆ ಫ್ರೆಂಡ್ಸ್​​ ಅನ್ನೋ ಬಾಂಡಿಂಗ್​ ಶುರುವಾಗಿದ್ದು ಹಾಗೇ. ಅದೇ ಫ್ರೆಂಡ್​ಶಿಪ್​ ನನ್ನ ಕೈ ಹಿಡಿಯುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ದರ್ಶನ್​ ಅವರ ಧರ್ಮ ಸಿನಿಮಾಗೆ ಸ್ಟಂಟ್​​ ಕೊರಿಯೋಗ್ರಾಫಿ ಮಾಡ್ದೆ. ಆಮೇಲೆ ಯಾವತ್ತೂ ತಿರುಗಿ ನೋಡಿಲ್ಲ. ಆದ್ರೆ ಯಾವತ್ತೂ ಬಾಲಿವುಡ್​ ಬಗ್ಗೆ ಕನಸೇ ಕಂಡಿರಲಿಲ್ಲ. ಅದು ಆಕಾಶ ನಾವು ಭೂಮಿಯಲ್ಲಿ ಇದ್ದೀವಿ ಅಂತಾನೇ ಇತ್ತು ನನ್ನ ತಲೆಯಲ್ಲಿ. ಧರ್ಮ ಸಿನಿಮಾದಲ್ಲಿ ಅವಕಾಶ ಸಿಕ್ಕಿರಲಿಲ್ಲ ಅಂದ್ರೆ ನನಗೆ ಇನ್ನು ಇಲ್ಲೇನೂ ಸಿಗಲ್ಲ ಅಂತಾನೇ ಅಂದುಕೊಂಡಿದ್ದೆ. ನಾನು ಮತ್ತೆ ನೈಟ್​ ಆಟೋ ಓಡಿಸ್ಬೇಕು ಅಂತ ಫಿಕ್ಸ್​ ಆಗಿದ್ದೆ.

– ರವಿವರ್ಮಾ, ಸ್ಟಂಟ್​ ಮಾಸ್ಟರ್​

ಇನ್ನು ಅದೆಷ್ಟೋ ಬಾರಿ ತೆಲುಗು ಸಿನಿಮಾಗಳಿಗೆ ಸ್ಟಂಟ್​ ಕೊರಿಯೋಗ್ರಾಫಿ ಮಾಡಲು ಅವಕಾಶ ಸಿಕ್ಕಾಗಲೂ, ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡ್ತಿದ್ದ ಕಾರಣ ತೆಲುಗಿನಿಂದ ದೂರ ಉಳಿದಿದ್ದರು. ಸದ್ಯ ರವಿವರ್ಮಾ, ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿಯಲ್ಲೂ ಬೇಡಿಕೆಯ ಸ್ಟಂಟ್​ ಮಾಸ್ಟರ್​ ಆಗಿದ್ದಾರೆ.

‘ಒಂದು ಚಾಲೆಂಜ್​ ಮಾತ್ರ ಇತ್ತು. ಇಲ್ಲಿ ಬೇರೆ ಭಾಷೆಗಳಿಂದ ಸ್ಟಂಟ್​ ಮಾಸ್ಟರ್​ಗಳನ್ನ ಕರೆಸಿಕೊಳ್ತಿದ್ರು. ಇಲ್ಲಿಯವರ ಮೇಲೆ ಯಾಕೆ ನಮ್ಮವರಿಗೆ ನಂಬಿಕೆ ಇಲ್ಲ ಅನಿಸ್ತಿತ್ತು. ನಾನು ಕೆಲಸ ಮಾಡಿದ ಎಲ್ಲಾ ಸಿನಿಮಾಗಳ ವಿಡಿಯೋ ಮಾಡಿ ಒಂದು ಸಿಡಿಯಲ್ಲಿ ಹಾಕಿ, ಹೈದರಾಬಾದ್​ನಲ್ಲಿ ಎರಡು ವರ್ಷ ಎಲ್ಲಾ ಕಡೆ ಸುತ್ತಾಡಿದ್ದೀನಿ, ಅದೂ ಅಲ್ಲಿ ಅವಕಾಶಕ್ಕಾಗಿ. ಈ ಮಧ್ಯೆ ಒಂದು ತೆಲುಗು ಸಿನಿಮಾ ಆಫರ್​ ಬಂದಾಗ ನಾನು ಸಂಗೊಳ್ಳಿರಾಯಣ್ಣ ಸಿನಿಮಾ ಮಾಡ್ತಿದ್ದೆ, ಸೋ ಹೋಗಿಲ್ಲ. ಮತ್ತೆ ಹುಡುಗರು ಸಿನಿಮಾ ಮಾಡ್ತಿದ್ದಾಗ ಮತ್ತೊಂದು ತೆಲುಗು ಸಿನಿಮಾಗೆ ಕರೆದ್ರು, ಆಗಲೂ ಹೋಗಿಲ್ಲ. ಕೊನೆಗೆ ತೆಲುಗಿನಲ್ಲಿ ಸಿಕ್ಕಿದ್ದು ಮಹಾತ್ಮ ಸಿನಿಮಾ’ ಅಂತ ಮಾತನಾಡುತ್ತಾ ರವಿವರ್ಮಾ ಹಂಚಿಕೊಂಡಿದ್ದಾರೆ.

Advertisement
Share this on...