ಸೋದರ ಮಾವನ ಮಗನೇ ಗಂಡನಾದ ಖುಷಿಯಲ್ಲಿದ್ದ ನವವಿವಾಹಿತೆ ಮರುದಿನವೇ ಸಾವು

in Kannada News/News 221 views

ರಾಣಿ ಅವರನ್ನು ಜುಲೈ 1 ರಂದು ಸೋದರ ಮಾವನ ಮಗನಾದ ಗಣೇಶ ಚೌಹಾಣ್​ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಹೊಸ ಜೀವನದ ಕನಸು ‌ಕಂಡಿದ್ದ ಆಕೆ ನಡು ಬೀದಿಯಲ್ಲಿ ಹೆ ಣ ವಾಗಿದ್ದಾರೆ. ‌

Advertisement

ವಿಜಯಪುರ: ಆ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಬಂಧು-ಬಳಗದ ಸೇರಿ ಪುತ್ರಿಯ ವಿವಾಹವನ್ನು ತಮ್ಮ ತೋಟದ ಮನೆಯಲ್ಲಿ ಮಾಡಿದ್ದರು‌.‌‌ ನಿನ್ನೆ ಮದುವೆ ಮುಗಿದ ಬಳಿಕ ಇಂದು ದೇವರ ದರ್ಶನ ಮಾಡಲು ನಸುಕಿನ ಜಾವ ಮನೆಯಿಂದ ನವ ದಂಪತಿ ಸಮೇತರಾಗಿ ಹೊರಟಿದ್ದರು. ಕುಟುಂಬಸ್ಥರು, ಸಂಬಂಧಿಗಳ ಜೊತೆ ದೇವರ ದರ್ಶನ ‌ಮಾಡಿ‌ ಜೀವನದಲ್ಲಿ ಎಲ್ಲವೂ ಒಳೆಯದಾಗಲಿ ಎಂದು ಪೂಜೆ ಸಲ್ಲಿಸುವವರಿದ್ದರು. ಆದರೆ ವಿಧಿಯಾಟ ದೇವಸ್ಥಾನ ತಲುಪುವ ಮೊದಲೇ ಆ ಕುಟುಂಬಕ್ಕೆ ಆ ಘಾ ತ ಕೊಟ್ಟಿದೆ.

ದಾರಿಯಲ್ಲಿ ಜನರಾಯನ ಅ ಟ್ಟ ಹಾ ಸ ಕ್ಕೆ ನವ ವಿವಾಹಿತೆ ರಾಣಿ(26) ಬ ಲಿ ಯಾಗಿದ್ದಾರೆ.‌ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯ‌ 50ರ ಯರಗಲ್ ಬಿ.ಕೆ ಕ್ರಾಸ್ ಬಳಿ ನಡೆದ ಅ ಪ ಘಾ ತ ದಲ್ಲಿ ಸಾ ವ ನ ಪ್ಪಿ ದ್ದಾ ರೆ. ಕ್ರೂಜರ್ ವಾಹನ‌ ಹಾಗೂ ಗೋಡ್ಸ್ ಟೆಂಪೋ ವಾಹನದ ನಡುವೆ ಮುಖಾಮುಖಿ ಡಿ ಕ್ಕಿ ಯಾಗಿ ಅ ಪ ಘಾ ತ ಸಂಭವಿಸಿದೆ. ಟೆಂಪೋ‌ ಡಿ ಕ್ಕಿ ಯಾದ ಬಳಿಕ ರಸ್ತೆ ಪಕ್ಕದಲ್ಲಿ ಕ್ರೋಜರ್ ವಾಹನ ಪ ಲ್ಟಿ ಯಾಗಿದ್ದು ರಾಣಿ ಸ್ಥಳದಲ್ಲೇ ಸಾ ವ ನ್ನ ಪ್ಪಿ ದ್ದಾ ಳೆ. ಘಟನೆಯಲ್ಲಿ ರಾಣಿ ಪತಿ ಗಣೇಶ್​ಗೆ ಗಾ ಯ ಗಳಾಗಿದೆ. ವಾಹನದಲ್ಲಿ ಅಜಯ ಕುಮಾರ, ವಿಜಯ ಕುಸಳಿ, ರೇಣುಕಾ ಹಾಗೂ 6 ವರ್ಷದ ಆರುಶ್ ಎಂಬುವರಿಗೆ ಗಾ ಯ ಗಳಾಗಿದ್ದು, ಉಳಿದವರು ಬಚಾವ್ ಆಗಿದ್ದಾರೆ‌. ಗಾ ಯಾ ಳು ಗಳನ್ನು ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮದುಮಗಳ ಪ್ರಾ ಣ ಪ ಕ್ಷಿ ಹಾ ರಿ ಹೋಗಿದೆ. ಮದುವೆಯಾಗಿ ಹೊಸ ಜೀವನದ ಕನಸು ‌ಕಂಡಿದ್ದ ಆಕೆ ನಡು ಬೀದಿಯಲ್ಲಿ ಹೆ ಣ ವಾಗಿದ್ದಾರೆ. ಸಾವಿರಾರು ಕನಸು ಕಂಡಿದ್ದ ಶಾಬಾದ ಪಟ್ಟಣದ ನಿವಾಸಿ ರಾಣಿ ಅವರನ್ನು ಜುಲೈ 1 ರಂದು ಸೋದರ ಮಾವನ ಮಗನಾದ ಗಣೇಶ ಚೌಹಾಣ್​ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಶಾಬಾದಾ ಪಟ್ಟಣದಲ್ಲಿ ತಮ್ಮ ತೋಟದ ಮನೆಯ ಆವರಣದಲ್ಲಿ ರಾಣಿ ಮದುವೆಯನ್ನು ಸರಳವಾಗಿ ಮಾಡಲಾಗಿತ್ತು. ಬಡತನವಿದ್ದರೂ ಮಗಳ ಮದುವೆಗೆ ಯಾವುದೇ ಅಡ್ಡಿಯಾಗಬಾರದು ಎಂದು ಆಕೆ ಕುಟುಂಬಸ್ಥರು ಸಂಬಂಧಿಗಳು ಸರಳವಾಗಿ ಸಂತೋಷದಿಂದ‌ ವಿವಾಹ ಮಾಡಿಕೊಟ್ಟಿದ್ದರು. ಆದರೆ ಇಂದು ಆ ಕುಟುಂಬ ಸಾ ವಿ ನ ಸೂತಕದಲ್ಲಿದೆ.

ಇಂದು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಶಾಬಾದ ಪಟ್ಟಣದಿಂದ ರಾಣಿ ಚೌಹಾಣ್, ಆಕೆಯೆ ಪತಿ ಗಣೇಶ ಹಾಗೂ ಐದು ಜನ ಸಂಬಂಧಿಗಳು ಸೇರಿ ಏಳು ಜನ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮಕ್ಕೆ ಆಗಮಿಸುತ್ತಿದ್ದರು. ಕೊಕಟನೂರ ಗ್ರಾಮದಲ್ಲಿರುವ ಎಲ್ಲಮ್ಮ ದೇವಸ್ಥಾನ ಇವರ ಮನೆ ದೇವರಾಗಿದ್ದ ಕಾರಣ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಭೀ ಕ ರ ಅ ಪ ಘಾ ತ.

ರಾಣಿ ಕುಟುಂಬಸ್ಥರು ಕಲ್ಲಿನ ಗಣಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಕಡು ಬಡತನದಲ್ಲೂ ಮಗಳಿಗೆ ಉತ್ತಮ ಶಿಕ್ಷಣ ನೀಡಿ ಸೋದರ ಮಾವನ ಜೊತೆಗೆ ಮದುವೆ ಮಾಡಿದ್ದಾರೆ. ಪುಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗಣೇಶ ರಾಣಿಯನ್ನು ಮದುವೆಯಾಗಿ ಇಂದು ದೇವರ ದರ್ಶನ ಮಾಡಿ ನಾಳೆ ಪೂಣೆಗೆ ಕರೆದುಕೊಂಡು ಹೋಗುವವರಿದ್ದರು. ಅದರೆ ವಿಧಿಯಾಟ ಎಲ್ಲವೂ ಆರಂಭದಲ್ಲೇ ಅಂತ್ಯವಾಗಿದೆ. ಮದುವೆಯಾಗಿ ಗಂಡನ ಮನೆ ಸೇರಬೇಕಿದ್ದ ರಾಣಿ ಮ ಸ ಣ ಸೇರಿದ್ದಾಳೆ. ಸಂಭ್ರಮದ ಮನೆಯಲ್ಲಿ ಸೂ ತ ಕ‌ ಮೂಡಿದೆ. ಘಟನಾ ಸ್ಥಳಕ್ಕೆ ಸಿಂದಗಿ ಪಿಎಸ್ಐ ಸೇರಿದಂತೆ ಪೊ ಲೀ ಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ತ ನಿ ಖೆ ಕೈಗೊಂಡಿದ್ದಾರೆ.

Advertisement
Share this on...