ರಾಜ್ಯದ ಈ 13 ಜಿಲ್ಲೆಗಳಿಗಿಲ್ಲ ಮಂತ್ರಿ ಸ್ಥಾನ: ಈ ಒಂದೇ ಜಿಲ್ಲೆಗೆ 7 ಸಚಿವರು, ಉಳಿದ ಯಾವ್ಯಾವ ಜಿಲ್ಲೆಗಳಿಗೆ ಸಿಕ್ಕಿತು ಮಂತ್ರಿಸ್ಥಾನ?

in Uncategorized 505 views

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಂಪುಟದಲ್ಲಿ ಬೆಂಗಳೂರು ಜಿಲ್ಲೆಯ 7 ಮಂದಿಗೆ ಅವಕಾಶ ಸಿಕ್ಕಿದೆ. 6 ಜಿಲ್ಲೆಗಳಲ್ಲಿ ಇಬ್ಬರಿಗೆ ಮಂತ್ರಿಗಿರಿ ಕೊಡಲಾಗಿದೆ. ಆದರೆ, ರಾಜ್ಯದ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ತಮ್ಮ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ಕೊಟಿಲ್ಲವೆಂದು ಸ್ಥಳೀಯವಾಗಿ ಅ ಸ ಮಾ ಧಾ ನ ಭು ಗಿ ಲೆ ದ್ದಿ ದ್ದೆ.

Advertisement

13 ಜಿಲ್ಲೆಗೆ ಸಿಗದ ಮಂತ್ರಿ ಸ್ಥಾನ 

ಮೈಸೂರು, ರಾಮನಗರ, ಕೊಡಗು, ಹಾಸನ, ದಾವಣಗೆರೆ, ಕೋಲಾರ, ಚಿಕ್ಕಮಗಳೂರು, ರಾಯಚೂರು, ಕಲಬುರಗಿ, ವಿಜಯಪುರ, ಬಳ್ಳಾರಿ, ಯಾದಗಿರಿ

ಬೆಂಗಳೂರು ಜಿಲ್ಲೆಯ 7 ಮಂದಿಗೆ ಸಿಕ್ತು ಮಂತ್ರಿ ಸ್ಥಾನ

ಆರ್​. ಆಶೋಕ್ – ಪದ್ಮನಾಭ ನಗರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ- ಮಲ್ಲೇಶ್ವರ, ಎಸ್.ಟಿ.ಸೋಮಶೇಖರ್- ಯಶವಂತಪುರ, ಭೈರತಿ‌ ಬಸವರಾಜ – ಕೆ.ಆರ್ ಪುರಂ, ಮುನಿರತ್ನ- ಆರ್.ಆರ್ ನಗರ, ಗೋಪಾಲಯ್ಯ- ಮಹಾಲಕ್ಷ್ಮೀ ಲೇಔಟ್​, ವಿ.ಸೋಮಣ್ಣ- ಗೋವಿಂದರಾಜ ನಗರ

ದಾವಣಗೆರೆ ಜಿಲ್ಲೆಯ 7 ಶಾಸಕರ ಪೈಕಿ ಐವರು ಬಿಜೆಪಿ‌ ಶಾಸಕರಿದ್ದರೂ ಬೊಮ್ಮಾಯಿ ಸಂಪುಟದಲ್ಲಿ ಒಬ್ಬರಿಗೂ ಅವಕಾಶ ಸಿಕ್ಕಿಲ್ಲ. ಬಿಎಸ್‌ವೈ ಅಧಿಕಾರಾವಧಿಯಲ್ಲೂ ದಾವಣಗೆರೆ ಜಿಲ್ಲೆ ಸಚಿವ ಸ್ಥಾನದಿಂದ ವಂ ಚಿ ತ ವಾಗಿತ್ತು. ಇನ್ನು ಹಳೇ ಮೈಸೂರು ಭಾಗಕ್ಕೂ ನಿರೀಕ್ಷೆಯಂತೆ ಸಚಿವ ಸ್ಥಾನ ಲಭಿಸಿಲ್ಲ.

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಡೆಗೂ ಮು ಹೂ ರ್ತ ಫಿ ಕ್ಸ್​ ಆಗಿದೆ. ಇಂದು ಮಧ್ಯಾಹ್ನ 2.15 ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ನೇರವಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ

ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ, ಆರ್.ಅಶೋಕ್ – ಪದ್ಮನಾಭ ನಗರ, ಬಿಸಿ ಪಾಟೀಲ್ – ಹಿರೇಕೇರೂರುು, ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ, ಬಿ.ಶ್ರೀ ರಾಮುಲು – ಮೊಳಕಾಲುಮ್ಮೂರು, ಉಮೇಶ್ ಕತ್ತಿ – ಹುಕ್ಕೇರಿ, ಎಸ್.ಟಿ.ಸೋಮಶೇಖರ್ – ಯಶವಂತಪುರ, ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ, ಬೈರತಿ‌ ಬಸವರಾಜ – ಕೆ ಆರ್ ಪುರಂ, ಮುರುಗೇಶ್ ನಿರಾಣಿ – ಬೀಳಗಿ, ಶಿವರಾಂ ಹೆಬ್ಬಾರ್ – ಯಲ್ಲಾಪುರ, ಶಶಿಕಲಾ ಜೊಲ್ಲೆ – ನಿಪ್ಪಾಣಿ, ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ, ಸುನೀಲ್ ಕುಮಾರ್ – ಕಾರ್ಕಳ, ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ, ಗೋವಿಂದ ಕಾರಜೋಳ – ಮುಧೋಳ, ಮುನಿರತ್ನ – ಆರ್ ಆರ್ ನಗರ, ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ, ಗೋಪಾಲಯ್ಯ– ಮಹಾಲಕ್ಷ್ಮಿ ಲೇಔಟ್, ಮಾಧುಸ್ವಾಮಿ– ಚಿಕ್ಕನಾಯಕನಹಳ್ಳಿ, ಹಾಲಪ್ಪ ಆಚಾರ್ – ಯಲ್ಬುರ್ಗ, ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ, ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ, ಪ್ರಭು ಚೌವ್ಹಾಣ್ – ಔರಾದ್, ವಿ ಸೋಮಣ್ಣ – ಗೋವಿಂದ್ ರಾಜನಗರ, ಎಸ್ ಅಂಗಾರ – ಸುಳ್ಯ, ಆನಂದ್ ಸಿಂಗ್ – ಹೊಸಪೇಟೆ, ಸಿ ಸಿ‌ ಪಾಟೀಲ್ – ನರಗುಂದ, ಬಿಸಿ ನಾಗೇಶ್ – ತಿಪಟೂರು

Advertisement
Share this on...