ಜಮೀರ್ ಅಹ್ಮದ್ ಐಟಿ ರೇಡ್: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?

in Kannada News/News 445 views

ಬೆಂಗಳೂರು : ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಸಾ ಮ್ರಾ ಜ್ಯ ದ ಮೇಲೆ ಇಂದು ಬೆಳ್ಳಂಬೆಳಗ್ಗೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾ-ಳಿ ಮಾಡಿದ್ದಾರೆ.

Advertisement

ನಿನ್ನೆ(ಬುಧವಾರ) ತಾನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಶಾಸಕರಿಗೆ ಮರುದಿನ ಬೆಳ್ಳಗ್ಗೆಯೇ ಇಡಿ ಶಾ-ಕ್​ ಕೊಟ್ಟಿದೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್​ ಬಳಿ ಇರುವ ಜಮೀರ್ ಅಹ್ಮದ್ ಅವರ ಐಷಾರಾಮಿ ಬೃಹತ್​ ಬಂಗಲೆ, ಶಾಂತಿ ನಗರದಲ್ಲಿರುವ ಮನೆ, ಚಾಮರಾಜಪೇಟೆಯಲ್ಲಿರುವ ಸ್ವಂತ ಕಚೇರಿ, ಪ್ಲ್ಯಾಟ್‌ಗಳು, ಬಂಬೂ ಬಜಾರ್ ಬಳಿಯ ಮನೆ, ನ್ಯಾಷನಲ್ ಟ್ರಾವೆಲ್ಸ್ ಮುಖ್ಯ ಕಚೇರಿ… ಹಲವಡೆ ಏಕಕಾಲಕ್ಕೆ ಇಡಿ ದಾ-ಳಿ ಆಗಿದೆ. ಜಮೀರ್​ ಹೆಸರಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಶ್ರೀಲಂಕಾ ಮತ್ತು ಗೋವಾದಲ್ಲಿ ಕ್ಯಾಸಿನೊ ಕ್ಲಬ್, ಮುಂಬೈನಲ್ಲಿ ಒಂದು ಮನೆ, ಹೈದರಾಬಾದ್ ಸೇರಿದಂತೆ ಹಲವು ಕಡೆ ಆಸ್ತಿ, ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಒಂದು ಅಪಾರ್ಟ್‌ಮೆಂಟ್, ಯುಬಿ ಸಿಟಿಯಲ್ಲಿ ಒಂದು ಅಪಾರ್ಟ್‌ಮೆಂಟ್, ಹೆಬ್ಬಾಳದಲ್ಲಿ ಆಳಿಯನ ಮನೆ ಇದೆ. ಏಕಕಾಲಕ್ಕೆ ನಗರದ ಹಲವಡೆ ದಾ-ಳಿ ನಡೆಸಿದ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕೆಲ ವರ್ಷಗಳಿಂದ ಜಮೀರ್ ಆದಾಯದ ಮೇಲೆ ಕ ಣ್ಣಿ ಟ್ಟಿ ದ್ದ ಇಡಿ, ಇತ್ತೀಚಿನ ದಿನಗಳಲ್ಲಿ ಜಮೀರ್ ಆಡಂಬರದ ಕುರಿತು ಮಾಹಿತಿ ಸಂಗ್ರಹಿಸಿತ್ತು ಎನ್ನಲಾಗಿದೆ.

ಜಮೀರ್ ಒಡೆತನದ ಬೃಹತ ಬಂಗಲೆ

ಜಮೀರ್ ಬಿಸಿನೆಸ್​ಗಳು

ಅದ್ದೂರಿಯಾಗಿ ನಡೆದಿದ್ದ ಜಮೀರ್ ಮಗಳ ಮನೆ

ಜಮೀರ್ ಮಗನ ಸಿನಿಮಾ ಬಗ್ಗೆಯೂ ಮಾಹಿತಿ ಸಂಗ್ರಹ

ಜಮೀರ್ ಆಪ್ತರ ಐಷಾರಾಮಿ ಜೀವನದ ಬಗ್ಗೆಯೂ ನಿಗಾ

ತಮ್ಮನ್ನು ಕಾಣಲು ಬರುವ ಸಾರ್ವಜನಿಕರಿಗೆ ಜಮೀರ್ ಏಕಾಏಕಿ ಹಣ ಕೊಟ್ಟು ಕಳುಹಿಸುತ್ತಿದ್ದ ವಿಚಾರ…

ಇವೆಲ್ಲದ್ದರ ಬಗ್ಗೆ ಕೆಲ ದಾಖಲೆ ಸಂಗ್ರಹಿಸಿದ ಇಡಿ ಅಧಿಕಾರಿಗಳು ಇಂದು ದಾ-ಳಿ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ನಿವಾಸದ ಮೇಲೆ ED ‌ಅ ಟ್ಯಾ ಕ್ ಆಗಿರುವುದು ರಾ ಜ ಕೀ ಯ ಪ್ರೇರಿತ ಎಂಬ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ನಾನು‌ ಇಡಿ, ಐಟಿ ಆಫೀಸರ್ ಅಲ್ಲ. ನಾನು ‌ಇದರ ಬಗ್ಗೆ ಉತ್ತರ ಕೊಡೋಕೆ ಆಗಲ್ಲ. ಯಾರು ಅ ಕ್ರ ಮ ಮಾಡಿದ್ದಾರೆ ಅವರ ಮೇಲೆ ತ ನಿ ಖೆ ಆಗುತ್ತೆ. ತಮ್ಮ ತ ಪ್ಪು ಗಳನ್ನ‌ ಮು ಚ್ಚಿ ಕೊ ಳ್ಳೋ ಕೆ ಆ ರೀತಿ ಆ ರೋ ಪ ಮಾಡ್ತಾರೆ. ಐಟಿ, ಇಡಿಯವರಿಗೆ ಗೊತ್ತಿರುತ್ತದೆ. ಅದನ್ನ ಯಾರೂ‌ ಮಾಡಲ್ಲ” ಎಂದಿದ್ದಾರೆ.

ಮೇಕೆದಾಟು ಯೋಜನೆಗೆ ತಮಿಳುನಾಡಿನಲ್ಲಿ ಬಿಜೆಪಿಯ ಅಣ್ಣಾಮಲೈ ಪ್ರ ತಿ ಭ ಟ ನೆ ಮಾಡುತ್ತಿರುವ ವಿಚಾರ ಪ್ರಸ್ತಾಪಿಸಿದಾಗ, ಅವನನ್ನ‌ ದೊಡ್ಡ ಮನುಷ್ಯನ್ನ ಮಾಡೋ ಅವಶ್ಯಕತೆಯಿಲ್ಲ. ಹೆಚ್ಚುವರಿ ನೀರು ತ ಡೆ ದು‌ ನೀರು ‌ಕೊಡಬೇಕು. ಅದಕ್ಕೆ ಈ ಯೋಜನೆ ತರುವುದು. ಪ್ರ ತಿ ಭ ಟ ನೆ ಮಾಡ್ತಾರೆ ಅಂದ್ರೆ ರಾಜಕೀಯ ಪ್ರೇರಿತ. ಅಣ್ಣಾಮಲೈ ಪ್ರ ತಿ ಭ ಟ ನೆ ಗೆ ಐ ಡೋಂಟ್ ಕೇರ್” ಎಂದರು, ಸಿಎಂ ಬಸವರಾಜ ಬೊಮ್ಮಾಯಿ.

Advertisement
Share this on...