26/11 ಗೆ 13 ವರ್ಷ: ತಮ್ಮ ಹೊಟೆಲ್ ಹಾಗು ದೇಶದ ಮೇಲಾದ ದಾ-ಳಿಯ ಬಗ್ಗೆ ಮೌನಮುರಿದು ಪೋಸ್ಟ್ ಶೇರ್ ಮಾಡಿದ ರತನ್ ಟಾಟಾ

in Kannada News/News 255 views

26/11 ದಾ ಳಿ ನಡೆದು ಸುಮಾರು 13 ವರ್ಷಗಳು ಕಳೆದಿವೆ. ಅಜ್ಮಲ್ ಕಸಬ್ ಮತ್ತು ಆತನ ಕೆಲವು ಸಹಚರರು 26/11 ದಾ ಳಿಯಲ್ಲಿ ಭಾಗಿಯಾಗಿದ್ದರು. ಅಜ್ಮಲ್ ಕಸಬ್ ಮತ್ತು ಅವನ ಕೆಲವು ಸಹಚರರು ಸಮುದ್ರ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದ್ದರು.

Advertisement

ಈ ವಿಷಯವನ್ನು ಇಂದಿಗೂ ಯಾರೂ ಮರೆಯಲು ಸಾಧ್ಯವಾಗಿಲ್ಲ. ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ತಮ್ಮ Instagram ಹ್ಯಾಂಡಲ್‌ನಿಂದ 26/11 ಪ್ರಕರಣವನ್ನು ನೆನಪಿಸಿಕೊಳ್ಳುವ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿಯ ಮೂಲಕ, ರತನ್ ಟಾಟಾ ಅವರು ತಮ್ಮ ಇನ್ಸ್ಟಾಗ್ರಾಮ್ ಕಥೆಯಲ್ಲಿ ಏನು ಬರೆದಿದಗದಾರೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ಬನ್ನಿ ಈ ಕುರಿತಾದ ಸಂಪೂರ್ಣ ಸುದ್ದಿಯನ್ನು ನಿಮಗೆ ವಿವರವಾಗಿ ತಿಳಿಸುತ್ತೇವೆ.

2008 ರ ಪ್ರಕರಣ

ನಿಮಗೆಲ್ಲಾ ಗೊತ್ತಿರುವಂತೆ 2008 ರ ನವೆಂಬರ್ 26 ರಂದು ಅಜ್ಮಲ್ ಕಸಬ್ ಮತ್ತು ಆತನ ಕೆಲವು ಸಹಚರರು ನಮ್ಮನ್ನು ಮುಂಬೈನಲ್ಲಿರುವ ತಾಜ್ ಹೋಟೆಲ್‌ ಮೇಲೆ ದಾ ಳಿ ಮಾಡಿದ್ದರು. ಇದರಲ್ಲಿ ಅನೇಕರು ಸಾವನ್ನಪ್ಪಿದ್ದರು. ಮತ್ತೊಂದೆಡೆ 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ದಿನವನ್ನು ನೆನಪಿಸಿಕೊಂಡರೆ ಇಂದಿಗೂ ಎಷ್ಟೋ ಜನರ ಕಣ್ಣುಗಳು ತೇವವಾಗುತ್ತವೆ. ಈ ವಿಷಯವನ್ನು ಭಾರತವಷ್ಟೇ ಯಾಕೆ ಇಡೀ ಜಗತ್ತು ಮರೆಯಲು ಸಾಧ್ಯವೇ ಇಲ್ಲ. ಅಂತಹ ಜನರಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾ ಕೂಡ ಒಬ್ಬರು.

ಸಾಮಾಜಿಕ ಜಾಲತಾಣಗಳ ಮೂಲಕ ರತನ್ ಟಾಟಾ ಆ್ಯಕ್ಟಿವ್ ಇರುತ್ತಾರೆ

ನಿಮಗೆಲ್ಲಾ ಗೊತ್ತಿರುವಂತೆ ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಕಾಲಕಾಲಕ್ಕೆ, ರತನ್ ಟಾಟಾ ದೇಶ ಮತ್ತು ಜಗತ್ತಿನಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ರತನ್ ಟಾಟಾ ಭಾರತದ ಜನರಿಂದ ಮಾತ್ರವಲ್ಲದೆ ದೇಶ ವಿದೇಶಗಳ ಜನರೂ ಇಷ್ಟಪಡುವ ಅಂತಹ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಹಲವು ಬಾರಿ ಟ್ವಿಟ್ಟರ್ ಬಳಕೆದಾರರು ರತನ್ ಟಾಟಾ ಅವರಿಗೆ ಭಾರತ ರತ್ನ ನೀಡುವಂತೆ ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ. ರತನ್ ಟಾಟಾ ಕೂಡ ತಮ್ಮ ಪ್ರಾಮಾಣಿಕತೆಗೆ ಹೆಸರಾದವರು.

26/11 ಬಗ್ಗೆ ರತನ್ ಟಾಟಾ ಬರೆದದ್ದೇನು?

26/11 ಪ್ರಕರಣ ನಡೆದು 13 ವರ್ಷಗಳಾಗಿವೆ. 13 ವರ್ಷಗಳ ನಂತರ, ರತನ್ ಟಾಟಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್‌ನಲ್ಲಿ ತಾಜ್ ಹೋಟೆಲ್ ಕಾಣಬಹುದಾಗಿದೆ. ಚಿತ್ರವನ್ನು ಹಂಚಿಕೊಂಡಿರುವ ರತನ್ ಟಾಟಾ, “13 ವರ್ಷಗಳ ಹಿಂದೆ ಏನಾಯಿತು ಅದಕ್ಕೆ ಯಾರೂ ಬೆಲೆಕಟ್ಟಲು ಸಾಧ್ಯವಿಲ್ಲ. ಆ ನೆನಪುಗಳು ನಮ್ಮ ಶಕ್ತಿಯ ಮೂಲವಾಗಬೇಕು. 26/11 ದಾ ಳಿಯಲ್ಲಿ ಯಾರು ಈ ಜಗತ್ತಿಗೆ ವಿದಾಯ ಹೇಳಿದರೋ ನಾವು ಹುತಾತ್ಮರಾದ ಆ ಜನರನ್ನು ಗೌರವಿಸುತ್ತೇವೆ” ಎಂದು ಬರೆದಿದದಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ 26/11 ದಾ ಳಿ ನಡೆದ ಸಂದರ್ಭದಲ್ಲಿ ಬರೋಬ್ಬರಿ 166 ಜನರು ಇಹಲೋಕ ತ್ಯಜಿಸಿದ್ದರು ಹಾಗು 300 ಕ್ಕೂ ಅಧಿಕ ಜನ ಗಾ ಯಗೊಂಡಿದ್ದರು.

Advertisement
Share this on...