“ಭಾರತದ ಪಕ್ಕದ ಈ ರಾಷ್ಟ್ರ ಭಾರತಕ್ಕೆ ಸೇರಲು ಬಯಸಿತ್ತು ಆದರೆ ನೆಹರು ಸಾರಾಸಗಟಾಗಿ ತಿರಸ್ಕರಿಸಿ ಸಹಿ ಹಾಕಿದ್ದರು”: ಪ್ರಣಬ್ ಮುಖರ್ಜಿ (ಅವರ ಪುಸ್ತಕದಲ್ಲಿ ಬಹಿರಂಗಪಡಿಸಿದ ಶಾಕಿಂಗ್ ಮಾಹಿತಿ)

in Kannada News/News/ಕನ್ನಡ ಮಾಹಿತಿ 345 views

ನವದೆಹಲಿ: ದಿವಂಗತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುಸ್ತಕವು ಈ ದಿನಗಳಲ್ಲಿ ರಾಜಕೀಯ ಕಾರಿಡಾರ್‌ಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ನೇಪಾಳವನ್ನು ಭಾರತದ ಪ್ರಾಂತ್ಯವನ್ನಾಗಿ ಮಾಡಲು ನೇಪಾಳದ ರಾಜ ತ್ರಿಭುವನ್ ಬಿರ್ ಬಿಕ್ರಮ್ ಸಾಹ್ ಅವರ ಪ್ರಸ್ತಾಪವನ್ನು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ತಿರಸ್ಕರಿಸಿದ್ದರು ಎಂದು ‘ದಿ ಪ್ರೆಸಿಡೆನ್ಷಿಯಲ್ ಇಯರ್ಸ್’ ಎಂಬ ಶೀರ್ಷಿಕೆಯ ಈ ಪುಸ್ತಕದಲ್ಲಿ ಪ್ರಣಬ್ ಮುಖರ್ಜಿ ಬರೆದಿದ್ದಾರೆ. ಮುಖರ್ಜಿ ಪುಸ್ತಕದ 11 ನೇ ಅಧ್ಯಾಯದಲ್ಲಿ, ‘ಮೈ ಪ್ರೈಮ್ ಮಿನಿಸ್ಟರ್-ಡಿಫರೆಂಟ್ ಸ್ಟೈಲ್ಸ್, ಡಿಫರೆಂಟ್ ಟೆಂಪರಾಮೆಂಟ್ಸ್’ ಎಂದು ಬರೆದಿದ್ದಾರೆ. ನೆಹರೂ ಅವರ ಸ್ಥಾನದಲ್ಲಿ ಇಂದಿರಾ ಗಾಂಧಿ ಇರುತ್ತಿದ್ದರೆ ಸಿಕ್ಕಿಂನಂತೆಯೂ ಈ ಅವಕಾಶವನ್ನೂ ಕೈಯಿಂದ ಹೋಗಲು ಬಿಡುತ್ತಿರಲಿಲ್ಲ ಎಂದು ಬರೆದಿದ್ದಾರೆ.

Advertisement

ಮುಖರ್ಜಿ ತಮ್ಮ ಪುಸ್ತಕದಲ್ಲಿ, ಮಾಜಿ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿ ಬಗ್ಗೆ ಬರೆಯುತ್ತ, ಪ್ರತಿಯೊಬ್ಬ ಪ್ರಧಾನ ಮಂತ್ರಿಗಳದ್ದೂ ತಮ್ಮದೇ ಆದ ಶೈಲಿಯ ಸ್ಟೈಲ್ ಹೊಂದಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವಿಧಾನವು ನೆಹರೂಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಒಂದೇ ಪಕ್ಷದವರಾದರೂ, ಬೇರೆ ಬೇರೆ ಪ್ರಧಾನ ಮಂತ್ರಿಗಳು ವಿಭಿನ್ನ ರೀತಿಯ ಆಲೋಚನೆ ಮತ್ತು ವರ್ಕಿಂಗ್ ಸ್ಟೈಲ್ ಹೊಂದಿದ್ದರು. ಪ್ರತಿಯೊಬ್ಬ ಪ್ರಧಾನಮಂತ್ರಿಗಳ ವಿದೇಶಾಂಗ ವ್ಯವಹಾರಗಳು, ಭದ್ರತೆ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದರು ಎಂದು ಬರೆದಿದ್ದಾರೆ.

ಮಾಜಿ ಪ್ರಧಾನಿ ನೆಹರೂ ಅವರಿಗೆ ನೇಪಾಳದೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧವಿತ್ತು ಎಂದು ಮುಖರ್ಜಿ ಬರೆಯುತ್ತಾರೆ. ನೇಪಾಳದಲ್ಲಿ ರಾಣಾ ಆಡಳಿತದಿಂದ ರಾಜಪ್ರಭುತ್ವ ಬಂದಾಗ ನೆಹರೂ ಅಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ವಿಶೇಷವೆಂದರೆ, ನೇಪಾಳದ ರಾಜ ತ್ರಿಭುವನ್ ಬಿರ್ ಬಿಕ್ರಮ್ ಸಾಹ್ ಅವರು ನೇಪಾಳವನ್ನ ಭಾರತದ ಪ್ರಾಂತ್ಯವನ್ನಾಗಿ ಮಾಡುವಂತೆ ಸಲಹೆ ನೀಡಿದ್ದರು, ಆದರೆ ನೇಪಾಳ ಸ್ವತಂತ್ರ ರಾಷ್ಟ್ರವಾಗಿದೆ ಮತ್ತು ಅದು ಸ್ವತಂತ್ರವಾಗಿಯೇ ಇರಬೇಕು ಎಂದು ನೆಹರೂ ಈ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ಪ್ರಣಬ್ ಮುಖರ್ಜಿ ಬರೆದಿದ್ದಾರೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆಯೂ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮುಖರ್ಜಿ

ನರೇಂದ್ರ ಮೋದಿ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ ಸಂಸತ್ತನ್ನು ಸುಗಮವಾಗಿ ನಡೆಸಲು ವಿಫಲವಾಗಿದೆ. ಇದಕ್ಕೆ ಕಾರಣ ಸರ್ಕಾರದ ದುರಹಂಕಾರ ಮತ್ತು ಅಸಮರ್ಥತೆಯಾಗಿದೆ ಎಂದು ಮುಖರ್ಜಿ ತಮ್ಮ ಆತ್ಮಚರಿತ್ರೆ ‘ದಿ ಪ್ರೆಸಿಡೆನ್ಶಿಯಲ್ ಇಯರ್ಸ್, 2012-2017’ ನಲ್ಲಿ ಹೇಳಿದ್ದಾರೆ.

ನವೆಂಬರ್ 8, 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಡಿಮಾನಿಟೈಸೇಷನ್ ಘೋಷಿಸುವ ಮೊದಲು ತಮ್ಮೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲಿಲ್ಲ. ಆದರೆ ಇದು ಅವರಿಗೆ ಆಶ್ಚರ್ಯವಾಗಲಿಲ್ಲ ಏಕೆಂದರೆ ಅಂತಹ ಘೋಷಣೆಗೆ ಆಕಸ್ಮಿಕ ಅಗತ್ಯವಿರುತ್ತದೆ ಎಂದು ಮುಖರ್ಜಿ ಈ ಪುಸ್ತಕದಲ್ಲಿ ಬರೆದಿದ್ದಾರೆ. ಆದರೆ, ಈ ಪುಸ್ತಕದಲ್ಲಿ ಮುಖರ್ಜಿ ಅವರು ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸಂಸತ್ತನ್ನು ಸುಗಮವಾಗಿ ನಡೆಸಲು ಎನ್‌ಡಿಎ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಅವರು ಮುಂದೆ ಬರೆಯುತ್ತ, ‘ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಕಹಿ ಚರ್ಚೆಗೆ ಕಾರಣವಾದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರದ ದುರಹಂಕಾರ ಮತ್ತು ಅದರ ಅಸಮರ್ಥತೆ ಹೊಂದಿತ್ತು ಎಂದು ನಾನು ನಂಬುತ್ತೇನೆ’ ಎಂದು ಹೇಳಿದ್ದಾರೆ. ಆದರೆ, ಮುಖರ್ಜಿ ಅವರು ತಾವು ರಾಷ್ಟ್ರಪತಿ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸೌಹಾರ್ದಯುತ ಸಂಬಂಧವನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಅವರು ಪುಸ್ತಕದಲ್ಲಿ, ‘ಅದು ಜವಾಹರಲಾಲ್ ನೆಹರು, ಅಥವಾ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅಥವಾ ಮನಮೋಹನ್ ಸಿಂಗ್ ಯಾರೇ ಆಗಿರಲಿ, ಅವರು ಸದನದಲ್ಲಿ ತಮ್ಮ ಉಪಸ್ಥಿತಿಯನ್ನು ಮನವರಿಕೆ ಮಾಡಿಸಿದ್ದರು. ಪ್ರಧಾನಿ ಮೋದಿ ತಮ್ಮ ಹಿಂದಿನ ಪ್ರಧಾನಮಂತ್ರಿಗಳಿಂದ ಪ್ರೇರಣೆ ಪಡೆಯಬೇಕು ಹಾಗು ಅವರಿಂದ ಕಲಿತ ಪಾಠಗಳಿಂದ ನೇತೃತ್ವ ವಹಿಸಬೇಕು ಎಂದು ಬರೆದಿದ್ದಾರೆ.

2014 ರ ಕಾಂಗ್ರೆಸ್ಸಿನ ಹೀನಾಯ ಸೋಲಿನ ಬಗ್ಗೆ ಚಕಿತರಾಗಿದ್ದರು

ಮಾಜಿ ರಾಷ್ಟ್ರಪತಿಗಳು 2014 ರ ಲೋಕಸಭಾ ಚುನಾವಣೆಯ ಎಣಿಕೆಯ ದಿನದಂದು, ಪ್ರತಿ ಅರ್ಧಗಂಟೆಗೆ ಫಲಿತಾಂಶಗಳ ಬಗ್ಗೆ ತಿಳಿಸುವಂತೆ ತಮ್ಮ ಸಹಾಯಕರಿಗೆ ಸೂಚನೆ ನೀಡಿದ್ದರು. “ಫಲಿತಾಂಶಗಳು ನಿರ್ಣಾಯಕ ಜನಾದೇಶ ಬಂದಿತು ಎಂದು ಸಮಾಧಾನ ತಂದಿತು, ಆದರೆ ಕಾಂಗ್ರೆಸ್‌ನ ನನ್ನ ಸ್ವಂತ ಪಕ್ಷದ ಸಾಧನೆ ನಿರಾಶಾದಾಯಕವಾಗಿತ್ತು” ಎಂದು ಅವರು ಬರೆದಿದ್ದಾರೆ. ಅವರು ಪುಸ್ತಕದಲ್ಲಿ ಮುಂದೆ ಬರೆಯುತ್ತ, ‘ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಂಬುವುದು ಕಷ್ಟವಾಗಿತ್ತು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಅದು ಜನರ ಜೀವನದೊಂದಿಗೆ ಸಂಬಂಧ ಹೊಂದಿದೆ. ಅದರ ಭವಿಷ್ಯವು ಯಾವಾಗಲೂ ಪ್ರತಿ ಚಿಂತನಶೀಲ ವ್ಯಕ್ತಿಗೆ ಯೋಚಿಸುವ ವಿಷಯವಾಗಿದೆ” ಎಂದು ಬರೆದಿದ್ದಾರೆ.

ಅವರು ಮುಂದೆ ಬರೆಯುತ್ತ, “ಪಕ್ಷವು ತನ್ನ ವರ್ಚಸ್ವಿ ನಾಯಕತ್ವದ ಅಂತ್ಯವನ್ನು ಗುರುತಿಸುವಲ್ಲಿ ವಿಫಲವಾಗಿದೆ ಎಂದು ನಾನು ಭಾವಿಸುತ್ತೇನೆ. ಪಂಡಿತ್ ನೆಹರೂ ಅವರಂತಹ ಪ್ರಬಲ ನಾಯಕರು ಭಾರತವು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಲಿಷ್ಠ ಮತ್ತು ಸ್ಥಿರ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುವಂತೆ ನೋಡಿಕೊಂಡರು. ಈ ವ್ಯವಸ್ಥೆಯನ್ನು ಸರಾಸರಿ ಜನರ ಸರ್ಕಾರವನ್ನಾಗಿ ಮಾಡಿದ ಅಂತಹ ಅದ್ಭುತ ನಾಯಕರು ಇಲ್ಲದಿರುವುದು ವಿಷಾದಕರ” ಎಂದು ಬರೆದಿದ್ದಾರೆ.

Advertisement
Share this on...