ಇದೀಗ ಬಂದ ಸುದ್ದಿ: ಹಿಜಾಬ್ ವಿವಾದದ ಬಗ್ಗೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂಕೋರ್ಟ್, ಕಂಗಾಲಾದ ಹಿಜಾಬ್ ಸಮರ್ಥಕರು ಹಾಗು ಹಿಜಾಬ್ ಪರ ವಕೀಲರು

in Uncategorized 694 views

“ಶಾಲೆಗಳು ತಮ್ಮ ಸಮವಸ್ತ್ರವನ್ನು ನಿಗದಿಪಡಸುವ ಹಕ್ಕನ್ನು ಹೊಂದಿವೆ ಮತ್ತು ಇದನ್ನು ನಿರಾಕರಿಸಲಾಗುವುದಿಲ್ಲ” ಎಂದು ಗುರುವಾರ (ಸೆಪ್ಟೆಂಬರ್ 15, 2022) ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ. ಸುಪ್ರೀಂಕೋರ್ಟ್ ನ ಈ ಮೌಖಿಕ ತೀರ್ಪಿನ ನಂತರ ಹಿಜಾಬ್ ಪರ ಅಖಾಡಕ್ಕಿಳಿದಿದ್ದ ವಕೀಲರಿಗೆ ಭಾರೀ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸರ್ಕಾರಿ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತಿಲ್ಲ ಎಂದರು.

ಈ ಕುರಿತು ನ್ಯಾಯಮೂರ್ತಿ ಗುಪ್ತಾ ಅವರು, ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಇರಬಾರದೇ? ಎಂದು ಪ್ರಶಾಂತ್ ಭೂಷಣ್ ಅವರನ್ನು ಕೇಳಿದರು. ಈ ಬಗ್ಗೆ ಪ್ರಶಾಂತ್ ಭೂಷಣ್, ಆದರೆ ಹಿಜಾಬ್ ತಡೆಯಲು ಅಥವ ನಿಷೇಧಿಸಲು ಸಾಧ್ಯವಿಲ್ಲ ಎಂದರು. ಇದಾದ ನಂತರ, ಡ್ರೆಸ್ ಕೋಡ್ (ಸಮವಸ್ತ್ರ) ಅನ್ನು ನಿರ್ಧರಿಸುವ ಹಕ್ಕು ಶಾಲೆಗಳಿಗೆ ಇದೆ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು.

ನ್ಯಾಯಮೂರ್ತಿ ಧುಲಿಯಾ ಮೌಖಿಕವಾಗಿ, “ನಿಯಮಗಳ ಪ್ರಕಾರ ಸಮವಸ್ತ್ರವನ್ನು ನಿರ್ಧರಿಸುವ ಅಧಿಕಾರವನ್ನು ಶಾಲೆಗಳು ಹೊಂದಿವೆ ಎಂದು ಹೇಳುತ್ತದೆ. ಹಿಜಾಬ್ ಬೇರೆಯದ್ದೇ ವಿಷಯವಾಗಿದೆ. ನಿರ್ದಿಷ್ಟ ಸಮವಸ್ತ್ರವನ್ನು ನಿಗದಿಪಡಿಸುವ ಶಾಲೆಯ ಅಧಿಕಾರವನ್ನು ನಿರಾಕರಿಸಲಾಗುವುದಿಲ್ಲ” ಎಂದರು. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 19 ರಂದು ನಡೆಯಲಿದೆ.

ಹಿರಿಯ ವಕೀಲ ಡಾ.ಕಾಲಿನ್ ಗೊನ್ಸಾಲ್ವಿಸ್, “ಹೆಣ್ಣುಮಕ್ಕಳು ಅದನ್ನು ಧರಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ಕೇಳಬಾರದು. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆಯೇ ಎಂಬುದು ಪ್ರಶ್ನೆಯೆಂದರೆ ಹೌದು. ಲಕ್ಷಾಂತರ ಹುಡುಗಿಯರು ಇದನ್ನು ಧರಿಸುತ್ತಾರೆ” ಎಂದರು.

ಏತನ್ಮಧ್ಯೆ, ನ್ಯಾಯಮೂರ್ತಿ ಗುಪ್ತಾ ಅವರು, “ಸ್ಥಾಪಿತ ಮಾನದಂಡಗಳ ಆಧಾರದ ಮೇಲೆ ನ್ಯಾಯಾಲಯವು ನಿರ್ಧರಿಸುತ್ತದೆ. ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆಯೇ ಎಂಬುದು ಸಮಸ್ಯೆಯಾಗಿತ್ತು. ಅದರ ಆಧಾರದ ಮೇಲೆ ಹೈಕೋರ್ಟ್ ತೀರ್ಪು ನೀಡಿದೆ. ಈ ವಿವಾದದ ಮೊದಲು ಈ ಹುಡುಗಿಯರು ಯಾವ ಹಿಜಾಬ್ ಧರಿಸಿದ್ದರು ಎಂಬುದು ಪ್ರಶ್ನೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, “ಇಸ್ಲಾಂ ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮ. ಇತರ ದೇಶಗಳಲ್ಲಿ ಇಸ್ಲಾಂ ತನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳ ಭಾಗವಾಗಿ ಹಿಜಾಬ್ ಅನ್ನು ಗುರುತಿಸುತ್ತದೆ. ವಿಶ್ವಸಂಸ್ಥೆಯ ಸಮಿತಿಯು ಹಿಜಾಬ್ ಮೇಲಿನ ನಿಷೇಧವು ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಹೇಳಿದೆ” ಎಂದರು.

“ಹಿಜಾಬ್ ಮೂಲಭೂತ ಅಧಿಕಾರವಾದರೆ ಬಟ್ಟೆ ಬಿಚ್ಚಿ ನಗ್ನವಾಗೋದೂ ಮೂಲಭೂತ ಅಧಿಕಾರವಲ್ಲವೇ?” ಎಂದಿದ್ದ ನ್ಯಾಯಾಧೀಶರು

“ಸಂವಿಧಾನದ 19 ನೇ ಪರಿಚ್ಛೇದದ ಅಡಿಯಲ್ಲಿ ಬಟ್ಟೆ ಧರಿಸುವುದು ಸಂಪೂರ್ಣ ಮೂಲಭೂತ ಹಕ್ಕಾಗಿದ್ದರೆ, ಈ ಪರಿಚ್ಛೇದದ ಅಡಿಯಲ್ಲಿ ಬಟ್ಟೆ ಧರಿಸದಿರುವುದು ಸಹ ಹಕ್ಕಾಗಿ ಬಿಡುತ್ತದೆ”

ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದಿರುವ ಹೈಕೋರ್ಟ್‌ನ ಆದೇಶದ ವಿರುದ್ಧದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಇದೇ ರೀತಿಯ ಹಲವಾರು ಬಲವಾದ ಪ್ರಶ್ನೆಗಳನ್ನು ಮತ್ತು ಅವಲೋಕನಗಳನ್ನು ಮಾಡಿದೆ.

ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣದಲ್ಲಿ, ಶಾಲೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವ ಬಗ್ಗೆ ಮಾತ್ರ ಪ್ರಶ್ನೆಯಿದೆ ಏಕೆಂದರೆ ಇದನ್ನು ಹೊರತುಪಡಿಸಿ, ಸಾರ್ವಜನಿಕ ಹಿಜಾಬ್ ಧರಿಸುವುದನ್ನು ಎಲ್ಲಿಯೂ ನಿಷೇಧಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಈ ವರ್ಷದ ಜನವರಿಯಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಮೈ ಕೊರೆಯುವ ಚಳಿ ಇದ್ದಾಗ ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ ಇಡೀ ದೇಶದಲ್ಲೇ ಬಿಸಿ ಏರಿಸುವ ಕೆಲಸ ಮಾಡಿತ್ತು. ಅಂದಿನಿಂದ ಈ ವಿವಾದ ಇಂದಿನವರೆಗೂ ಮುಂದುವರಿದಿದೆ.

ಮಾರ್ಚ್‌ನಲ್ಲಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸುವಾಗ, ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂನ ಕಡ್ಡಾಯ ಭಾಗವಲ್ಲ ಎಂದು ಹೇಳಿತ್ತು. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನ ವಿಚಾರಣೆ ಗುರುವಾರವೂ ಮುಂದುವರೆಯಿತು.

ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ವಿಭಾಗೀಯ ಪೀಠವು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ನಡೆಸಿತು.

ಸುದ್ದಿ ಸಂಸ್ಥೆ PTI ಪ್ರಕಾರ, ಅರ್ಜಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ದೇವದತ್ ಕಾಮತ್, ಈ ಪ್ರಕರಣವನ್ನ ಐದು ಸದಸ್ಯರ ಸಂವಿಧಾನ ಪೀಠಕ್ಕೆ ವರ್ಗಾಯಿಸಲು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠಕ್ಕೆ ಮನವಿ ಮಾಡಿದರು.

ಸಂವಿಧಾನದ ಪರಿಚ್ಛೇದ 19, 21 ಅಥವಾ 25 ರ ಅಡಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಹೆಣ್ಣುಮಕ್ಕಳು ಹಿಜಾಬ್ ಧರಿಸಲು ನಿರ್ಧರಿಸಿದರೆ, ಸರ್ಕಾರವು ಆಕೆಯ ಹಕ್ಕುಗಳನ್ನು ಉಲ್ಲಂಘಿಸುವಂತಹ ನಿರ್ಬಂಧಗಳನ್ನು ಹೇರಬಹುದೇ? ಎಂದು ಅವರು ವಾದಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗುಪ್ತಾ, “ನಾವು ಈ ಚರ್ಚೆಯನ್ನು ತರ್ಕಬದ್ಧವಲ್ಲದ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ… ಬಟ್ಟೆ ಧರಿಸುವ ಹಕ್ಕು ಮೂಲಭೂತ ಹಕ್ಕು ಎಂದು ನೀವು ಹೇಳಿದರೆ, ಬಟ್ಟೆ ಧರಿಸದಿರುವ ಹಕ್ಕು ಕೂಡ ಮೂಲಭೂತ ಹಕ್ಕು ಆಗುತ್ತದೆ” ಎಂದು ಹೇಳಿದರು. ಈ ಕುರಿತು ವಕೀಲ ಕಾಮತ್, ಶಾಲೆಯಲ್ಲಿ ಯಾರೂ ಬಟ್ಟೆ ತೆಗೆಯುತ್ತಿಲ್ಲ ಎಂದರು.

ಆಗ ಕಾಮತ್ ಶಿಲುಬೆ, ರುದ್ರಾಕ್ಷಿ ಮತ್ತು ಜನಿವಾರವನ್ನು ಧರಿಸಿರುವ ನಿದರ್ಶನಗಳಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಇವೆಲ್ಲವೂ ಬಟ್ಟೆಯ ಮೇಲೆ ಧರಿಸುವುದಿಲ್ಲ, ಯಾರಿಗೂ ಗೋಚರಿಸುವುದಿಲ್ಲ ಎಂದು ಹೇಳಿತು. ವಿದ್ಯಾರ್ಥಿಗಳನ್ನು ಸಮವಸ್ತ್ರವನ್ನ ಬಿಚ್ಚಿ ಅವರು ಯಾವ ಧಾರ್ಮಿಕ ಚಿಹ್ನೆಯನ್ನು ಧರಿಸಿದ್ದಾರೆ ಎಂಬುದನ್ನು ಯಾರೂ ಪರಿಶೀಲಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

ಮೌಖಿಕ ಟೀಕೆಗಳನ್ನು ಮಾಡುವಾಗ ಪೀಠವು, “ಪ್ರಶ್ನೆಯೇನೆಂದರೆ ನಿಮ್ಮನ್ನು ಯಾರೂ ಹಿಜಾಬ್ ಧರಿಸುವುದನ್ನು ತಡೆಯುತ್ತಿಲ್ಲ. ನೀವು ಅದನ್ನು ಎಲ್ಲಿ ಬೇಕಾದರೂ ಧರಿಸಬಹುದು. ನಿಷೇಧವು ಶಾಲೆಯಲ್ಲಿ ಮಾತ್ರ. ನಮ್ಮ ಕಾಳಜಿ ಅದರ ಬಗ್ಗೆ ಮಾತ್ರ” ಎಂದು ಹೇಳಿದರು.

“ದಕ್ಷಿಣ ಆಫ್ರಿಕಾ ಬಗ್ಗೆ ಬಿಡಿ ಭಾರತದ ಬಗ್ಗೆ ಮಾತನಾಡಿ”

ಚರ್ಚೆಯ ಸಮಯದಲ್ಲಿ, ಕಾಮತ್ ಅವರು ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದರು, ದಕ್ಷಿಣ ಭಾರತದ ಹಿಂದೂ ಹುಡುಗಿಯೊಬ್ಬಳು ಶಾಲೆಗೆ ಮೂಗುತ್ತಿ ಧರಿಸಲು ಬಯಸಿದ್ದಳು.

ಲೈವ್ ಲಾ ಪ್ರಕಾರ, ದಕ್ಷಿಣ ಆಫ್ರಿಕಾದ ಶಾಲಾ ಕೋಡ್ ಅಡಿಯಲ್ಲಿ ಸ್ವಲ್ಪ ಸಮಯದವರೆಗೆ ಮೂಗುತ್ತಿಯನ್ನ ತೆಗೆದುಹಾಕಲು ಹುಡುಗಿ ಒಪ್ಪಿಕೊಂಡಳು. ಆ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ನ್ಯಾಯಾಲಯವು ಹುಡುಗಿಗೆ ತನ್ನ ಮೂಗುತಿಯನ್ನ ಸ್ವಲ್ಪ ಸಮಯದವರೆಗೆ ತೆಗೆದುಹಾಕಲು ಶಾಲಾ ಮಂಡಳಿ ಹೇಳುವುದು ಅವಳಿಗೆ ಅವಳ ಧರ್ಮವನ್ನು ಪಾಲಿಸದಂತೆ ಒತ್ತಾಯಿಸಿದಂತಾಗುತ್ತದೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಅಭಿಪ್ರಾಯಪಟ್ಟಿತ್ತು ಎಂದು ಕಾಮತ್ ದಕ್ಷಿಣ ಆಫ್ರಿಕಾದ ಉದಾಹರಣೆ ನೀಡಿದರು.

ಈ ಕುರಿತು ನ್ಯಾಯಮೂರ್ತಿ ಗುಪ್ತಾ, “ಮೂಗುತ್ತಿಯನ್ನ ಧರಿಸುವುದು ಧಾರ್ಮಿಕ ಸಂಕೇತವಲ್ಲ. ವಿಶ್ವದಾದ್ಯಂತ ಮಹಿಳೆಯರು ಮೂಗುತಿ, ಕಿವಿಯೋಲೆಗಳನ್ನು ಧರಿಸುತ್ತಾರೆ, ಆದರೆ ಇದು ಧಾರ್ಮಿಕ ಆಚರಣೆಯಲ್ಲ” ಎಂದು ನ್ಯಾಯಮೂರ್ತಿ ಗುಪ್ತಾ ವಾದಿಸಿದರು. ಆದಾಗ್ಯೂ, ಕೆಲವು ಆಚರಣೆಗಳಲ್ಲಿ ‘ಬಿಂದಿ’ ಮತ್ತು ‘ಮೂಗುತಿ’ ಧರಿಸುವುದು ಧಾರ್ಮಿಕ ಮಹತ್ವವನ್ನು ಹೊಂದಿದೆ ಎಂದು ಕಾಮತ್ ಒತ್ತಿ ಹೇಳಿದರು.

“ಈ ತೀರ್ಪು ದಕ್ಷಿಣ ಆಫ್ರಿಕಾದ ಸನ್ನಿವೇಶದಲ್ಲಿದೆ, ಅವರ ಜನಸಂಖ್ಯೆಯು ಭಾರತದಷ್ಟು ವೈವಿಧ್ಯಮಯವಾಗಿಲ್ಲ. ಉಳಿದೆಲ್ಲ ದೇಶಗಳು ತಮ್ಮ ಪ್ರಜೆಗಳಿಗೆ ಒಂದೇ ಕಾನೂನು ಹೊಂದಿವೆ…ದಕ್ಷಿಣ ಆಫ್ರಿಕಾವನ್ನು ಮರೆತು ಭಾರತಕ್ಕೆ ಬನ್ನಿ” ಎಂದು ನ್ಯಾಯಮೂರ್ತಿ ಗುಪ್ತಾ ಅವರು ಹೇಳಿದರು.

ಲೈವ್ ಲಾ ಪ್ರಕಾರ, ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಕಳೆದ ವಿಚಾರಣೆಯಲ್ಲಿ ಸಿಖ್ಖರ “ಪಗಡಿ” “ಹಿಜಾಬ್” ಗೆ ಸಮವಲ್ಲ ಮತ್ತು ಎರಡನ್ನೂ ಹೋಲಿಸಲಾಗುವುದಿಲ್ಲ ಎಂದು ಮೌಖಿಕವಾಗಿ ಟೀಕಿಸಿದ್ದರು.

ಕಾಮತ್ ಅಮೆರಿಕದ ತೀರ್ಪುಗಳನ್ನ ಉಲ್ಲೇಖಿಸಿದಾಗ, ‘‘ಅಮೆರಿಕ ಮತ್ತು ಕೆನಡಾವನ್ನು ನಮ್ಮ ದೇಶದೊಂದಿಗೆ ಹೇಗೆ ಹೋಲಿಸುತ್ತೀರ?’’ ಎಂದು ಪೀಠ ಹೇಳಿತು.

‘‘ನಾವು ತುಂಬಾ ಸಂಪ್ರದಾಯವಾದಿಗಳು…’’ ಎಂದು ಪೀಠ ಹೇಳಿದೆ. ಅವರ ಸಮಾಜದ ಹಿನ್ನೆಲೆಯಲ್ಲಿ ಈ ತೀರ್ಪುಗಳನ್ನು ನೀಡಲಾಗಿದೆ ಎಂದು ಪೀಠ ಹೇಳಿದೆ.

ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಕಡ್ಡಾಯ ಭಾಗವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ.

ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪೇನು?

ಇಸ್ಲಾಂ ಪ್ರಕಾರ ಹಿಜಾಬ್ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿತ್ತು. ಹೈಕೋರ್ಟ್‌ನ ಪೂರ್ಣ ಪೀಠವು ತನ್ನ 129 ಪುಟಗಳ ತೀರ್ಪಿನಲ್ಲಿ ಕುರಾನ್ ಆಯತ್‌ಗಳನ್ನ ಮತ್ತು ಹಲವಾರು ಇಸ್ಲಾಮಿಕ್ ಗ್ರಂಥಗಳನ್ನ ಉಲ್ಲೇಖಿಸಿತ್ತು. ಈ ಉಲ್ಲೇಖಗಳ ಆಧಾರದ ಮೇಲೆ, ಇಸ್ಲಾಂಗೆ ಹಿಜಾಬ್ ಕಡ್ಡಾಯವಲ್ಲ ಎಂದು ನ್ಯಾಯಾಲಯ ಹೇಳಿತ್ತು. 11 ದಿನಗಳ ವಿಚಾರಣೆ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿತ್ತು.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ, “ಇಸ್ಲಾಮಿಕ್ ಧರ್ಮಗ್ರಂಥಗಳ ಆಧಾರದ ಮೇಲೆ, ಹಿಜಾಬ್ ಧರಿಸುವುದು ಸಲಹೆಯಾಗಿದೆ ಎಂದು ಹೇಳಬಹುದು. ಧಾರ್ಮಿಕ ಆಧಾರದ ಮೇಲೆ ಕಡ್ಡಾಯವಲ್ಲ ಎಂಬುದನ್ನು ನ್ಯಾಯಾಲಯದಲ್ಲಿ ಪ್ರತಿಭಟನೆಗಳು ಅಥವಾ ಭಾವನಾತ್ಮಕ ವಾದಗಳಿಂದ ತೆಗೆದುಹಾಕಬಹುದು. ಅದು ಇಸ್ಲಾಂನ ಭಾಗವಾಗಲು ಸಾಧ್ಯವಿಲ್ಲ” ಎಂದು ಹೇಳಿತ್ತು.

Advertisement
Share this on...