ಪ್ರಾಣ ಹೋಗಿದ್ದ 7 ವರ್ಷದ ಮಗು ಅಂತ್ಯಸಂಸ್ಕಾರದ ವೇಳೆ ತಾಯಿಯ ಕೂಗಿಗೆ ಎದ್ದು ಕುಳಿತ

in Kannada News/News 50,171 views

ಹರಿಯಾಣ:

Advertisement
ಅನಾರೋಗ್ಯದಿಂದ ಬಳಲುತ್ತಿದ್ದ 7 ವರ್ಷದ ಮಗನ ಚೇತರಿಕೆಗಾಗಿ ಪಾಲಕರು ಆಸ್ಪತ್ರೆ ಬಾಗಿಲಲ್ಲೇ ಕಾಯುತ್ತಿದ್ದರು. ಅತ್ತ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಗು ಸ ತ್ತಿ ದೆ ಎಂದು ಘೋಷಿಸಿ ಕುಟುಂಬಸ್ಥರಿಗೆ ಶ ವ ಹಸ್ತಾಂತರಿಸಿದ್ದರು. ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಹೆತ್ತಮ್ಮನ ಗೋಳಾಟ ಮುಗಿಲು ಮುಟ್ಟಿತ್ತು. ಕಂದನ ದೇ ಹ ಕ್ಕೆ ತಲೆ ಚ ಚ್ಚಿ ಕೊಳ್ಳುತ್ತಾ ಕಣ್ಣೀರು ಸುರಿಸುತ್ತಿದ್ದ ತಾಯಿ, ‘ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ… ನನ್ನ ಬಿಟ್ಟು ಹೋಗ್ಬೇಡಾ…’ ಎಂದು ಕಂದನ ದೇ ಹ ವನ್ನ ಅಲ್ಲಾಡಿಸುತ್ತಾ ಗೋಗರೆಯುತ್ತಿದ್ದಳು… ಆ ದೇವರಿಗೂ ಕರುಳ ಕೂಗು ಕೇಳಿಸಿರಬೇಕು ಅನ್ನಿಸುತ್ತೆ, ಶ ವ ವಾಗಿ ಮಲಗಿದ್ದ ಮಗುವಿನ ದೇ ಹ ದಲ್ಲಿ ದಿಢೀರ್​ ಚಲನೆ! ಮುಂದಾಗಿದ್ದು ಪವಾಡ…

ಹರಿಯಾಣದ ಝಜ್ಜರ್​ ಜಿಲ್ಲೆಯ ಹಿತೇಶ್​ ಎಂಬುವವರ 7 ವರ್ಷದ ಮಗ ಕುನಾಲ್​ ಶರ್ಮಾನಿಗೆ ಕಳೆದ ತಿಂಗಳು ಟೈಫಾಯಿಡ್​ ಜ್ವರ ಕಾಣಿಸಿಕೊಂಡಿತ್ತು. ತೀವ್ರ ಅಸ್ವಸ್ಥನಾಗಿದ್ದ ಕುನಾಲ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 26ರಂದು ಮಗು ಮೃ ತ ಪ ಟ್ಟಿ ದೆ ಎಂದು ದೆಹಲಿ ವೈದ್ಯರು ಘೋಷಿಸಿದ್ದರು. ಪಾಲಕರು ಕಣ್ಣೀರು ಹಾಕುತ್ತಲೇ ಸ್ವಗ್ರಾಮಕ್ಕೆ ಮೃ ತ ದೇ ಹ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ದೂರದೂರಲ್ಲಿದ್ದ ಕುನಾಲ್​ನ ಅಜ್ಜಿ, ಮೊಮ್ಮಗನ ಅಂತಿಮ ದರ್ಶನ ಪಡೆಯಬೇಕೆಂದು ಹಠ ಹಿಡಿದಿದ್ದರಿಂದ ಅವರ ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದರು. ಈ ನಡುವೆ ಪವಾಡವೇ ನಡೆದಿದ್ದು, ಶ ವ ವಾಗಿದ್ದ ಮಗು ಇದೀಗ ಜೀ ವಂ ತ ವಾಗಿದೆ!

ಕುನಾಲ್ ತಾಯಿ ಅಳ್ಳುತ್ತಾ ಮಗನ ದೇ ಹ ದ ಮೇಲೆ ಬಿದ್ದು ಆಕ್ರಂದಿಸುತ್ತಿದ್ದರು. ಎದ್ದೇಳಪ್ಪಾ… ಕಂದಾ… ಅಮ್ಮನ ಮುಖ ನೋಡೋ… ಎಂದು ಮಗನ ದೇ ಹ ವನ್ನೆಲ್ಲ ಸವರುತ್ತಾ ಎಳೆದಾಡಿದ್ದು, ಆ ವೇಳೆ ಆತನ ದೇ ಹ ದಲ್ಲಿ ಚಲನೆ ಕಂಡು ಬಂದಿದ್ದು, ಕೂಡಲೇ ತಂದೆ ಹಿತೇಶ್, ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟರು. ಆಗ ಮಗನ ದೇ ಹ ದಲ್ಲಿ ಮತ್ತಷ್ಟು ಮತ್ತಷ್ಟು ಚಲನ ಕಂಡು ಬಂದಿದ್ದು, ಎದೆಯ ಬಡಿತವೂ ಶುರುವಾಯಿತು. ‘ಡಾಕ್ಟ್ರೇ ಮಗ ಬದುಕಿದ್ದಾನೆ, ಪ್ಲೀಸ್​ ಉಳಿಸಿಕೊಡಿ’ ಎಂದು ಮಗು ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಹೋದರು. ಪರೀಕ್ಷಿಸಿದ ವೈದ್ಯರು, ಮಗು ಬದುಕುವ ಸಾಧ್ಯತೆ ಶೇ.15 ಮಾತ್ರ ಎಂದು ಹೇಳಿದರೂ ಪಾಲಕರು ಚಿಕಿತ್ಸೆ ಕೊಡಲು ಹೇಳಿದ್ದರು. 20 ದಿನಗಳ ಕಾಲ ಚಿಕಿತ್ಸೆ ಕೊಟ್ಟಿದ್ದು, ಪವಾಡ ಎಂಬಂತೆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಜೂ.15 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಮನೆಯಲ್ಲಿ ಆರಾಮಾಗಿದೆ.

Advertisement
Share this on...