ಮೊಘಲರು ಜೀವನಪರ್ಯಂತ ತಮ್ಮ ಹೆಣ್ಣುಮಕ್ಕಳ ಮದುವೆಯೇ ಮಾಡಿಸುತ್ತಿರಲಿಲ್ಲ: ಕಾರಣವೇನಿತ್ತು ನೋಡಿ

in Kannada News/News/ಕನ್ನಡ ಮಾಹಿತಿ 33,657 views

ಮೊಘಲ್ ಸಾಮ್ರಾಜ್ಯದ ಬಗ್ಗೆ ನಾವೆಲ್ಲರೂ ಓದಿದ್ದೇವೆ, ಅಕ್ಬರ್ ಮೊಘಲ್ ಆಡಳಿತಗಾರರಲ್ಲಿ ಬಹಳ ಪ್ರಸಿದ್ಧ ಆಡಳಿತಗಾರನೆಂದೇ ಇತಿಹಾಸದಲ್ಲಿ ತಿಳಿಸಲಾಗಿದೆ. ಅಕ್ಬರ್ ತನ್ನ ಆಳ್ವಿಕೆಯಲ್ಲಿ ತನ್ನ ಪ್ರಜೆಗಳಿಗಾಗಿ ಉತ್ತಮ ಕೆಲಸ ಮಾಡಿದ್ದನು, ಅಕ್ಬರ್ ಅಂತಹ ಒಬ್ಬ ಆಡಳಿತಗಾರ ಅಂತ ಎಡಪಂಥೀಯ ಇತಿಹಾಸಕಾರರು ಹೇಳುತ್ತಾರೆ. ವಾಸ್ತವವಾಗಿ ಆತನೂ ಅನ್ಯ ಮ ತಾಂಧ ಮೊಘಲ್ ಶಾಸಕರಂತೆಯೇ ಇದ್ದ ಅನ್ನೋದು ಮಾತ್ರ ವಾಸ್ತವ. ಆತ ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುತ್ತಿದ್ದ ಎಂದು ತಥಾಕಥಿತ ಇತಿಹಾಸಕಾರರು ಹೇಳುತ್ತಾರೆ.

Advertisement

ಇದೇ ಕಾರಣದಿಂದಾಗಿ, ಆತ ಅನೇಕ ಬೇಗಂ (ಹೆಂಡತಿಯರನ್ನ) ರನ್ನ ಹೊಂದಿದ್ದ, ಆತ ಅನೇಕ ಹಿಂದೂ ರಾಣಿಯರನ್ನೂ ಸಹ ಮದುವೆಯಾಗಿದ್ದ. ಅಕ್ಬರ್ ಒಬ್ಬ ಮಹಾನ್ ಮತ್ತು ಪ್ರಬಲ ಯೋಧ. ಭಾರತದ ಅಭಿವೃದ್ಧಿಯಲ್ಲಿ ಅಕ್ಬರ್ ಪ್ರಮುಖ ಪಾತ್ರ ವಹಿಸಿದ್ದ ಅಂತಲೂ ಅದೇ ಇತಿಹಾಸಕಾರರು ಹೇಳುತ್ತಾರೆ. ಆದರ ನೈಜ ಇತಿಹಾಸದಲ್ಲಿ ಆತನೂ ಮ ತಾಂಧ ರಾಜನೇ ಆಗಿದ್ದ.

ಅಕ್ಬರ್ ತನ್ನ ಐಶಾರಾಮಿ ಜೀವನಕ್ಕೂ ಹೆಸರುವಾಸಿಯಾಗಿದ್ದ. ಅಕ್ಬರ್‌ಗೆ ಸಂಬಂಧಿಸಿದ ಒಂದು ವಿಷಯವನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ, ಈ ವಿಷಯದ ಬಗ್ಗೆ ನೀವು ಹಿಂದೆಂದೂ ಕೇಳಿರಲ್ಲ. ಅಕ್ಬರ್ ತನ್ನ ಮೂವರು ಹೆಣ್ಣುಮಕ್ಕಳಿಗೆ ಮದುವೆಯೇ ಮಾಡಿಸಿರಲಿಲ್ಲವೆಂಬ ವಿಷಯ ನಿಮಗೆ ಗೊತ್ತೇ? ಹೌದು, ಅಕ್ಬರ್‌ಗೆ ಮೂವರು ಪುತ್ರಿಯರಿದ್ದರು, ಅಕ್ಬರ್ ಆ ಮೂವರಲ್ಲಿ ಒಬ್ಬರಿಗೂ ಮದುವೆ ಮಾಡಿಸಿರಲಿಲ್ಲ. ಅಷ್ಟಕ್ಕೂ ಇದರ ಹಿಂದಿನ ರಹಸ್ಯ ಕಾರಣವಾದರೂ ಏನಿತ್ತು?

ಈ ರಹಸ್ಯದ ಹಿಂದಿನ ಪರದೆಯನ್ನ ನಾವಿಂದು ತೆರೆಯಲಿದ್ದೇವೆ‌. ಅಸಲಿಗೆ ಅಕ್ಬರ್‌ನಿಗೆ ಯಾರೆದುರೂ ತಲೆಬಾಗುವುದು ಇಷ್ಟವಿರಲಿಲ್ಲ. ಅಕ್ಬರ್‌‌ನ ಮೂವರು ಹೆಣ್ಣುಮಕ್ಕಳು ಬೆಳೆದು ನಿಂತಾಗ, ಇತರ ತಂದೆಯಂತೆ ಆತನೂ ತನ್ನ ಹೆಣ್ಣುಮಕ್ಕಳ ವಿವಾಹದ ಬಗ್ಗೆ ಚಿಂತೆ ಮಾಡುತ್ತಾನೆ, ಆದರೆ ತನ್ನ ಹೆಣ್ಣುಮಕ್ಕಳ ಮದುವೆ ಮಾಡಿದರೆ, ಅವನು ವರನ ತಂದೆ ಮತ್ತು ವರನ ಮುಂದೆ ತಲೆಬಾಗಬೇಕಾಗುತ್ತೆ ಎಂದು ಅಕ್ಬರ್‌ನ ಭಾವನೆಯಾಗಿತ್ತು ಹಾಗಾಗಿ ಆತ ಅದಕ್ಕೆ ಒಪ್ಪಲಿಲ್ಲ.

ಆದರೆ ಅಕ್ಬರ್ ತನ್ನ ಮತ್ತು ತನ್ನ ಹೆಣ್ಣುಮಕ್ಕಳ ಗೌರವವನ್ನು ಎತ್ತಿಹಿಡಿಯಲು ಈ ನಿರ್ಧಾರವನ್ನು ತೆಗೆದುಕೊಂಡನು ಎಂದು  ಮತ್ತದೇ ಇತಿಹಾಸಕಾರರು ಹೇಳುತ್ತಾರೆ. ತನ್ನ ತಂದೆಯ ಈ ನಿರ್ಧಾರದಿಂದಾಗಿ, ಅಕ್ಬರನ ಹೆಣ್ಣುಮಕ್ಕಳು ಜೀವನದುದ್ದಕ್ಕೂ ತಂದೆಯ ಅರಮನೆಯಲ್ಲಿಯೇ ಇದ್ದರು. ಅಕ್ಬರ್‌ನ ಹೆಣ್ಣುಮಕ್ಕಳ ಅರಮನೆಗೆ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿತ್ತು.

ತನ್ನ ಹೆಣ್ಣುಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಿನ್ನರ್ ಪಡೆಗಳನ್ನು ಅರಮನೆಯಲ್ಲಿ ನಿಯೋಜಿಸಿದ್ದನು. ಅಕ್ಬರ್ ನೀತಿಯನ್ನು ಆತನ ವಂಶಸ್ಥರೂ (ಮೊಘಲ್ ರಾಜರುಗಳು) ಅನುಸರಿಸಿದರು. ಆತ ತನ್ನ ಹೆಣ್ಣುಮಕ್ಕಳನ್ನ ಮದುವೆ ಮಾಡಿಸದೆ ಅವರೆಲ್ಲರನ್ನೂ ಕನ್ಯೆಯರಾಗೇ ಜೀವನವಿಡೀ ತನ್ನ ಜೊತೆಗೇ ಇಟ್ಟುಕೊಂಡನು. ಅಕ್ಬರನ ಈ ನೀತಿಯನ್ನು ನೀವು ತಂದೆಯ ಪ್ರೀತಿಯೆಂದು ಅಂದುಕೊಳ್ಳಬಹುದು ಅಥವಾ ಅಕ್ಬರ್‌ನ ಮೊಂಡುತನದಿಂದ ಆತನ ಹೆಣ್ಣುಮಕ್ಕಳು ಅಂತಹ ಪರಿಸ್ಥಿತಿ  ಅನುಭವಿಸಬೇಕಾಯಿತು ಅಂತಲೂ ಕರೆಯಬಹುದು.

ಇಷ್ಟೇ ಅಲ್ಲ ಅಕ್ಬರ್‌ನ ಈ ಪರಂಪರೆಯನ್ನ ಔರಂಗಜೇಬ್, ಜಹಾಂಗೀರ್ ಹಾಗು ಶಾಹಜಹಾನ್ ಕೂಡ ಮುಂದುವರೆಸಿದರು. ಈ ರಾಜರುಗಳೂ ತಮ್ಮ ಹೆಣ್ಣು ಮಕ್ಕಳನ್ನ ಮದುವೆಯೇ ಮಾಡಲಿಲ್ಲ.

ಅಕ್ಬರ್ ಕಳೆಬರದ ಜೊತೆ ಹೀಗೆ ಮಾಡಿದ್ದ ಹಿಂ-ದೂ ರಾಜರುಗಳು?

ಅಕ್ಬರ್ ಹಿಂದುಗಳೆಡೆಗೆ ಸಹಿಷ್ಣುತಾ ಮನೋಭಾವ ಹೊಂದಿದ್ದ ಎಂದು ನಮಗೆ ಓದಿಸಲಾಗುತ್ತದೆ. ಆದರೆ ಆತ ಹಾಗಿರಲಿಲ್ಲ. ಔರಂಗಜೇಬನ ಕ್ರೌ ರ್ಯದ ಬಗ್ಗೆಯಂತೂ ನಿಮಗೆಲ್ಲಾ ಗೊತ್ತೇ ಇದೆ. ಅಕ್ಬರ್‌ನ ಹಾದಿಯಲ್ಲೇ ಔರಂಗಜೇಬ ನಡೆಯುತ್ತಿದ್ದ. ಔರಂಗಜೇಬ ಕೂಡ ಹಿಂದುಗಳ ಜೊತೆ ಅತ್ಯಂತ ಕ್ರೂ ರ ವಾಗಿ ನಡೆದುಕೊಂಡಿದ್ದ. ಔರಂಗಜೇಬನ ಈ ರೀತಿಯ ಕ್ರೂ ರ ನಡೆಗಳಿಂದಾಗಿ ಹಿಂದುಗಳು ತತ್ತರಿಸಿಹೋಗಿದ್ದರು. ಔರಂಗಜೇಬನ ವಿರುದ್ಧ ಪ್ರ ತೀ ಕಾ ರ ತೀರಿಸಿಕೊಳ್ಳಲು ಹಿಂದೂ ರಾಜರುಗಳು ಅಕ್ಬರ್‌ನ ಕಬ್ರ್ (ಸಮಾಧಿ) ನಿಂದ ಅಕ್ಬರ್‌ನ ಮೂ-ಳೆ-ಗ-ಳನ್ನ ತೆಗೆದು ಅವುಗಳನ್ನ ಸು-ಟ್ಟು ಹಾಕಿದ್ದರು.

Advertisement
Share this on...