ಕರ್ನಾಟಕದಲ್ಲಿ ನಾನಾ ಕಡೆ ಹಿಂದೂ ಮೂರ್ತಿಗಳನ್ನ ಒಡೆದ ಆರೋಪಿ ಅರೆಸ್ಟ್: ಭದ್ರತಾ ಕಾರಣಗಳಿಂದ ಹೆಸರು ಹೇಳಲ್ಲ ಎಂದ ಪೋಲಿಸರು

in Kannada News/News 252 views

ಇತ್ತೀಚೆಗಷ್ಟೇ ಹಿಂದೂ ದೇವ-ದೇವತೆಗಳ ವಿಗ್ರಹಗಳನ್ನು ಭಗ್ನಗೊಳಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದರು. ಕರ್ನಾಟಕ ಪೊಲೀಸರು ಡಿಸೆಂಬರ್ 10 ರಂದು ಕೆಆರ್ ನಗರ ಸಮೀಪದ ಸಾಲಿಗ್ರಾಮ ಗ್ರಾಮದಲ್ಲಿ ವಿಗ್ರಹಗಳನ್ನು ಒಡೆದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಲ್ಲಿನ ವಿಗ್ರಹಗಳನ್ನು ಪೂಜಿಸಿ ಜನರನ್ನ ಮೂರ್ಖರನ್ನಾಗಿಸಿ ಮೋಸ ಮಾಡಲಾಗುತ್ತಿದೆ ಎಂದು ಭಾವಿಸಿ ಹಿಂದೂ ದೇವತೆಗಳ ವಿಗ್ರಹಗಳನ್ನು ನಾ ಶ ಪಡಿಸುತ್ತಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಭದ್ರತಾ ಕಾರಣಗಳಿಗಾಗಿ ಪೊಲೀಸರು ಆರೋಪಿಯ ಗುರುತನ್ನು ಗೌಪ್ಯವಾಗಿಟ್ಟಿದ್ದಾರೆ.

Advertisement
ಸಾಂದರ್ಭಿಕ ಚಿತ್ರ

ಆರೋಪಿಗಳು ಭೇರ್ಯ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಮತ್ತು ಮಹದೇಶ್ವರ ದೇವಸ್ಥಾನಗಳನ್ನು ಧ್ವಂ ಸ ಗೊಳಿಸಿ ‘ಶಿವಲಿಂಗ’ವನ್ನು ಧ್ವಂ ಸ ಗೊಳಿಸಿದ್ದರು. ಡಿಸೆಂಬರ್ 7 ರಂದು ನಡೆದ ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು.

ವರದಿಯ ಪ್ರಕಾರ ಜಿಲ್ಲಾ ಉಸ್ತುವಾರಿ ಆರ್. ಚೇತನ್ ಸ್ಥಳಕ್ಕೆ ಭೇಟಿ ನೀಡಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್. ಸುಮಿತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ

ಆರೋಪಿಗಳು ಲಕ್ಷ್ಮಿ ದೇವಿಯ ವಿಗ್ರಹವನ್ನು ಒ ಡೆ ದು ಬಾವಿಗೆ ಎಸೆದಿದ್ದರು ಎಂದು ಹೇಳಲಾಗಿದೆ. ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಬೀರವಳ್ಳಿ ಗ್ರಾಮದ ಹನುಮಾನ ದೇಗುಲದ ಬೀಗ ಒ ಡೆ ದು ಒಳ ಪ್ರವೇಶಿಸಲು ಮುಂದಾಗಿದ್ದು, ಸ್ಥಳೀಯರು ಸ್ಥಳಕ್ಕಾಗಮಿಸುತ್ತಿದ್ದಂತೆ ಓಡಿ ಹೋಗಬೇಕಾಯಿತು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಪೊಲೀಸರ ಪ್ರಕಾರ, ಆರೋಪಿಯು ಬಹಳ ಸಮಯದಿಂದ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಟಾರ್ಗೆಟ್ ಮಾಡಿದ್ದ. ಜನರು ವಿಗ್ರಹಗಳನ್ನು ಪೂಜಿಸುವುದರಿಂದ ಜನರು ಮೋಸ ಹೋಗುತ್ತಿದ್ದಾರೆ ಎಂದು ಆತ ಹೇಳಿದ್ದಾನೆ‌. ಆದರೆ ಆತ ದೇವಸ್ಥಾನಗಳಲ್ಲಿ ಅರ್ಪಿಸುವ ಚಿನ್ನ, ಬೆಳ್ಳಿ ಆಭರಣ, ಹಣವನ್ನೂ ಕದಿಯುತ್ತಿರಲಿಲ್ಲ. ಈ ವಿಷಯದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ಕರ್ನಾಟಕದ ಮಂಗಳೂರಿನ ದೇವಸ್ಥಾನವೊಂದರ ಕಾಣಿಕೆ ಪೆಟ್ಟಿಗೆಯಲ್ಲಿ ಕಾಂಡೋಮ್ ಪತ್ತೆಯಾದ ನಂತರ ಇಬ್ಬರನ್ನು ಬಂಧಿಸಲಾಗಿತ್ತು. ಈ ದೇವಾಲಯವು ಸ್ವಾಮಿ ಕೊರಗಜ್ಜನಿಗೆ ಸೇರಿದ್ದು, ಅವರು ಶಿವನ ಅವತಾರವೆಂದು ಜನರ ನಂಬಿಕೆಯಾಗಿದೆ. ಬಂಧಿತರನ್ನು ಮಂಗಳೂರಿನ ಜೋಕಟ್ಟೆ ಪ್ರದೇಶದ ರಹೀಮ್ (32) ಮತ್ತು ತೌಫೀಕ್ (35) ಎಂದು ಗುರುತಿಸಲಾಗಿದ್ದು, ಅವರು ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ಮೂ ತ್ರ ವಿಸರ್ಜನೆ ಮಾಡಿದ್ದನ್ನು ಒಪ್ಪಿಕೊಂಡಿದ್ದರು.

Advertisement
Share this on...