“ಹೀಗಾದರೆ ನಮಗೆ ಕೆಲಸ ಮಾಡೋಕೆ ಸಾಧ್ಯವಿಲ್ಲ, ಅವರನ್ನೆಲ್ಲಾ ಹದ್ದುಬಸ್ತಿನಲ್ಲಿಡಿ” ಪ್ರಧಾನಿ ಮೋದಿಗೆ ಪತ್ರ ಬರೆದ ದೇಶದ ವೈದ್ಯರು

in Helath-Arogya/Kannada News/News 216 views

ವುಹಾನ್ ಕರೋನವೈರಸ್ ಸಾಂಕ್ರಾಮಿಕ ರೋ-ಗ-ದ ಎರಡನೇ ಅಲೆಯ ಮಧ್ಯೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಾಲ್ತಿಯಲ್ಲಿರುವ “ವಿಐಪಿ ಸಂಸ್ಕೃತಿ”ಯ ಬಗ್ಗೆ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಶನ್ (FAIMA) ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಇಂತಹ ಚಿಂತಾಜನಕ ಸಮಯದಲ್ಲಿ, ವುಹಾನ್ ಕರೋನವೈರಸ್ ಟೆಸ್ಟಿಂಗ್ ಮತ್ತು ಐಸಿಯು ಬೆಡ್ ಗಳು “ವಿಐಪಿ ಸಂಸ್ಕೃತಿ”ಯಿಂದಾಗಿ ಕಡಿಮೆ ಬೀಳುತ್ತಿವೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ. ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ, ವೈದ್ಯರ ಸಂಘವು ಕೋವಿಡ್ ಟೆಸ್ಟ್ ಗಾಗಿ ವಿಐಪಿ ಕಲ್ಚರ್ ಸರ್ಕಾರಿ ಆಸ್ಪತ್ರೆಗಳನ್ನ ಬಳಸಿಕೊಳ್ಳುತ್ತಿದೆ ಇದು ನಿಜಕ್ಕೂ ಆ-ತಂ-ಕ-ಕಾ-ರಿ ಸ್ಥಿತಿ ಎಂದು ಹೇಳಿದೆ.

Advertisement

“ಆದರೆ ವೈದ್ಯರಿಗೆ ಟೆಸ್ಟ್ ಗಾಗಿ ಪ್ರತ್ಯೇಕ ಕೌಂಟರ್ ಇಲ್ಲ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಾ-ರ-ಣಾಂ-ತಿ-ಕ ಸಾಂಕ್ರಾಮಿಕ ರೋ-ಗ-ದ ವಿರುದ್ಧದ ಯು-ದ್ಧ-ದಲ್ಲಿ ವೈದ್ಯರು ಮುಂಚೂಣಿಯಲ್ಲಿದ್ದರೂ, ದುರದೃಷ್ಟವಶಾತ್, ಪಾಸಿಟಿವ್ ರಿಪೋರ್ಟ್ ಬಂದಿರುವ ವೈದ್ಯರಿಗೆ ಯಾವುದೇ ಸೌಲಭ್ಯಗಳು ತಾವು ಕೆಲಸ ಮಾಡುವ ಆಸ್ಪತ್ರೆಗಳಲ್ಲೇ ಸಿಗುತ್ತಿಲ್ಲ ಎಂದು ವೈದ್ಯರು ಬರೆದ ಪತ್ರಕ್ಕೆ ಸಹಿ ಹಾಕಿರುವ FAIMA ಪ್ರೆಸಿಡೆಂಟ್ ಡಾ.ರಾಕೇಶ್ ಬಾಗ್ದೊ ಹಾಗು ಜನರಲ್ ಸೆಕ್ರೆಟರಿ ಡಾ.ಶುಭಾಂಕರ್ ದತ್ತಾ ತಿಳಿಸಿದ್ದಾರೆ.

ಪತ್ರದಲ್ಲಿ, “ಸಾಂಕ್ರಾಮಿಕ ರೋ-ಗ-ದ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿರುವ ವೈದ್ಯರು ತಮ್ಮ ಪ್ರಾ-ಣ-ವನ್ನೇ ಪಣಕ್ಕಿಡುತ್ತಿದ್ದಾರೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ ಆದರೆ ಪ್ರತಿಯಾಗಿ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲು ನಾವೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ ಹಾಗು ನಮಗೆ ಐಸಿಯು ಕೂಡ ಲಭ್ಯವಿಲ್ಲ” ಎಂದು ತಿಳಿಸಲಾಗಿದೆ.

ಪತ್ರದಲ್ಲಿ FAIMA, “ವಾಸ್ತವವಾಗಿ ರ‌್ಯಾಲಿಗಳನ್ನ ನಡೆಸಿ ವೈ-ರ-ಸ್ ಹ-ರ-ಡು-ವಿ-ಕೆ-ಯನ್ನು ಹೆಚ್ಚಿಸಿದ ಎಲ್ಲ ರಾಜಕಾರಣಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತಿದೆ” ಎಂದು ತಿಳಿಸಲಾಗಿದೆ.

ವಿಐಪಿ ಕಲ್ಚರ್ ಬಗ್ಗೆ ವೈದ್ಯ ಸಂಘ ಸ್ಪೋ-ಟ-ಕ ಮಾಹಿತಿ ಬಹಿರಂಗಪಡಿಸುತ್ತ ಅವರ ಕೋವಿಡ್ ಟೆಸ್ಟ್ ಗೆ ಪ್ರತ್ಯೇಕ ಕೌಂಟರ್‌ಗಳಿದ್ದರೂ ಕೂಡ ಅನೇಕ ರಾಜಕಾರಣಿಗಳು ವೈದ್ಯರನ್ನು ತಮ್ಮ ನಿವಾಸಕ್ಕೆ ತಪಾಸಣೆ ಮತ್ತು ಪರೀಕ್ಷೆಗೆ ಕರೆಯುತ್ತಾರೆ ಎಂದು ಹೇಳಿದೆ.

ThePrint ವರದಿಯ ಪ್ರಕಾರ, “ಬಹುಪಾಲು ರಾಜಕಾರಣಿಗಳು ತಮ್ಮ ಮನೆಗೇ ವೈದ್ಯರನ್ನು ಕರೆಯುತ್ತಾರೆ, ಆದರೆ ಹೀಗೆ ಮಾಡಲು ವೈದ್ಯಕೀಯ ಅಧೀಕ್ಷಕರಿಂದ ಯಾವುದೇ ಕಾನೂನು ಆದೇಶವನ್ನು ಹೊಂದಿಲ್ಲ ಆದರೆ ಅನೌಪಚಾರಿಕವಾಗಿ ಹೀಗೆ ನಡೆಸಲಾಗುತ್ತದೆ” ಎಂದು ವರದಿ ಮಾಡಿದೆ.

“ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಪ್ರಧಾನ ಮಂತ್ರಿಯನ್ನು ಒತ್ತಾಯಿಸಿ ವೈದ್ಯರ ಸಂಘವು ತನ್ನ ಪತ್ರದಲ್ಲಿ ಪ್ರಧಾನಿಗೆ ಮನವಿ ಮಾಡಿದೆ.

ದೇಶದ ಚುನಾಯಿತ ಪ್ರತಿನಿಧಿಗಳು ಜನರಿಗೆ ಸೇವೆ ಸಲ್ಲಿಸುವ ಬದಲು ನಿಯಮಗಳನ್ನು ಉ-ಲ್ಲಂ-ಘಿ-ಸು-ತ್ತಿರುವುದು ದು-ರ-ದೃ-ಷ್ಟ-ಕರ. ಇದರಿಂದಾಗಿ ಜನ ಮತ್ತಷ್ಟು ಸಂ-ಕ-ಷ್ಟ ಎದುರಿಸುವಂತಾಗುತ್ತಿದೆ. ಇತ್ತೀಚೆಗಷ್ಟೆ ಕೆಲ ಕಾಂಗ್ರೆಸ್ ಮುಖಂಡರು ಹಿರಿಯ ವೈದ್ಯರೊಬ್ಬರ ಜೊತೆ ವಾ-ಗ್ವಾ-ದ ನಡೆಸಿದ್ದರು ಹಾಗು ಥ-ಳಿ-ಸಿ-ದ್ದರು ಎಂಬುದು ಭಾರತದಲ್ಲಿ ಚಾಲ್ತಿಯಲ್ಲಿರುವ ವಿಐಪಿ ಸಂಸ್ಕೃತಿಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.

ಚುನಾಯಿತ ಪ್ರತಿನಿಧಿಗಳು ನಿಯಮ ಉ-ಲ್ಲಂ-ಘಿ-ಸಿ ಲಸಿಕೆ ಪಡೆಯಬಾರದು ಮತ್ತು ಅವರ ಸರದಿಗಾಗಿ ಕಾಯಬೇಕು ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದರೂ, ಮಹಾರಾಷ್ಟ್ರದ ಕೆಲವು ಶಿವಸೇನೆ ಮುಖಂಡರು ಮತ್ತು ಪಶ್ಚಿಮ ಬಂಗಾಳದ ಟಿಎಂಸಿ ನಾಯಕರು ನಿಯಮ ಉ-ಲ್ಲಂ-ಘಿ-ಸಿ ಲಸಿಕೆ ಪಡೆದ ಉದಾಹರಣೆಗಳಿವೆ. ವುಹಾನ್ ಕರೋನವೈರಸ್ ಸಾಂಕ್ರಾಮಿಕ ವಿ-ರು-ದ್ಧ-ದ ಯು-ದ್ಧ-ದಲ್ಲಿ ನಾವು ಜಯಗಳಿಸಬೇಕಾದರೆ ಕೇಂದ್ರ ಸರ್ಕಾರವು ವಿಐಪಿ ಸಂಸ್ಕೃತಿಯ ವಿ-ರು-ದ್ಧ ಕ-ಠಿ-ಣ ಕ್ರಮ ಕೈಗೊಳ್ಳಲೇಬೇಕು.

Advertisement
Share this on...