ಹಿಂದೂ ಮಂದಿರಗಳೆಂದರೆ ಔರಂಗ್‌ಜೇಬ್‌ಗೆ ಅಷ್ಟು ದ್ವೇಷವಿದ್ದದ್ಯಾಕೆ? ಅಷ್ಟಕ್ಕೂ ಆತ ಕಾಶಿ ವಿಶ್ವನಾಥದ ಶಿವಲಿಂಗ ಧ್ವಂಸ ಮಾಡದಿರಲು ಕಾರಣವೇನು ಗೊತ್ತಾ?

in Kannada News/News 337 views

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಬಾಬಾ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ‘ಕಾಶಿ ವಿಶ್ವನಾಥ ಕಾರಿಡಾರ್’ ಅನ್ನು ಉದ್ಘಾಟಿಸಿದರು. ದಾ ಳಿ ಕೋರರು ಈ ನಗರದ ಮೇಲೆ ದಾಳಿ ಮಾಡಿದ್ದರು, ಅದನ್ನು ನಾಶಪಡಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಿ ಮೋದಿ ಹೇಳಿದರು. ಕ ತ್ತಿ ಯ ಬಲದ ಮೇಲೆ ನಾಗರಿಕತೆಯನ್ನು ಬದಲಾಯಿಸಲು ಪ್ರಯತ್ನಿಸಿದ ಔರಂಗಜೇಬನ ದೌ ರ್ಜ ನ್ಯದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಮ ತಾಂ ಧ ತೆಯಿಂದ ಭಾರತದ ಸಂಸ್ಕೃತಿಯನ್ನು ಹತ್ತಿಕ್ಕಲು ಆತ ಯತ್ನಿಸಿದ್ದನು. ಆದರೆ ಈ ದೇಶದ ಮಣ್ಣು ಪ್ರಪಂಚದ ಇತರ ಭಾಗಗಳಿಗಿಂತ ಭಿನ್ನವಾಗಿದೆ, ಔರಂಗಜೇಬ್ ಇಲ್ಲಿಗೆ ಬಂದರೆ ಶಿವಾಜಿಯೂ ಎದ್ದೇಳುತ್ತಾನೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

ಅಷ್ಟಕ್ಕೂ ಈ ಔರಂಗಜೇಬ್ ಯಾರಾಗಿದ್ದ? ಆತ ಮಂದಿರಗಳ ಮೇಲ್ಯಾಕೆ ದಾ ಳಿ ನಡೆಸಿದ್ದ? ಯಾವ ರೀತಿಯಲ್ಲಿ ಹಿಂದುಗಳ ಮೇಲೆ ದ ಬ್ಬಾ ಳಿಕೆ ದೌ ರ್ಜ ನ್ಯ ನಡೆಸಿದ್ದ? ಬನ್ನಿ ಈ ಬಗೆಗಿನ ಇತಿಹಾಸವನ್ನು ನಿಮಗೆ ತಿಳಿಸುತ್ತೇವೆ

ತಾತ ಜಹಾಂಗೀರ್ ಆಳ್ವಿಕೆಯಲ್ಲಿ ದೋಹಾದ್‌ನಲ್ಲಿ 3 ನವೆಂಬರ್ 1618 ರಂದು ಔರಂಗಜೇಬ್‌ ಜನಿಸಿದ. ಮೊಘಲ್ ಸಾಮ್ರಾಜ್ಯದ ಆರನೇ ದೊರೆ ಔರಂಗಜೇಬ್ ಆಗಿದ್ದ. ಔರಂಗಜೇಬ್ ಮೊಘಲ್ ಚಕ್ರವರ್ತಿ ಷಹಜಹಾನ್‌ನ ಮೂರನೇ ಮಗನಾಗಿದ್ದ‌. ಔರಂಗಜೇಬ್ ಇಸ್ಲಾಮಿಕ್ ಧಾರ್ಮಿಕ ಸಾಹಿತ್ಯವನ್ನು ಓದುವುದರ ಜೊತೆಗೆ ಟರ್ಕಿಶ್ ಸಾಹಿತ್ಯವನ್ನೂ ಓದಿದ್ದನು ಮತ್ತು ಹಸ್ತಲಿಪಿ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದನು.

ಮೊಘಲ್ ಚಕ್ರವರ್ತಿ ಷಹಜಹಾನ್‌ಗೆ ನಾಲ್ಕು ಗಂಡು ಮಕ್ಕಳಿದ್ದರು. ನಾಲ್ವರ ಕಣ್ಣು ಮೊಘಲ್ ಸಿಂಹಾಸನದ ಮೇಲಿತ್ತು. ಆ ಕಾಲದಲ್ಲಿ ಎಲ್ಲ ಸಹೋದರರಿಗೂ ಅಧಿಕಾರದ ಸಮಾನ ಹಕ್ಕು ಇತ್ತು. ಇದರ ಹೊರತಾಗಿಯೂ, ಷಹಜಹಾನ್ ತನ್ನ ಹಿರಿಯ ಮಗ ದಾರಾ ಶಿಕೋವ್ ಉತ್ತರಾಧಿಕಾರಿಯಾಗಬೇಕೆಂದು ಬಯಸಿದನು. ಔರಂಗಜೇಬನು ಇದರಿಂದ ಕೋ ಪ ಗೊಂಡನು ಕಾರಣ ಅವನು ತನ್ನನ್ನು ತಾನು ಅತ್ಯಂತ ಯೋಗ್ಯ ಉತ್ತರಾಧಿಕಾರಿ ಎಂದು ಅಂದುಕೊಂಡಿದ್ದನು.

ಔರಂಗಜೇಬನಿಗೆ ಮಂದಿರಗಳ ಬಗ್ಗೆ ಯಾಕಿತ್ತು ಅಷ್ಟು ದ್ವೇ ಷ? 

ಔರಂಗಜೇಬನು ತನ್ನ ಆಳ್ವಿಕೆಯಲ್ಲಿ ಅನೇಕ ಹಿಂದೂ ವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡನು. ಉದಾಹರಣೆಗೆ, ಲಕ್ಷಾಂತರ ಹಿಂದೂಗಳು ಮು ಸ್ಲಿ ಮರಾಗಿ ಮತಾಂತರವಾಗುವಂತೆ ದೌ ರ್ಜ ನ್ಯ ನಡೆಸಿದನು. ಔರಂಗಜೇಬನು ತನ್ನ ಆಳ್ವಿಕೆಯಲ್ಲಿ ಬನಾರಸ್‌ನಲ್ಲಿರುವ ವಿಶ್ವನಾಥ ದೇವಾಲಯ ಮತ್ತು ಮಥುರಾದ ಕೇಶವ ರಾಯ್ ದೇವಾಲಯವನ್ನು ಕೆ ಡ ವಲು ಪ್ರಯತ್ನಿಸಿದನು.

ಔರಂಗಜೇಬನ ಆದೇಶದ ನಂತರ, ಮೊಘಲ್ ಸೈ ನ್ಯ ವು 1669 ರಲ್ಲಿ ಕಾಶಿ ವಿಶ್ವನಾಥ ದೇವಾಲಯವನ್ನು ಧ್ವಂ ಸ ಗೊಳಿಸಿತು, ಆದರೆ ಶಿವಲಿಂಗ ಮತ್ತು ನಂದಿಯ ಪ್ರತಿಮೆಯನ್ನು ಹಾ ನಿ ಮಾಡಲು ಸಾಧ್ಯವಾಗಲಿಲ್ಲ. ದಾ ಳಿ ಯ ಸಮಯದಲ್ಲಿ, ಜ್ಯೋತಿರ್ಲಿಂಗವನ್ನು ಉಳಿಸಲು, ದೇವಾಲಯದ ಮಹಂತರೊಬ್ಬರು ಶಿವಲಿಂಗದೊಂದಿಗೆ ಜ್ಞಾನವಾಪಿ ಕುಂಡಕ್ಕೆ ಹಾರಿದರು. ಈ ಸಂದರ್ಭದಲ್ಲಿ ಮೊಘಲ್ ಸೇನೆಯು ದೇವಾಲಯದ ಅಂಗಳದಲ್ಲಿ ಸ್ಥಾಪಿಸಲಾಗಿದ್ದ ಬೃಹತ್ ನಂದಿ ಪ್ರತಿಮೆಯನ್ನು ಒ ಡೆ ಯಲು ವಿಫಲವಾಗಿತ್ತು.

ಪ್ರಸಿದ್ಧ ಇತಿಹಾಸಕಾರ ರಿಚರ್ಡ್ ಈಟನ್ ಪ್ರಕಾರ, ಮೊಘಲರ ಆಳ್ವಿಕೆಯಲ್ಲಿ ಕೆ ಡ ವಲ್ಪಟ್ಟ ಎಲ್ಲಾ ದೇವಾಲಯಗಳ ಹಿಂದಿನ ಕಾರಣ ರಾಜಕೀಯವಾಗಿತ್ತು. ಈಟನ್ ಪ್ರಕಾರ, ಬಂ ಡು ಕೋ ರರು ಆಶ್ರಯ ಪಡೆದಿದ್ದ  ಅಥವಾ ಮೊಘಲರ ವಿರುದ್ಧ ಪಿ ತೂ ರಿ ನಡೆಸಲಾದ ಮಂದಿರಗಳನ್ನೇ ಮೊಘಲರು ಧ್ವಂ ಸ ಗೊಳಿಸಲು ಆದೇಶ ನೀಡಿದ್ದನು. ಔರಂಗಜೇಬನ ಆಳ್ವಿಕೆಯಲ್ಲಿಯೂ ಇದೇ ರೀತಿಯ ದೇವಾಲಯಗಳನ್ನು ಕೆ ಡ ವಲಾಯಿತು ಎಂದು ಈಟನ್ ಹೇಳುತ್ತಾರೆ.

ಅನೇಕ ಎಡಪಂಥೀಯ ಇತಿಹಾಸಕಾರರು ಹೇಳುವ ಪ್ರಕಾರ ಔರಂಗಜೇಬನಿಂದ ಕೆ ಡ ವಲ್ಪಟ್ಟ ದೇವಾಲಯಗಳ ಸಂಖ್ಯೆಗಿಂತ ಹೆಚ್ಚಿನ ದೇವಾಲಯಗಳನ್ನು ಆತ ನಿರ್ಮಿಸಿದ್ದ ಎಂದು ಹೇಳುತ್ತಾರೆ.

ಹಿಂದುಗಳ ಮೇಲೆ ಜಜಿಯಾ ಟ್ಯಾಕ್ಸ್ ಹೇರಿದ್ದ

ಮೊಘಲ್ ಚಕ್ರವರ್ತಿ ಅಕ್ಬರ್ ರದ್ದುಪಡಿಸಿದ ಜಜಿಯಾ ತೆರಿಗೆಯನ್ನು ಔರಂಗಜೇಬ್ ತನ್ನ ಆಳ್ವಿಕೆಯಲ್ಲಿ ಪುನಃ ಪರಿಚಯಿಸಿದನು. ಜಜಿಯಾ ಮುಸ್ಲಿಮೇತರರು ಪಾವತಿಸಬೇಕಾದ ಸಾಮಾನ್ಯ ತೆರಿಗೆಗಿಂತ ಭಿನ್ನವಾಗಿತ್ತು. ಜಜಿಯಾ ಧರ್ಮದ ಆಧಾರದ ಮೇಲೆ ಪಕ್ಷಪಾತ ತೆರಿಗೆಯಾಗಿತ್ತು. ಆದರೆ ಆ ಸಮಯದಲ್ಲಿ ಮರಾಠರು ಮೊಘಲರಿಂದ ವ ಶ ಪ ಡಿ ಸಿಕೊಂಡ ದಕ್ಷಿಣದ ಭಾಗವನ್ನು ಅವರು ಮು ಸ್ಲಿ ಮ ರಿಂದ ಜಕಾತ್ ಸಂಗ್ರಹಿಸುತ್ತಿದ್ದರು ಮತ್ತು ಹಿಂದೂಗಳು ಅಂತಹ ಯಾವುದೇ ತೆರಿಗೆ ವ್ಯವಸ್ಥೆಯಿಂದ ಹೊರಗಿದ್ದರು.

ಇತರ ಮೊಘಲ್ ಆಡಳಿತಗಾರರಿಗಿಂತ ಹೆಚ್ಚು ಹಿಂದೂಗಳನ್ನು ಔರಂಗಜೇಬನ ಆಳ್ವಿಕೆಯಲ್ಲಿ ನೇಮಿಸಲಾಯಿತು ಎಂದು ಎಡಪಂಥೀಯ ಇತಿಹಾಸಕಾರರು ಆತನ ಕ್ರೂ ರ ತೆ ಯನ್ನ ಮುಚ್ಚಿಡಲು ಸುಳ್ಳು ಹೇಳುತ್ತಾರೆ.

ನೈಜ ಸತ್ಯವೇನೆಂದರೆ ಮರಾಠರಾಗಲಿ ಅಥವ ಇನ್ಯಾವುದೇ ಹಿಂದೂ ರಾಜರುಗಳಾಗಲಿ ಮು ಸ್ಲಿ ಮ ರ ಮೇಲೆ ಯಾವುದೇ ರೀತಿಯ ಜಕಾತ್‌ನ್ನ ಹೇರಿರಲಿಲ್ಲ.

Advertisement
Share this on...