ಬೆಂಗಳೂರಿನ ಬಳಿಯಿರುವ ಹೊಸೂರಿನಲ್ಲಿ ಪತ್ತೆಯಾಯ್ತು ವಿಚಿತ್ರ ಜಾಗ: ಇದಕ್ಕೂ ಮಹಾಭಾರತಕ್ಕೂ ಇರುವ ಲಿಂಕ್ ಕಂಡು ಕಂಗಾಲಾದ ತಜ್ಞರು

in Kannada News/News/Story/ಕನ್ನಡ ಮಾಹಿತಿ 15,317 views

ಚೆನ್ನೈ: ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ 55 ಕಿ.ಮೀ ದೂರದಲ್ಲಿರುವ ಕುಂದುಕೊಟ್ಟೈ ಎಂಬ ದೂರದ ಹಳ್ಳಿಯಲ್ಲಿ ಸುಮಾರು 3,000 ವರ್ಷಗಳಷ್ಟು ಹಳೆಯದಾದ ಅಪರೂಪದ ವೃತ್ತಾಕಾರದ ಚಕ್ರವ್ಯೂಹ ಪತ್ತೆಯಾಗಿದೆ.  ಕುಂದುಕೊಟ್ಟೈನಲ್ಲಿ ಕುರುಗಾಹಿಯೊನಬ್ಬನಿಂದ ವಿಚಿತ್ರವಾದ ಈ ವೃತ್ತಾಕಾರದ ಬಂಡೆಗಳ ಬಗ್ಗೆ ಕೇಳಿದ ನಂತರ, ವೀರಗಲ್ಲಿನ ತಜ್ಞ ಸುಗವನ ಮುರುಗನ್ ಮತ್ತು ಕೃಷ್ಣಗಿರಿ ಐತಿಹಾಸಿಕ ಸಂಶೋಧನಾ ಕೇಂದ್ರದ ಪುರಾತತ್ವ ಅಧಿಕಾರಿ ಎಸ್ ಪರಂತಮನ್ ಒಂದು ವಾರದ ಹಿಂದೆ ಗ್ರಾಮಕ್ಕೆ ಭೇಟಿ ಕೊಟ್ಟರು. ಈ ಗ್ರಾಮವು ಕಾಡಿನ ಸಮೀಪದಲ್ಲಿರುವುದರಿಂದ, ಅವರು ಸ್ಥಳವನ್ನು ತಲುಪಲು ಆರು ಕಿ.ಮೀ.ಗಿಂತಲೂ ಹೆಚ್ಚು ಟ್ರೆಕ್ಕಿಂಗ್ ನಡೆಯಬೇಕಾಯಿತು. ದಾರಿಯಲ್ಲಿ ಒಣ ಆನೆ ಸಗಣಿ ದಿಬ್ಬಗಳನ್ನು ದಾಟಿ ಅವರು ಸ್ಥಳಕ್ಕೆ ತಲುಪಿದರು.

Advertisement

ಆ ಸ್ಥಳವನ್ನ ಹುಡುಕಿದ ಬಳಿಕ ಇಬ್ಬರೂ ಅದರ ಚಿತ್ರಗಳು ಹಾಗು ಅದರ ವಿವರಗಳನ್ನು ಲಂಡನ್ ಮೂಲದ ಜೆಫ್ ಸಾವಾರ್ಡ್ ಅವರಿಗೆ ಚಕ್ರವ್ಯೂಹ ಮತ್ತು ಜಟಿಲ ಕ್ಷೇತ್ರದ ಫೋಟೋಗಳನ್ನ ಕಳುಹಿಸಿದ್ದಾರೆ.  ಇದನ್ನು ವಿವರವಾಗಿ ಅಧ್ಯಯನ ಮಾಡಿದ ನಂತರ, ಇದು 2500 ಕ್ಕಿಂತಲೂ ವರ್ಷಗಳಿಗಿಂತ ಹೆಚ್ಚು ಹಳೆಯದಾಗಿರಬೇಕು ಎಂದು ಸಾವಾರ್ಡ್ ಹೇಳಿದ್ದಾರೆ. ಹಾದಿಗಳ ಸಂಕೀರ್ಣ ಜಾಲದೊಂದಿಗೆ ದೊರೆತಿರುವ ಈ ಚಕ್ರವ್ಯೂಹಗಳು ಅನೇಕ ಸಂಸ್ಕೃತಿಗಳಿಗೆ ಸಂಬಂಧಿಸಿದ ಫಲವತ್ತತೆಯ ಸಂಕೇತವಾಗಿದೆ. ಅವು ಪ್ರಜ್ಞೆಯ ವಿಶಿಷ್ಟ ಮಾದರಿಯನ್ನು ಪ್ರತಿನಿಧಿಸುತ್ತವೆ ಮತ್ತು ನವಶಿಲಾಯುಗದ ಕಾಲದಿಂದಲೂ ಧ್ಯಾನ ಸಾಧನವಾಗಿ ಬಳಸಲ್ಪಡುತ್ತಿದ್ದವು ಎಂದು ಹೇಳಲಾಗುತ್ತಿದೆ.

“ನಾವು ಸುರುಳಿಯಾಕಾರದ ಮತ್ತು ಆಯತಾಕಾರದ ಆಕಾರಗಳಲ್ಲಿ ಚಕ್ರವ್ಯೂಹಗಳನ್ನು ಕಂಡುಹಿಡಿದಿದ್ದೇವೆ, ಆದರೆ ವೃತ್ತಾಕಾರದ ಆಕಾರವನ್ನ ನಾವು ಇದೇ ಮೊದಲ ಬಾರಿಗೆ ಕಂಡುಹಿಡಿದದ್ದು. ಸಾವಾರ್ಡ್‌ನಂತಹ ತಜ್ಞರು ಇದು ಚಕ್ರವ್ಯೂಹದ ಹಳೆಯ ರೂಪಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಇದರ ನಿಖರವಾದ ಸಮಯವನ್ನ ಕಂಡುಹಿಡಿಯಲು ನಾವು ಬಂಡೆಗಳನ್ನು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ ” ಎಂದು ಸುಗವನ ಮುರುಗನ್ ಹೇಳಿದ್ದಾರೆ. ಧರ್ಮಪುರಿಯ ಕಂಬೈನಲ್ಲೂರ್ ನಲ್ಲಿ ಆಯತಾಕಾರದ ಆಕಾರದ ಚಕ್ರವ್ಯೂಹವನ್ನು ಕಂಡುಹಿಡಿದಿದ್ದಾರೆ ಮತ್ತು ಕೃಷ್ಣಗಿರಿ ಜಿಲ್ಲೆಯ ಕುಂಧಾನಿಯಲ್ಲಿ ಕ್ರಮವಾಗಿ 2014 ಮತ್ತು 2016 ರಲ್ಲಿ ಸುರುಳಿಯಾಕಾರ ರಚನೆಯನ್ನೂ ಕಂಡುಹಿಡಿದಿದ್ದಾರೆ.

ಜನರು ವಿವಿಧ ಕಾರಣಗಳಿಗಾಗಿ ಚಕ್ರವ್ಯೂಹವನ್ನು ಪೂಜಿಸುತ್ತಿದ್ದರು. ಒಂದು ಚಕ್ರವ್ಯೂಹವು ಏಳು ಮಾರ್ಗಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಒಂದು ಸರಿಯಾದ ಮಾರ್ಗವಾಗಿದ್ದು ಅದರ ಮೂಲಕವಷ್ಟೇ ಹೊರಬರಬಹುದಾಗಿತ್ತು. ಚಕ್ರವ್ಯೂಹದೊಳಗೆ ದಾರಿ ಕಂಡಿಹಿಡಿದು ಹೊರಬರುವುದು ಕಷ್ಟವೇ ಸರಿ, ಸರಿಯಾದ ಹಾದಿಯಲ್ಲಿ ಹೊರಬರುವವರು ದೇವರಿಂದ ಆಶೀರ್ವದಿಸಲ್ಪಡುತ್ತಾರೆ ಎಂದು ನಂಬಲಾಗಿದೆ. “ಜನರು ಮಕ್ಕಳನ್ನ ಕರುಣಿಸುವಂತೆ ಬೇಡಿಕೊಳ್ಳಲು ಚಕ್ರವ್ಯೂಹವನ್ನು ಪೂಜಿಸುತ್ತಿದ್ದರು, ಅಥವಾ ಅವರ ಅನ್ವೇಷಣೆಗಳಲ್ಲಿ ಮತ್ತು ತಮ್ಮ ಜಾನುವಾರುಗಳಿಗಾಗಿ ದೀರ್ಘಾವಧಿಯವರೆಗೆ ಯಶಸ್ಸನ್ನು ಗಳಿಸುತ್ತಿದ್ದರು” ಎಂದು ಮುರುಗನ್ ಹೇಳಿದ್ದಾರೆ.

ಆದರೆ ಈ ಬಗ್ಗೆ ಸ್ಥಳೀಯರು ಹೇಳುವ ಪ್ರಕಾರ ಇದು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಬಳಕೆಯಾದ ಚಕ್ರವ್ಯೂಹದ ಪ್ರತಿಕೃತಿಯಾಗಿದ್ದು ಅದರ ಆಧಾರ ಮೇಲೆಯೇ ಇದನ್ನ ರಚಿಸಲಾಗಿತ್ತು‌ ಎಂದು ಹೇಳುತ್ತಾರೆ.

ಮಹಾಭಾರತ ನಡೆದದ್ದು ನಿಜವೆಂದು ಇದೀಗ ಇತಿಹಾಸಕಾರರು, ಸಂಶೋಧನಾಕಾರರೂ ಒಪ್ಪಿಬಿಟ್ಟರು; ಸಿಕ್ಕಿವೆ ಮಹತ್ವದ ಪುರಾವೆಗಳು

ಅಲೆಗ್ಸಾಂಡರ್ ದಿ ಗ್ರೇಟ್ ಅನ್ನುವ ಹೆಸರನ್ನಂತೂ ನೀವು ಕೇಳಿಯೇ ಇರ್ತೀರ, ಅಲೆಗ್ಸಾಂಡರ್ ಹಾಗು ರಾಜ ಪುರೂರವ(ಪೋರಸ್) ನ ನಡುವೆ ನಡೆದ ಐತಿಹಾಸಿಕ ಘನಘೋ-ರ ಯು-ದ್ಧದ ಬಗ್ಗೆಯಂತೂ ಗೊತ್ತೇ ಇರುತ್ತೆ ಆದರೆ ನಿಜಕ್ಕೂ ಅಲೆಗ್ಸಾಂಡರ್ ಅನ್ನುವ ವ್ಯಕ್ತಿ ನಿಜಕ್ಕೂ ಇದ್ದನೇ? ಅಥವ ಆತ ಕಾಲ್ಪನಿಕ ವ್ಯಕ್ತಿಯಾ?

ನಾನು ಹೀಗೆ ಹೇಳುತ್ತಿರೋದಕ್ಕೂ ಕಾರಣವಿದೆ, ಅಲೆಗ್ಸಾಂಡರ್ ನ ಕಾಲಖಂಡ ಕ್ರಿ.ಪೂ 356 ಅಂತ ಹೇಳಲಾಗುತ್ತೆ, ಆದರೆ ಆತ ಇಡೀ ಜಗತ್ತನ್ನೇ ಗೆಲ್ಲಲು ಹೊರಡುತ್ತಾನೆ, ಕೊನೆಗೆ ಸಿಂಧೂ ನದಿ ದಾಟಿ ಭಾರತವನ್ನೂ ಗೆಲ್ಲಲು ತನ್ನ ಎರಡು ಲಕ್ಷ ಸೈ-ನ್ಯದ ಮೂಲಕ ಯತ್ನಿಸಲು ಮುಂದಾದಾಗ ರಾಜ ಪುರೂರವ (ಗ್ರೀಕರ ಪ್ರಕಾರ ಈತ ಪೋರಸ್, ಅವರಿಗೆ ಪುರೂರವ ಅನ್ನಲು‌ ನಾಲಿಗೆ ಹೊರಳದೆ ಪೋರಸ್ ಅಂತ ಕರೆದದ್ದು) ನ ಚಿಕ್ಕ ಸೈ-ನ್ಯವನ್ನ ಗೆಲ್ಲಲು ಅಲೆಗ್ಸಾಂಡರ್ ಹೆಣಗಾಡುವಂತಹ ಸ್ಥಿತಿ ಬಂತು ಅನ್ನೋದನ್ನೂ ನಾವು ಓದಿದ್ದೇವೆ.

ಆದರೆ ಈ ಅಲೆಗ್ಸಾಂಡರ್ ಅನ್ನುವ ವ್ಯಕ್ತಿಯ ಬಗ್ಗೆ ಮುಖ್ಯವಾಗಿ ಆತನ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿ ಬರೆದ ಮುಖ್ಯ ಗ್ರೀಕ್ ಇತಿಹಾಸಕಾರರೆಂದರೆ ಅದು  ಸ್ಟ್ರಾಬೋ(Strabo),  ಅರಿಯನ್(Arrian) ಹಾಗು ಪ್ಲುಟಾರ್ಕ್(Plutarch). ಅಷ್ಟಕ್ಕೂ ಅಲೆಗ್ಸಾಂಡರ್ ಅನ್ನುವ ವ್ಯಕ್ತಿ ಇದ್ದ ಎನ್ನಲು ಪುರಾತತ್ವ ಸಾಕ್ಷಿಗಳು ಅಂದರೆ Archeological evidences ಅಂತೂ ಇಲ್ಲಿಯವರೆಗೆ ಸಿಕ್ಕಿಲ್ಲ ಆದರೆ ಈ ಮೇಲಿನ ಗ್ರೀಕ್ ಇತಿಹಾಸಕಾರರು ಅಲೆಗ್ಸಾಂಡರ್ ಸ-ತ್ತ 300-400 ವರ್ಷಗಳ ನಂತರ ಅಲೆಗ್ಸಾಂಡರ್ ಅನ್ನೋ ವ್ಯಕ್ತಿಯಿದ್ದ, ಆತ ಹಾಗಿದ್ದ ಹೀಗಿದ್ದ, ಆತನ ಇತಿಹಾಸ ಹಾಗಿತ್ತು ಆತ ಅಷ್ಟು ಯು-ದ್ಧ ಮಾಡಿದ್ದ ಅನ್ನೋ ವರ್ಣನೆ ಮಾಡಿದ ದಾಖಲೆಗಳನ್ನೇ ನಾವು ನಂಬಿ ಅಲೆಗ್ಸಾಂಡರ್ ಎಂಬ ವ್ಯಕ್ತಿ ಇದ್ದ ಅಂತ ಕಣ್ಣು ಮುಚ್ಚಿ ಒಪ್ಪಿಕೊಂಡು ಬಿಡುತ್ತೇವೆ & ಅಲೆಗ್ಸಾಂಡರ್ ಒಬ್ಬ ಕಾಲ್ಪನಿಕ ವ್ಯಕ್ತಿ ಅಂತ ಇಂದು ಜಗತ್ತು ಒಪ್ಪಲ್ಲ.

ನನಗೆ ಅಲೆಗ್ಸಾಂಡರ್ ನಿಜಕ್ಕೂ ಇದ್ದನೋ ಇಲ್ಲವೋ, ಆತ ಕಾಲ್ಪನಿಕ ಪಾತ್ರವಾಗಿದ್ದನಾ? ಆತನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುವ ಉದ್ದೇಶ ನನಗಿಲ್ಲ. ವಿದೇಶಿ ಇತಿಹಾಸಕಾರರು ಬರೆದರೆ ಅದು 100% ಸತ್ಯ ಅಂತ ನಂಬುವ ನಾವುಗಳು ನಮ್ಮದೇ ಇತಿಹಾಸಕಾರರು, ಋಷಿ ಮುನಿಗಳು ಬರೆದಂತಹ ಇತಿಹಾಸವನ್ನ ಮಾತ್ರ ಒಪ್ಪದೇ ಅದನ್ನ ವಿ-ರೋಧಿಸೋದನ್ನ ನೋಡಿದರೆ ಪಾಶ್ಚಾತ್ಯ ಇತಿಹಾಸಕಾರರು ಇತಿಹಾಸ ಬರೆಯುವ ಮುನ್ನ ಹಾಗಿದ್ದರೆ ಭಾರತ ಇತಿಹಾಸ ಇರಲೇ ಇಲ್ಲವೇ? ರಾಮಾಯಣ ಮಹಾಭಾರತ ನಡೆದಿರಲಿಲ್ಲವೇ?

ಹೊರಜಗತ್ತು ಇನ್ನೂ ಜೀವ ವಿಕಾಸವನ್ನೇ ಹೊಂದಿರದಿದ್ದಾಗ ಭಾರತ ಹಾಗು ಇಲ್ಲಿನ ಜನ ಸುಸಂಸ್ಕೃತರಾಗಿದ್ದರು, ಅಲ್ಲಿನ ಜನ ಬಟ್ಟೆಯೆಂದರೆ ಏನು ಅಂತ ಅರಿಯುವ ಸ್ಥಿತಿಯಲ್ಲಿದ್ದಾಗಲೇ ನಮ್ಮಲ್ಲಿ ವೈಜ್ಞಾನಿಕ ರೀತಿಯಲ್ಲಿ ನಗರಗಳ ನಿರ್ಮಾಣ, ಜನಜೀವನ, ಟಕ್ನಾಲಾಜಿ ಉತ್ತುಂಗಕ್ಕೆ ಹೋಗಿತ್ತು. ಹಾಗಾದರೆ ವಿದೇಶಿ ಇತಿಹಾಸಕಾರರು ಇದನ್ನ ಉಲ್ಲೇಖಿಸಿಲ್ಲ‌ ಅನ್ನೋ ಕಾರಣಕ್ಕೆ ನಾವು ನಮ್ನಲ್ಲಿ ನಡೆದ ಐತಿಹಾಸಿಕ ಘಟನೆಗಳೆಲ್ಲಾ ಸಾರಾಸಗಟಾಗಿ ತಿರಸ್ಕರಿಸಿ ಅದು ಸುಳ್ಳು ಅಂತ ಹೇಳಬಹುದಾ?

ಹೊರ ದೇಶದ ಇತಿಹಾಸಕಾರರು ಬರೆದ ಇತಿಹಾಸವನ್ನ ಒಪ್ಪುವ ನಮ್ಮ ದೇಶದವರು ಅದೇ ನಮ್ಮ ದೇಶದ ಇತಿಹಾಸ, ಮಹಾಕಾವ್ಯಗಳ ವಿಷಯಕ್ಕೆ ಬಂದರೆ ಆ ಇತಿಹಾಸವನ್ನ ಧರ್ಮ, ಜಾತಿ, ಮತ, ಪಂಥಗಳ ಜೊತೆಗೆ ಲಿಂಕ್ ಮಾಡಿ ರಾಮಾಯಣ ಮಹಾಭಾರತ ಅನ್ನೋಂಥದ್ದು ಕೇವಲ ಕಟ್ಟು ಕಥೆ, ಅಂತಹ ಘಟನೆಗಳು ನಮ್ಮ ದೇಶದಲ್ಲಿ ನಡೆದೇ ಇಲ್ಲ ಅನ್ನೋ ಮಾತನ್ನ ಹೇಳಿ ಬಿಡ್ತಾರೆ.

ಆದರೆ ಇಂದು ನಾನು ನಿಮಗೆ ಸಾವಿರಾರು ವರ್ಷಗಳ ಹಿಂದೆ ನಡೆದಿದ್ದ ಮಹಾಭಾರತ, ರಾಮಾಯಣ ನಡೆದದ್ದು ನಿಜ ಹಾಗು ಐತಿಹಾಸಿಕ ಸತ್ಯ ಅನ್ನೋದನ್ನ ಸಾಬೀತು ಮಾಡುವ ಕೆಲ ಸಂಗತಿಗಳನ್ನ ಬಯಲು ಮಾಡುವ ಸಾಕ್ಷ್ಯಾಧಾರಗಳನ್ನ ತೋರಿಸುತ್ತೇನೆ.

ಮಹಾಭಾರತ ಕಾವ್ಯ ಕೇವಲ ಕಾಲ್ಪನಿಕ ಕಥೆಯಲ್ಲ ಬದಲಾಗಿ ಅದು ಭಾರತದ ಇತಿಹಾಸವಾಗಿದ್ದು ಆ ಘಟನೆ ಒಂದು ವೇಳೆ ಸುಳ್ಳೇ ಆಗಿದ್ದರೆ ಅದನ್ನ ರಚಿಸಿರುವ ಋಷಿ ಮುನಿಗಳು ಮಹಾಭಾರತವನ್ನ ‘ಕಾವ್ಯ’ ಅಂತ ಕರೆಯುವ ಬದಲು ಅದನ್ನ ‘ಮಹಾಭಾರತ ಕಥೆ’ ಎಂದು ಕರೆಯುತ್ತಿದ್ದರು.

ಮಹಾಭಾರತದಲ್ಲಿ ರಾಜಾ ಮನು ವಂಶಜರ ಸುಮಾರು 50 ಕ್ಕೂ ಹೆಚ್ಚು ರಾಜರುಗಳ ಇತಿಹಾಸವನ್ನ ವರ್ಣಿಸಲಾಗಿದೆ. ರಾಜ ಪಾಂಡು ಹಾಗು ಧೃತರಾಷ್ಟ್ರ ಇದೇ ವಂಶಜರಾಗಿದ್ದರು. ಒಂದು ವೇಳೆ ಮಹಾಭಾರತ ಒಂದು ಕಥೆಯೇ ಆಗಿದ್ದರೆ ಅದನ್ನ ಬರೆಯುವವರು ಅದರಲ್ಲಿ ಇಡೀ ವಂಶಾವಳಿಗಳ ಇತಿಹಾಸ ಬರೆಯುವ ಬದಲು ಐದೋ ಹತ್ತೋ ರಾಜರಗಳ ಬಗ್ಗೆ ಬರೆದು ಕಥೆ ಮುಗಿಸಿರುತ್ತಿದ್ದರು. ಹಾಗೇನಾದರೂ ಕೇವಲ ಐದೋ ಹತ್ತೋ ಜನರ ಬಗ್ಗೆ ಬರೆದಿದ್ದರೆ ಅದನ್ನ ಕಥೆ ಎಂದು ಒಪ್ಪಿಕೊಳ್ಳಬಹುದಿತ್ತು ಆದರೆ ಮಹಾಭಾರತದಲ್ಲಿ ನೂರಾರು ಜನರ ಇತಿಹಾಸದ ಬಗ್ಗೆ ವಿಸ್ತೃತವಾದ ಉಲ್ಲೇಖಗಳಿವೆ,‌ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ ಸುಮಾರು 500 ಕ್ಕೂ ಹೆಚ್ಚು ಊರುಗಳ ಉಲ್ಲೇಖವಿದ್ದು ಆ ಊರುಗಳು ಈಗಲೂ ಭಾರತದಲ್ಲಷ್ಟೇ ಯಾಕೆ ಪಕ್ಕ ದದ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲೂ ಕಾಣುತ್ತೇವೆ.

ಭರತನಿಂದ ಭಾರತ:

ದುಶ್ಯಂತ ಹಾಗು ಶಕುಂತಲೆಯ ಮಗನಾದ ಭರತನ ಹೆಸರಿನಿಂದಲೇ ಭಾರತಕ್ಕೆ ಆ ಹೆಸರು ಬಂದಿತು ಎನ್ನುತ್ತವೇ ಈ ಮಹಾಕಾವ್ಯಗಳು, ಭರತನ ಕುರಿತಾದ ಹಲವು ವಿವರಗಳು ಮಹಾಭಾರತ ಕಾವ್ಯದಲ್ಲಿ ಉಲ್ಲೇಖವಿದೆ. ಭಾರತವೆಂಬ ಈ ದೇಶ ಅಸ್ತಿತ್ವದಲ್ಲಿರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮಹಾಭಾರತ ಈ ದೇಶದಲ್ಲಿ ಘಟಿಸಿತ್ತು ಅನ್ನೋದೂ ಆಗಿದೆ. ಮಹಾಭಾರತ ಭಾರತ ದೇಶದ ಅಂತಃಸತ್ವವಾಗಿದೆ ಅನ್ನೋದ್ರಲ್ಲಿ ಯಾವ ಸಂಶಯಗಳೂ ಇಲ್ಲ.

ಶ್ರೀ ಕೃಷ್ಣ ಹಾಗು ದ್ವಾರಕೆ:

ಶ್ರೀಕೃಷ್ಣ ದ್ವಾರಕಾ ನಗರದ ರಾಜನಾಗಿದ್ದ, ದ್ವಾರಕಾ ನಗರದ ಉಲ್ಲೇಖ ಹಾಗು ದ್ವಾರಕಾ ನಗರ ಸಾವಿರಾರು ವರ್ಷಗಳ ಹಿಂದೆ ದೊಡ್ಡ ಪ್ರವಾಹದಲ್ಲಿ ಕೊ-ಚ್ಚಿ ನೀರಿನಲ್ಲಿ ಮುಳುಗಿಹೋಯಿತು ಅನ್ನೋದನ್ನೂ ಕೂಡ ಅದೇ ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಆದರೆ ಎಷ್ಟೋ ವರ್ಷಗಳವರೆಗೆ ಇದನ್ನ ಸು-ಳ್ಳು ಅಂತಲೇ ನಂಬಲಾಗಿತ್ತು ಆದರೆ 80 ರ ದಶಕದಲ್ಲಿ ಎಸ್.ಆರ್.ರಾವ್ ಎಂಬ ವಿಜ್ಞಾನಿಯೊಬ್ಬರು ಶ್ರೀಕೃಷ್ಣನ ಕಾಲ ದ್ವಾರಕಾ ಪಟ್ಟಣದ ಬಗ್ಗೆ ರಿಸರ್ಚ್ ಮಾಡಲು ಮುಂದಾದಾಗ ದ್ವಾರಕೆಯ ಹತ್ತಿರವಿರುವ ಸಮುದ್ರದಲ್ಲಿ ಮರೈನ್ ಆರ್ಕಿಯಾಲಾಜಿಸ್ಟ್ ಗಳ ಸಹಾಯದಿಂದ ಸಮುದ್ರದಾಳದಲ್ಲಿ ಹುಡುಕಾಟ ನಡೆಸಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿತ್ತು.

ಸುಮಾರು ಕಿಲೋಮೀಟರ್ ಗಳ ದೂರ ಸಮುದ್ರದಲ್ಲಿ  ತೆರಳಿ ನಂತರ ಅಲ್ಲಿ ಸುಮಾರು 70 ರಿಂದ 150 ಅಡಿ ಸಮುದ್ರದಾಳದಲ್ಲಿ ಹಾಗು ಸುಮಾರು 370 ಮೀಟರ್ ಗಳಷ್ಟು ದೂರದಲ್ಲಿ ವಿಶೇಷಜ್ಞರು ಹುಡುಕಿದಾಗ ಸಾವಿರಾರು ವರ್ಷಗಳ ಹಿಂದೆ ಅಲ್ಲೊಂದು ನಗರವಿತ್ತು, ಅಲ್ಲಿನ ಸಾಮ್ರಾಜ್ಯದ ಗೋಡೆಗಳು, ನಗರವಿರುವ ಎಲ್ಲಾ ಕುರುಹುಗಳನ್ನೂ ನೋಡಿ ಸ್ವತಃ ವಿಜ್ಞಾನಿಗಳೇ ಬೆ-ಚ್ಚಿಬಿ-ದ್ದಿದ್ದರು. ಶ್ರೀಕೃಷ್ಣನ ದ್ವಾರಕಾ ಈಗಲೂ  ಸಮುದ್ರದಲ್ಲಿದ್ದು ಅಲ್ಲಿನ ಗೋಡೆ ಸಮುದ್ರದಲ್ಲಿ ಎಷ್ಟು ವಿಶಾಲವಾಗಿದೆಯೆಂದರೆ ಗುಜರಾತಿನ ದ್ವಾರಕಾದ ಸಮುದ್ರದಿಂದ 800 ಕಿ.ಮೀ ದೂರವಿರುವ ಭರೂಚ್ ಎಂಬ ಜಿಲ್ಲೆಯಲ್ಲಿನ ಸಮುದ್ರದವರೆಗೂ ಆ ಗೋಡರ ಈಗಲೂ ಸಮುದ್ರದಲ್ಲಿದೆ ಅನ್ನೋದನ್ನ ವಿಜ್ಞಾನಿಗಳು ಅದಾಗಲೇ ಕಂಡು ಹಿಡಿದಿದ್ದಾರೆ. ಇದರಿಂದ ತಿಳಿದುಬರುವ ವಿಷಯವೆಂದರೆ ದ್ವಾರಕಾ ಕೇವಲ ಒಂದು ನಗರವಾಗಿರದೆ ಅದೊಂದು ರಾಜ್ಯವಾಗಿತ್ತು ಅನ್ನೋದು. ಮಹಾಭಾರತದಲ್ಲಿ ಉಲ್ಲೇಖಿತವಾಗಿರುವ ಸುಮಾರು 35 ಇಂತಹ ಜಾಗಗಳನ್ನ ಸಂಶೋಧನಾಕಾರರು ಅದಾಗಲೇ ಗುರುತಿಸಿದ್ದಾರೆ.

ಮಹಾಭಾರತದ ಯು-ದ್ಧ ನಡೆದ ಸ್ಥಳ:

ಮಹಾಭಾರತದಲ್ಲಿ ಕುರುಕ್ಷೇತ್ರ ಯು-ದ್ಧ ನಡೆದ ಜಾಗ ಈಗಲೂ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿದ್ದು ಆ ವಿಶಾಲ ರ-ಣಾಂಗ-ಣ ಮೈದಾನ ಈಗಲೂ ನಾವು ನೋಡಬಹುದಾಗಿದೆ. ಕೌರವ ಪಾಂಡವರ ನಡುವೆ ನಡೆದ ಯು-ದ್ಧದ-ಲ್ಲಿ  ಲಕ್ಷಾಂತರ ಸೈ-ನಿಕರು ಪ್ರಾ-ಣ ಕ-ಳೆದುಕೊಂ-ಡಿದ್ದರ ಪರಿಣಾಮವೋ ಏನೋ ಕುರುಕ್ಷೇತ್ರದ ಆ ಮೈದಾನನದ ಮಣ್ಣು ಹಾಗು ಜಾಗ ಈಗಲೂ ಕೆಂಪು ಬಣ್ಣದ್ದಾಗೇ ಉಳಿದಿದೆ.

ಮಹಾಭಾರತದಲ್ಲಿ ಉಲ್ಲೇಖವಾಗಿರುವ ಊರುಗಳು ಈಗಲೂ ಇವೆ:

ಮಹಾಭಾರತದಲ್ಲಿ ಉಲ್ಲೇಖವಾಗಿರುವ ಊರುಗಳು, ಜಾಗಗಳು ಈಗಲೂ ಇವೆ ಹಾಗು ಅಂತಹ ಹಲವಾರು ಜಾಗಗಳಲ್ಲಿನ ಸುಮಾರು 35 ಜಾಗಗಳನ್ನ ಪುರಾತತ್ವ ಇಲಾಖೆ ಅದಾಗಲೇ ಕಂಡು ಹಿಡಿದಿದ್ದು ಇನ್ನೂ ಹಲವಾರು ಊರುಗಳು ಪಕ್ಕದ ಪಾಕಿಸ್ತಾನ ಹಾಗು ಅಫ್ಘಾನಿಸ್ತಾನದಲ್ಲೂ ಕಾಣಬಹುದಾಗಿದೆ.

ಮಹಾಭಾರತದಲ್ಲಿ ಉಲ್ಲೇಖವಿರುವ ಊರುಗಳಲ್ಲಿ ಹಲವಾರು ಊರುಗಳು ಈಗಲೂ ಭಾರತದಲ್ಲಿವೆ, ಅದರಲ್ಲಿ ಹಸ್ತಿನಾಪುರವೂ ಒಂದಾಗಿದ್ದು ಅದು ಸದ್ಯ ಉತ್ತರಪ್ರದೇಶದ ಮೀರತ್ ಜಿಲ್ಲೆಯಾಗಿದೆ. ಗಾಂಧಾರಿಯ ಊರಾದ ಗಾಂಧಾರ ದೇಶ ಈಗಲೂ ಅಫ್ಘಾನಿಸ್ತಾನದಲ್ಲಿದ್ದು ಆ ಊರೀಗ ಕಂದಹಾರ್ ಆಗಿದೆ, ಪುರುಷಪುರ ಎಂಬ ಊರು ಈಗ ಪಾಕಿಸ್ತಾನದ ಪೇಶಾವರ್, ಇಂದ್ರಪ್ರಸ್ಥ ಈಗಿನ ಭಾರತದ ರಾಜಧಾನಿ ದೆಹಲಿ ಹೀಗೆ ಅನೇಕ ಮಹಾಭಾರತದಲ್ಲಿ ಉಲ್ಲೇಖವಾದ ಊರಿಗಳು ಈಗಲೂ ನಾವು ಕಾಣಬಹುದಾಗಿದೆ‌.

ನಾಗಾಲ್ಯಾಂಡ್ ನಲ್ಲಿ ಮಹಾಭಾರತದ ಪುರಾವೆ:

ಭಾರತದ ಪೂರ್ವೋತ್ತರ ರಾಜ್ಯಗಳಲ್ಲಿ ಒಂದಾಗಿರುವ ನಾಗಾಲ್ಯಾಂಡ್ ರಾಜ್ಯದ ‘ದೀಮಾಪುರ್’ ಎಂಬ ಜಿಲ್ಲೆಯಲ್ಲೂ ಮಹಾಭಾರತಕ್ಕೆ ಸಂಬಂಧಿಸಿದ ಹಲವಾರು ಸಾಕ್ಷಿಗಳು ಸಿಕ್ಕಿದ್ದು ಮಹಾಭಾರತದಲ್ಲಿ ಈ ನಗರ ರಾ-ಕ್ಷ-ಸಿ ಹಿಡಿಂಬೆಯ ವಾಸಸ್ಥಾನವಾಗಿತ್ತು. ಮಹಾಭಾರತದ ಪ್ರಕಾರ ಹಿಡಿಂಬಾಪುರವಾದ ಈ ಊರಿನಲ್ಲಿಯೇ ಪಾಂಡವರು ವನವಾಸದ ಸಮಯದಲ್ಲಿ ಬಂದಿದ್ದರು. ಅದೇ ಸಮಯದಲ್ಲಿ ಭೀಮ ಹಿಡಿಂಬನನ್ನ ಕೊಂ-ದು ನಂತರ ಆತನ ತಂಗಿ ಹಿಡಿಂಬೆಯನ್ನ ಮದುವೆಯಾಗಿದ್ದನು ಎಂಬ ಉಲ್ಲೇಖ ಸಿಗುತ್ತದೆ. ಈಗಲೂ ಅಲ್ಲಿನ ತಾವು ಭೀಮನ ಹೆಂಡತಿ ಹಿಡಿಂಬೆಯ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಸದ್ಯ ನಾವು ಅಲ್ಲಿ ಹಿಡಿಂಬವಾಡಾ ಎಂಬ ಪ್ರದೇಶವನ್ನೂ ಕಾಣಬಹುದಾಗಿದೆ.

ಇದಕ್ಕೂ ಶಾಕಿಂಗ್ ವಿಷಯವೆಂದರೆ ಇದೇ ಊರಿನಲ್ಲಿ‌ ಈಗಲೂ ಚದುರಂಗದ ಕಾಯಿಗಳಂತಿರುವ ಕಲ್ಲಿನ ದೊಡ್ಡ ದೊಡ್ಡ ಆಕಾರಗಳನ್ನು ಕಾಣಬಹುದಾಗಿದ್ದು ಇವುಗಳ ಮೂಲಕ ಭೀಮ ಆತನ ಮಗ ಘಟೋದ್ಗಜ ಚದುರಂಗವಾಡುತ್ತಿದ್ದರು ಎಂಬ ನಂಬಿಕೆಯಿದೆ. ಇದೇ ಜಾಗದಲ್ಲಿ ಪಾಂಡವರು ತಮ್ಮ ವನವಾಸದ ಹಲವು ವರ್ಷಗಳನ್ನ ಕಳೆದಿದ್ದರು. ಈಗಿನ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಡಿಂಬೆ ಹಾಗು ಭೀಮನ ಪುತ್ರನಾದ ಘಟೋದ್ಗಜನ ದೇವಸ್ಥಾನವೊಂದನ್ನ ನಾವು ಈಗಲೂ ಕಾಣಬಹುದಾಗಿದೆ.

ಚಕ್ರವ್ಯೂಹದ ಕರುಹು:

ಮಹಾಭಾರತ ಒಂದು ಸತ್ಯ ಘಟನೆಯಂತ ಸಾಬೀತುಪಡಿಸುವ ಮತ್ತೊಂದು ಮಹತ್ವದ ಸಾಕ್ಷಿ ನಮಗೆ ಹಿಮಾಚಲ ಪ್ರದೇಶದ ಹಮೀರಪುರನಲ್ಲಿ ಸಿಗುತ್ತದೆ. ಹಮೀರಪುರನಲ್ಲಿ ಕಲ್ಲಿನ ಬಂಡೆಯೊಂದರಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ರಚಿಸಿದ್ದ ಚಕ್ರವ್ಯೂಹದ ರೀತಿಯಲ್ಲೇ ಕಲ್ಲಿನಲ್ಲಿ ಕೆ-ತ್ತಿದ ಚಕ್ರವ್ಯೂಹವೊಂದು ಈಗಲೂ ಇದೆ.

ಚಕ್ರವ್ಯೂಹವೆಂಬುದು ಯು-ದ್ಧದಲ್ಲಿ ವಿರೋಧಿಗಳನ್ನ ಸೋಲಿಸಲು ರಚಿಸುವ ಡೇಂಜರಸ್ ಯು-ದ್ಧ ನೀತಿಯಾಗಿತ್ತು. ಚಕ್ರವ್ಯೂಹವೆಂಬುದು ಸೈ-ನ್ಯದ ಸೈ-ನಿಕರು ರಚಿಸಿರುವ 7 ಸುತ್ತಿನ ಚಕ್ರಾಕಾರದ ಸೇ-ನೆಯಾಗಿದ್ದು ಅದರ ಒಳಗೆ ಹೇಗೆ ಹೋಗಬೇಕು ಹೋದ ನಂತರ ಹೊರಗೆ ಹೇಗೆ ಬರಬೇಕು ಅನ್ನೋದು ಗೊತ್ತಾಗದೆಯೇ ವಿರೋಧಿ ಪಾಳಯಗಳು ಸೋತು ಬಿಡುತ್ತವೆ. ಇಂಥದ್ದೇ ಚಕ್ರವ್ಯೂಹವನ್ನ‌ ಕೌರವರು ಪಾಂಡವರನ್ನ ಸೋಲಿಸಲು ರಚಿಸಿರುತ್ತಾರೆ.

ಚಕ್ರವ್ಯೂಹವನ್ನ ಭೇ-ದಿಸುವ ಕಲೆ ಪಾಂಡವರಲ್ಲಿ ಕೇವಲ ಅರ್ಜುನನಿಗೆ ಗೊತ್ತಿತ್ತು. ಅದನ್ನ ಆತ ಗುರು ದ್ರೋಣಾಚಾರ್ಯರಿಂದ ತಿಳಿದಿದ್ದ. ಏಳು ಸುತ್ತಿನ ಚಕ್ರವ್ಯೂಹವನ್ನ ಹೇಗೆ ಭೇ-ದಿಸಬೇಕು ಅನ್ನುವುದನ್ನ ಅರ್ಜುನ ತನ್ನ ಸಹೋದರರಾದ ಪಾಂಡವರಿಗೆ ತರಬೇತಿ ನೀಡುವುದಕ್ಕಾಗಿ ಕಲ್ಲಿನಲ್ಲಿ ಚಕ್ರವ್ಯೂಹವನ್ನ ಕೆತ್ತಿ ಅದರ ಮೂಲಕ ಚಕ್ರವ್ಯೂಹ ಭೇ-ದಿಸುವ ಅಭ್ಯಾಸ ಮಾಡಿಸುತ್ತಿದ್ದ. ಆ ಕಲ್ಲಿನ ಚಕ್ರವ್ಯೂಹವನ್ನ ಈಗಲೂ ಹಮೀರಪುರನಲ್ಲಿ ಕಾಣಬಹುದಾಗಿದೆ.

ಲಾಕ್ಷ್ಯಗ್ರಹದ ಪ್ರಸಂಗ:

ಮಹಾಭಾರತದಲ್ಲಿ ಒಂದು ಪ್ರಸಂಗವಿದೆ, ಅಲ್ಲಿ ದುರ್ಯೋಧನ ಹಾಗು ಶಕುನಿ ಪಾಂಡವರನ್ನ ಕೊ-ಲ್ಲಲು ಸಂ-ಚು ರೂಪಿಸಿ ಲಾಕ್ಷ್ಯಗ್ರಹ ಎಂಬ ಅತಿ ಬೇಗನೆ ಸು-ಟ್ಟು ಕರಕಲಾಗುವ ಅರಮನೆಯ ನಿರ್ಮಾಣವೊಂದನ್ನ ಮಾಡಿ ಅಲ್ಲಿಗೆ ಪಾಂಡವರನ್ನ ಮೋ-ಸದಿಂದ ಕರೆಸುತ್ತಾರೆ.‌ ಅಲ್ಲಿಗೆ ಬಂದ ಪಾಂಡವರಿಗೆ ಈ ಸಂ-ಚು ತಿಳಿದು ಅರಮನೆ ಸು-ಡುವುದ-ಕ್ಕೂ ಮುನ್ನ ತಾವೇ ಅದಕ್ಕೆ ಬೆಂ-ಕಿಗಾಹು-ತಿ ಮಾಡಿ ನಂತರ ಅಲ್ಲಿ ಒಂದು ಸುರಂಗದ ಮೂಲಕ ತಪ್ಪಿಸಿಕೊಳ್ಳುತ್ತಾರೆ‌

ಯೆಸ್ ಆ ಸುರಂಗ ಗುಹೆಯನ್ನ ನಾವು ಈಗಲೂ ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ಬರ್ನಾವಾ ಗ್ರಾಮದಲ್ಲಿ ಕಾಣಬಹುದಾಗಿದೆ. ಈ ಜಾಗವನ್ನ ಮಹಾಭಾರತದ ಸಮಯದಲ್ಲಿ ವಾರ್ನಾವತ್ ಎಂದು ಕರೆಯುತ್ತಿದ್ದರು. ಈ ಜಾಗ ಮೀರತ್ ನ ಹಸ್ತಿನಾಪುರದಿಂದ 60 ಕಿ.ಮೀ ದೂರದಲ್ಲಿದೆ. ಸದ್ಯ ಭಾರತ ಪುರಾತತ್ವ ಇಲಾಖೆ ಇದರ ರ-ಹಸ್ಯ-ದ ಹಿಂದೆ ಬಿದ್ದಿದ್ದು ಇದರ ರ-ಹ-ಸ್ಯ ಕಂಡು ಹಿಡಿಯುವದಕ್ಕಾಗಿ ಶ್ರಮಿಸುತ್ತಿದೆ.

ಮೊನ್ನೆ ಮೊನ್ನೆಯಷ್ಟೇ ಇದೇ ಬಾಗಪತ್ ಜಿಲ್ಲೆಯಲ್ಲಿ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ರಥವೊಂದು ಹಾಗು ಅದರ ಅವಶೇಷಗಳು ಪತ್ತೆಯಾಗಿದ್ದವು.

ನಾವು ಮೌರ್ಯ, ಗುಪ್ತರ ಇತಿಹಾಸವನ್ನ ನಂಬುತ್ತೇವೆ ಅದಕ್ಕಿರುವ ಕಾರಣ ಅವರ ಇತಿಹಾಸ ಪಾಶ್ಚಾತ್ಯರ, ಗ್ರೀಕರ ಇತಿಹಾದದ ಕಾಲಕ್ಕೆ ಸಮಕಾಲೀನವಾಗಿದೆ ಅನ್ನೋದಕ್ಕೆ ಮಾತ್ರ. ಹಾಗೆಂದ ಮಾತ್ರಕ್ಕೆ ವಿದೇಶಿ ಇತಿಹಾಸಕಾರರು ಇತಿಹಾಸ ಬರೆಯೋಕೂ ಮುನ್ನ ಭಾರತದ ಇತಿಹಾಸವೇ ಇರಲಿಲ್ವಾ?

ಅರವತ್ತೆಪ್ಪತ್ತು ವರ್ಷಗಳ ಹಿಂದೆ ನಮಗೆ ರಾಮಾಯಣ ಮಹಾಭಾರತ ನಂಬುವುದಕ್ಕೇ ಯಾವುದೇ ಅಡ್ಡಿಯಿರಲಿಲ್ಲ ಆದರೆ ಇತ್ತೀಚೆಗೆ ಮಾತ್ರ ನಮ್ಮ ಇತಿಹಾಸ,  ರಾಮಾಯಣ, ಮಹಾಭಾರತ ಅಂದ ತಕ್ಷಣ ಮುಗಿಬಿದ್ದು ಅದು ಕೇವಲ ಕಾಲ್ಪನಿಕ ಕಥೆಗಳಷ್ಟೇ ಎಂದು ನಮ್ಮ ಇತಿಹಾಸವನ್ನೇ ತಿರುಚಿ ನಮ್ಮ ಭಾವನೆಗಳಿಗೆ ಧಕ್ಕೆ ತರುವ ಕೆಲಸಕ್ಕೆ ವೇಗ ಮಾತ್ರ ಸಿಕ್ಕಿದೆ.

ಇದರಿಂದೆಲ್ಲಾ ನಾವು ಹೊರಬರಬೇಕಾದರೆ ಮೊದಲು ನಾವು ವೇದ, ಉಪನಿಷದ್, ಮಹಾಭಾರತ, ರಾಮಯಣಗಳತಹ ಮಹಾಕಾವ್ಯಗಳನ್ನ ಓದಿ ಅವುಗಳನ್ನು ಅರ್ಥೈಸಿಕೊಂಡಾಗ ಮಾತ್ರ ನಾವು ನಮ್ಮ ಧರ್ಮದ ರ-ಕ್ಷ-ಣೆ ಹಾಗು ಉಳಿವನ್ನ ಮಾಡಬಹುದು ಹೊರತು ಇಲ್ಲವಾದರೆ ಅ’ಧರ್ಮೀ-ಯರ ಕೈಗೆ ಸಿಲುಕಿ ಮುಂದೊಂದು ದಿನ ಭಾರತ ನೆಲದಲ್ಲಿ ನಡೆದ ಇತಿಹಾಸವು ಸು-ಳ್ಳೆಂದು ಈ ಅ’ಧರ್ಮೀ-ಯ ಇತಿಹಾಸಕಾರರು, ಜಿ-ಹಾದಿ-ಗಳು ಕ-ತ್ತಿನ ಮೇಲೆ ಕ-ತ್ತಿ ಇಡೋದು ಶತಸಿದ್ಧ

– Vinod Hindu Nationalist

Advertisement
Share this on...