ಯಾವ ಕಾಲೇಜಿನಲ್ಲಿ ತೋಟದಲ್ಲಿ ಮಾಲಿಯಾಗಿದ್ದರೋ ಇಂದು ಅದೇ ಕಾಲೀಜಿನ ಪ್ರಾಂಶುಪಾಲನಾದ ವ್ಯಕ್ತಿ: ಇಲ್ಲಿದೆ ನೋಡಿ ಅವರ ಯಶಸ್ಸಿನ‌ ಕಥೆ

in Kannada News/News/Story 284 views

ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ದೃಢ ನಿರ್ಧಾರವನ್ನು ಮಾಡಿ, ಹಠ ಹಿಡಿದರೆ ಅಂತಹವರನ್ನು ಜಗತ್ತಿನ ಯಾವುದೇ ಶಕ್ತಿಯು ಕೂಡಾ ತಡೆಯಲು ಸಾಧ್ಯವೇ ಇಲ್ಲ. ಇಂತಹುದೇ ಒಂದು ಸಾಧನೆಯನ್ನು ಮಾಡಿದ ವ್ಯಕ್ತಿ ಈಶ್ವರ್ ಸಿಂಗ್ ಬರ್ಗಾಹ್. ಇವರ ಸಾಧನೆಯ ಹಾದಿಯಲ್ಲಿ ತೊಡಕುಗಳೇನೋ ಬಹಳಷ್ಟು ಇದ್ದವು‌. ಆದರೆ ಈಶ್ವರ್ ಸಿಂಗ್ ಅವರು ಎಲ್ಲಾ ತೊಡಕುಗಳನ್ನು ನಿವಾರಿಸಿ, ಅವುಗಳನ್ನು ದಾಟಿಕೊಂಡು ಯಶಸ್ಸಿನ ಮೆಟ್ಟಿಲನ್ನು ಏರಿದ್ದು, ಅವರ ಜೀವನ ಹಾಗೂ ಸಾಧನೆಯೊಂದು ಸ್ಪೂರ್ತಿ ಹಾಗೂ ಪ್ರೇರಣೆಯ ಕಥೆಯಾಗಿದೆ. ಛತ್ತೀಸ್ಗಢ ನ ಬಿಲಾಯ್ ನಗರದಲ್ಲಿ ಇರುವಂತಹ ಕಲ್ಯಾಣ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ ಈಶ್ವರ್ ಸಿಂಗ್ ಅವರು. ಆದರೆ ಕಾಲ ಹೀಗೆ ಇರಲಿಲ್ಲ, ಏಕೆಂದರೆ ಹಿಂದೊಮ್ಮೆ ಇದೇ ಕಾಲೇಜಿನಲ್ಲಿ ಅವರು ಮಾಲಿಯಾಗಿ ಕೆಲಸವನ್ನು ಮಾಡುತ್ತಿದ್ದರು.

Advertisement

ಬಾಲ್ಯದಿಂದಲೇ ಈಶ್ವರ್ ಸಿಂಗ್ ಅವರು ಉನ್ನತ ಶಿಕ್ಷಣವನ್ನು ಪಡೆಯುವ ಗುರಿಯನ್ನು ಹೊಂದಿದ್ದರು. ಆದರೆ ಪರಿವಾರದ ಆರ್ಥಿಕ ಸಂಕಷ್ಟದ ಕಾರಣದಿಂದ ಅವರ ಕನಸು ನನಸಾಗುವುದು ಸುಲಭವಾಗಿರಲಿಲ್ಲ. ಆಗಲೇ ಈಶ್ವರ್ ಸಿಂಗ್ ಅವರು ತನ್ನ ಜೀವನದ ಹಾದಿಯನ್ನು ತಾನೇ ಧೈರ್ಯವಾಗಿ ಕ್ರಮಿಸುವ ನಿರ್ಧಾರವನ್ನು ಮಾಡಿದ್ದರು. ಮೂಲತಃ ಈಶ್ವರ್ ಸಿಂಗ್ ಅವರು ಬೈತಲ್ ಪುರ್ ನ ಘುಟಿಯಾ ಗ್ರಾಮದವರು. ಅಲ್ಲೇ ಶಾಲಾ ಶಿಕ್ಷಣ ಪಡೆದ ಅವರು 1985 ರಲ್ಲಿ ಅಂದರೆ ತಮ್ಮ 19 ನೇ ವಯಸ್ಸಿನಲ್ಲೇ ಅವರು ಉದ್ಯೋಗದ ಬೇಟೆಯನ್ನು ಆರಂಭಿಸಿದರು.

ಈಶ್ವರ್ ಸಿಂಗ್ ಅವರಿಗೆ ಬಿಲಾಯ್ ನ ಒಂದು ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಉದ್ಯೋಗ ದೊರೆಯಿತು ಹಾಗೂ ಮಾಸಿಕ 150 ರೂ ಸಂಬಳ ಪಡೆಯುತ್ತಿದ್ದರು. ಉದ್ಯೋಗ ಮಾಡುತ್ತಿದ್ದರೂ ಶಿಕ್ಷಣದ ಕನಸು ಬತ್ತಿರಲಿಲ್ಲ. ಅದಕ್ಕಾಗಿಯೇ ಅವರು ಕಲ್ಯಾಣ್ ಕಾಲೇಜಿನಲ್ಲಿ ಪದವಿಗೆ ದಾಖಲಾತಿ ಪಡೆದರು. ಉದ್ಯೋಗದ ಜೊತೆಗೆ ಶಿಕ್ಷಣ ಕೂಡಾ ಮುಂದುವರೆಸಿದರು. ಹೀಗಿರುವಾಗ ಅವರಿಗೆ ಕಲ್ಯಾಣ್ ಕಾಲೇಜಿನಲ್ಲಿ ತೋಟದಲ್ಲಿ ಕೆಲಸ ಮಾಡುವ ಮಾಲಿಯ ಉದ್ಯೋಗ ಅರಸಿ ಬಂದಿತು. ಅವರು ತಮ್ಮ ಚಿಕ್ಕಪ್ಪನ ಸಹಾಯ ಪಡೆದು ಆ ಉದ್ಯೋಗಕ್ಕೆ ಸೇರಿಕೊಂಡರು.

ಹೀಗೆ ಕಲ್ಯಾಣ್ ಕಾಲೇಜಿನಲ್ಲಿ ಕೆಲಸ ಮಾಡುತ್ತಾ ಈಶ್ವರ್ ಸಿಂಗ್ ಅವರು ಒಮ್ಮೆ ವಾಚ್ ಮೆನ್ ಆಗಿ, ಮತ್ತೊಮ್ಮೆ ಸೂಪರ್ ವೈಸರ್ ಆಗಿ ಕೆಲಸವನ್ನು ಮಾಡಿದರು. ಅವರ ಕೆಲಸದಲ್ಲಿನ ಶ್ರದ್ಧೆ ಕಂಡು ಅಧಿಕಾರಿಗಳು ಬಹಳ ಖುಷಿ ಪಟ್ಟಿದ್ದರು, ಈಶ್ವರ್ ಸಿಂಗ್ ಅವರನ್ನು ಮೆಚ್ಚಿದ್ದರು. 1989 ರಲ್ಲಿ ಈಶ್ವರ್ ಸಿಂಗ್ ಅವರು ತಮ್ಮ ಡಿಗ್ರಿ ಪದವಿಯನ್ನು ಪಡೆದುಕೊಂಡರು. ಪದವಿ ಮುಗಿಸಿದ ನಂತರ ಜಬಲ್ಪುರ ಕಾಲೇಜಿನಿಂದ ಈಶ್ವರ್ ಸಿಂಗ್ ಎರಡು ಬಾರಿ ಪ್ರೀ ಬಿ.ಎಡ್ ಪರೀಕ್ಷೆಗೆ ಆಯ್ಕೆಯಾದರು. ಆದರೆ ಈಶ್ವರ್ ಸಿಂಗ್ ಅವರು ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈಶ್ವರ್ ಸಿಂಗ್ ತನ್ನ ಅಧ್ಯಯನವನ್ನು ಮುಂದುವರಿಸಲು ರಾತ್ರಿಯಲ್ಲಿ ಕಾವಲುಗಾರನಾಗಿ ಕೆಲಸವನ್ನು ಮಾಡಲು ನಿರ್ಧರಿಸಿದರು.

ಈಶ್ವರ್ ಸಿಂಗ್ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಹತ್ತಿರವಾಯಿತು. ಅವರನ್ನು ಕಲ್ಯಾಣ್ ಕಾಲೇಜಿನಲ್ಲಿ ಕ್ರಾಫ್ಟ್ ಟೀಚರ್ ಆಗಿ ನೇಮಕ ಮಾಡಲಾಯಿತು. ಸಮಯ ಸಾಗಿದಂತೆ ಅವರ ವೃತ್ತಿ ನೈಪುಣ್ಯತೆಯನ್ನು ಗಮನಿಸಿ ಅವರನ್ನು ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕ ಮಾಡಲಾಯಿತು. ಆಗಲೂ ಉದ್ಯೋಗ ಮಾಡುತ್ತಲೇ ಈಶ್ವರ್ ಸಿಂಗ್ ಅವರ ಬಿಇಡಿ, ಎಂಇಡಿ, ಎಂಫಿಲ್ ಪದವಿಗಳನ್ನು ಪಡೆದುಕೊಂಡರು. ಅವರ ಈ ಶಿಕ್ಷಣದ ಕುರಿತಾಗಿ ಶ್ರದ್ಧೆಯನ್ನು ಕಂಡು ಕಲ್ಯಾಣ್ ಕಾಲೇಜಿನ ಆಡಳಿತ ಮಂಡಳಿ ಆಶ್ಚರ್ಯ ಪಟ್ಟಿದ್ದು ಮಾತ್ರವೇ ತಮ್ಮ ಹೊಸ ಕಾಲೇಜಿಗೆ ಅವರನ್ನು ಪ್ರಾಂಶುಪಾಲರನ್ನಾಗಿ ಮಾಡಲು ನಿರ್ಧರಿಸಿತು.

2005 ರಲ್ಲಿ ಛತ್ತೀಸ್ಗಢ ಕಲ್ಯಾಣ ಶಿಕ್ಷಣ ಮಹಾವಿದ್ಯಾಲಯವು ಅಹೇರಿಯಲ್ಲಿ ನಿರ್ಮಾಣ ಮಾಡಿದ ಹೊಸ ಕಾಲೇಜಿಗೆ ಈಶ್ವರ್ ಸಿಂಗ್ ಅವರನ್ನು ಪ್ರಿನ್ಸಿಪಾಲ್ ಆಗಿ ಆಯ್ಕೆ ಮಾಡಿತು. ಸಂಘರ್ಷದ ಜೀವನದಲ್ಲಿ ಹೋ ರಾಟ ಮಾಡುತ್ತಲೇ ಶ್ರಮವನ್ನು ವಹಿಸಿದ ಈಶ್ವರ್ ಸಿಂಗ್ ಅವರಿಗೆ ಶ್ರಮದ ಫಲ ದೊರೆಯಿತು. 1998 ರಲ್ಲಿ ಕೃತಿ ಎನ್ನುವವರ ಜೊತೆ ವಿವಾಹವಾದ ಈಶ್ವರ್ ಸಿಂಗ್ ಅವರು ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದಾರೆ. ಶ್ರದ್ಧೆಯಿಂದ ಗುರಿಯ ಕಡೆಗೆ ಸಾಗಲು ಪ್ರಯತ್ನಪಟ್ಟರೆ ಫಲ ಖಂಡಿತ ಸಿಗುತ್ತದೆ ಎನ್ನವುದಕ್ಕೆ ಈಶ್ವರ್ ಸಿಂಗ್ ಅವರ ಜೀವನ ಉದಾಹರಣೆಯಾಗಿದೆ.

 

Advertisement
Share this on...