ಶರೀರದ ಕೈ, ಕಾಲು, ಸೊಂಟಕ್ಕೆ ಕರಿದಾರ ಯಾಕೆ ಕಟ್ಟಿಕೊಳ್ಳಬೇಕು? ಇದರ ಹಿಂದಿನ ಕಾರಣಗಳೇನು? ಏನಿದರ ಲಾಭ?

in Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 832 views

ಮನುಷ್ಯನ ಜೀವನದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಎದುರಿಸುತ್ತಲೇ ಜನ ಹೈರಾಣಾಗಿಬಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ, ನಾವು ನಂಬಿಕೆ ಮತ್ತು ಭರವಸೆಯ ಭಾವದಿಂದ ದೇವರ ಕಡೆಗೆ ನೋಡುತ್ತೇವೆ. ತನ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುವಂತಹ ಪವಾಡ ನಡೆಯಬೇಕು ಎಂದು ಮನುಷ್ಯ ಭಾವಿಸುತ್ತಾನೆ. ಹಣದ ಕೊರತೆ, ಕೆಟ್ಟ ಆರೋಗ್ಯ, ದುರಾದೃಷ್ಟ ಇತ್ಯಾದಿಗಳಿಂದ ಹಿಡಿದು ಉತ್ತಮ ಜೀವನ ಸಂಗಾತಿ ಸಿಗದೇ ಇರುವುದು, ಇಂತಹ ಅನೇಕ ಸಮಸ್ಯೆಗಳು ನಮಗೆ ಒತ್ತಡ ಮತ್ತು ಖಿನ್ನತೆಯನ್ನು ನೀಡುತ್ತದೆ. ಇವೆಲ್ಲವನ್ನು ತಪ್ಪಿಸಲು, ನಾವು ಇಂದು ನಿಮ್ಮ ಮುಂದೆ ಉತ್ತಮ ಮತ್ತು ಸರಳವಾದ ಪರಿಹಾರವನ್ನು ಪ್ರಸ್ತುತಪಡಿಸಲಿದ್ದೇವೆ. ಪೂಜೆಯಲ್ಲಿ ಕಪ್ಪು ದಾರವನ್ನು ಹೆಚ್ಚಾಗಿ ಬಳಸುವುದನ್ನು ನೀವೆಲ್ಲರೂ ನೋಡಿರುತ್ತೀರ. ಈ ಕಪ್ಪು ದಾರವನ್ನು ಸರಿಯಾದ ಸ್ಥಳದಲ್ಲಿ ಕಟ್ಟಿದರೆ, ನಿಮ್ಮ ಅನೇಕ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಬನ್ನಿ ಇದರ ಬಗ್ಗೆ ನಿಮಗೆ ವಿಸ್ತಾರವಾಗಿ ತಿಳಿಸುತ್ತೇವೆ.

Advertisement

ಧನಕ್ಕೆ ಸಂಬಂಧಿಸಿದಂತೆ:

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು, ಉದ್ಯೋಗ ಸಿಗದೇ ಇರೋದು, ವ್ಯವಹಾರದಲ್ಲಿ ನಷ್ಟ ಅಥವಾ ಇನ್ನಾವುದೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಿ. ಶುಕ್ರವಾರ, ಲಕ್ಷ್ಮಿ ದೇವಿಯ ಪಾದದಲ್ಲಿ ಕಪ್ಪು ದಾರವನ್ನು ಇರಿಸಿ. ಈಗ ಲಕ್ಷ್ಮೀ ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ. ಇದರ ನಂತರ ಕಪ್ಪು ದಾರವನ್ನು ನೇರವಾಗಿ ಕೈಯ ಮಣಿಕಟ್ಟಿನ ಮೇಲೆ ಕಟ್ಟಿಕೊಳ್ಳಿ. ಇದರೊಂದಿಗೆ, ನಿಮ್ಮ ಕೈಯಲ್ಲಿ ಹೆಚ್ಚೆಚ್ಚು ಹಣ ಬರಲಾರಂಭಿಸುತ್ತದೆ.

ಅದೃಷ್ಟಕ್ಕಾಗಿ:

ನೀವು ದುರಾದೃಷ್ಟದಿಂದ ಕಂಗಾಲಾಗಿದ್ದರೆ ಮತ್ತು ನಿಮ್ಮ ಅದೃಷ್ಟ ಖುಲಾಯಿಸಬೇಕೆಂದರೆ ಬುಧವಾರ ಗಣೇಶನನ್ನು ಪೂಜಿಸಿ. ಪೂಜೆಯ ಮೊದಲು, ಗಣೇಶನ ಪಾದದಲ್ಲಿ ಕಪ್ಪು ದಾರವೂ ಇಡಿ. ಪೂಜೆ ಮುಗಿದ ನಂತರ, ಈ ಕಪ್ಪು ದಾರವನ್ನು ನಿಮ್ಮ ಬಲಗೈಯ ತೋಳಿನ ಮೇಲೆ ಕಟ್ಟಿಕೊಳ್ಳಿ (ಮೊಣಕೈಯ ಮೇಲಿನ ಭಾಗ ಅಂದರೆ ನಿಮ್ಮ ಬೈಸೆಪ್ಸ್ ನ ಮೇಲೆ). ಅದೃಷ್ಟದ ಸೃಷ್ಟಿಕರ್ತ ಎಂದು ಕರೆಯಲ್ಪಡುವ ಗಣೇಶ ನಿಮ್ಮ ಅದೃಷ್ಟವನ್ನು ಬೆಳಗಿಸುತ್ತಾನೆ.

ಕೆಟ್ಟ ದೃಷ್ಟಿಯಿಂದ ಪಾರಾಗಲು:

ನಿಮ್ಮ ಶತ್ರುಗಳು ಅಥವಾ ಜನರ ದುಷ್ಟ ಕಣ್ಣಿನಿಂದ ನೀವು ತೊಂದರೆಗೊಳಗಾಗಿದ್ದರೆ, ಶನಿವಾರ ಸ್ನಾನ ಮಾಡಿದ ನಂತರ, ನಿಮ್ಮ ಕಾಲಿಗೆ ಅಂದರೆ ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಿ. ಇದರಿಂದ ನಿಮಗೆ ಹಾನಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶತ್ರುಗಳ ದುಷ್ಟ ಕಣ್ಣು ಅಥವಾ ಪಿತೂರಿ ಕೂಡ ಫೇಲ್ ಆಗಿಬಿಡುತ್ತೆ.

ಉತ್ತಮ ಸಂಗಾತಿಗಾಗಿ:

ನೀವು ಬಯಸಿದ ಜೀವನ ಸಂಗಾತಿ ಸಿಗುತ್ತಿಲ್ಲವೆಂದರೆ ಉದ್ವೇಗಕ್ಕೆ ಒಳಗಾಗಬೇಡಿ. ಸೋಮವಾರ ಶಿವನನ್ನು ಪೂಜಿಸಿ. ಇದರ ನಂತರ ಕಪ್ಪು ದಾರವನ್ನು ತೆಗೆದುಕೊಂಡು ಅದರಲ್ಲಿ 7 ಗಂಟುಗಳನ್ನು ಮಾಡಿ. ಪ್ರತಿ ಗಂಟು ಕಟ್ಟುವಾಗ, ‘ಓಂ ನಮಃ ಶಿವಾಯ’ ಎಂದು ಪಠಿಸಬೇಕು. ಇದರ ನಂತರ, ಈ ಏಳು ಗಂಟು ಹಾಕಿದ ದಾರವನ್ನು ಕೊರಳಿಗೆ ಧರಿಸಿ. ಇದರೊಂದಿಗೆ, ಶೀಘ್ರದಲ್ಲೇ ನೀವು ಏಳೇಳು ಜನ್ಮಗಳಿಗೂ ಬೆಂಬಲಿಸುವ ಜೀವನ ಸಂಗಾತಿಯನ್ನು ಪಡೆಯುತ್ತೀರಿ.

ಉತ್ತಮ ಆರೋಗ್ಯಕ್ಕೆ:

ಯಾವುದೇ ರೋಗ ಅಥವಾ ದುರ್ಘಟನೆಯಿಂದ ಪಾರಾಗಲು ಮತ್ತು ಯಾವಾಗಲೂ ಆರೋಗ್ಯವಾಗಿರಲು ಈ ಪರಿಹಾರವನ್ನು ಮಾಡಿ. ಗುರುವಾರ ಭಗವಾನ್ ವಿಷ್ಣುವನ್ನು ಪೂಜಿಸಿ. ಇದರ ನಂತರ ನಿಮ್ಮ ಸೊಂಟದ ಮೇಲೆ ಕಪ್ಪು ದಾರವನ್ನು ಕಟ್ಟಿಕೊಳ್ಳಿ. ಇದು ನಿಮ್ಮನ್ನು ಅನಾರೋಗ್ಯದಿಂದ ಅಥವಾ ಯಾವುದೇ ಅಹಿತಕರ ಘಟನೆಯಿಂದ ರಕ್ಷಿಸುತ್ತದೆ. ಇದರೊಂದಿಗೆ ನೀವು ಯಾವಾಗಲೂ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರುತ್ತೀರಿ.

Advertisement
Share this on...