ಶೃದ್ಧಾ ಮರ್ಡರ್ ಕೇಸ್ ನಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಯಲು: ಕೋರ್ಟ್ ನಲ್ಲಿ ಅಫ್ತಾಬ್ ಬಾಯ್ಬಿಟ್ಟ ಸತ್ಯ ಕೇಳಿ ದಂಗಾದ ನ್ಯಾಯಾಧೀಶರು

in Uncategorized 221 views

Aftab Amin Poonawalla confession: ಶ್ರದ್ಧಾ ಹ-ತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ನ್ಯಾಯಾಲಯದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಇದರೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಅಫ್ತಾಬ್ ನ್ಯಾಯಾಧೀಶರ ಮುಂದೆ ತಾನು ಶ್ರದ್ಧಾಳನ್ನು ಕೊಂ-ದ ನಂತರ ದೇ-ಹವನ್ನು ತುಂ-ಡುಗಳಾಗಿ ಕ-ತ್ತ-ರಿಸಿದ್ದೇನೆ ಎಂದು ಹೇಳಿದ್ದಾನೆ. ಇದಾದ ನಂತರ ದೆಹಲಿಯ ಸಾಕೇತ್ ಕೋರ್ಟ್ ಅಫ್ತಾಬ್‌ನ ಪೊಲೀಸ್ ಕಸ್ಟಡಿಯನ್ನು ಮುಂದಿನ 4 ದಿನಗಳವರೆಗೆ ವಿಸ್ತರಿಸಿದೆ.

Advertisement

ಮೈದಾನಗಢಿ ಕೆರೆಯಲ್ಲಿ ಸಿಕ್ಕಿತು ಮಹತ್ವದ ಸಾಕ್ಷಿ

ದೆಹಲಿಯ ಮೈದಾನಗಢಿಯ ಕೆರೆಯಲ್ಲಿ ಮಹತ್ವದ ಸಾಕ್ಷಿಗಳು ಪತ್ತೆಯಾಗಿವೆ ಮತ್ತು ಡೈವರ್‌ಗಳ ಸಹಾಯದಿಂದ ಪೊಲೀಸರು ಮೂ-ಳೆಗಳನ್ನು ಹೊರತೆಗೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಈ ಮೂ-ಳೆಗಳು ಮಾನವ ಕೈಯದ್ದು ಎಂದು ಪತ್ತೆ ಹಚ್ಚುತ್ತಿದ್ದಾರೆ. ಪೊಲೀಸರು ಎಲ್ಲಾ ಮೂ-ಳೆಗಳನ್ನು ತನಿಖೆಗಾಗಿ ಸಿಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಪೊಲೀಸರಿಗೆ ತಲೆಬುರುಡೆ ಇನ್ನೂ ಪತ್ತೆಯಾಗಿಲ್ಲವಾದರೂ, ತಲೆಬುರುಡೆಯ ಕೆಳಗಿನ ಭಾಗ ಅಂದರೆ ದವಡೆ ಪತ್ತೆಯಾಗಿದೆ, ಇದನ್ನು ಈಗಾಗಲೇ ತನಿಖೆಗಾಗಿ ಸಿಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದೇ ಸಮಯದಲ್ಲಿ, ತಲೆಬುರುಡೆ ಈ ಕೆರೆಯಲ್ಲಿ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ ಮತ್ತು ತಲೆಬುರುಡೆಯ ಪತ್ತೆಗೆ ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಶೃದ್ಧಾ ಕೇಸ್ ನಲ್ಲಿ ಮುಂದಿನ 100 ಗಂಟೆಗಳು ನಿರ್ಣಾಯಕ

ಆರೋಪಿ ಅಫ್ತಾಬ್‌ನನ್ನು ದೆಹಲಿಯ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 4 ದಿನಗಳ ಕಾಲ ಬಂಧನವನ್ನು ವಿಸ್ತರಿಸಿದೆ. ಇದಾದ ಬಳಿಕ ಈ ಪ್ರಕರಣದ ತನಿಖೆಗೆ ಮುಂದಿನ 100 ಗಂಟೆಗಳು ಅತ್ಯಂತ ಮಹತ್ವದ್ದಾಗಿದ್ದು, 100ಕ್ಕೂ ಹೆಚ್ಚು ಪೊಲೀಸರು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿದ್ದಾರೆ. ಪೊಲೀಸರು ಈಗಾಗಲೇ ಅಫ್ತಾಬ್‌ನನ್ನು 10 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಜೈಲಿಗೆ ಕಳುಹಿಸುವ ಮೊದಲು ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಪೊಲೀಸರಿಗೆ ಇನ್ನು 4 ದಿನಗಳ ಕಾಲಾವಕಾಶವಿದೆ.

ಮುಂದಿನ ನಾಲ್ಕು ದಿನಗಳಲ್ಲಿ ಈ ಮಹತ್ವದ ಸಾಕ್ಷ್ಯಗಳಿಗಾಗಿ ಪೊಲೀಸರು ಶೋಧ ನಡೆಸಲಿದ್ದಾರೆ

ದೆಹಲಿ ಪೊಲೀಸರ ಬಳಿ ಇನ್ನು ಕೇವಲ 4 ದಿನಗಳಿದ್ದು ಈ ಸಮಯ ಪೋಲಿಸರಿಗೆ ಬಹಳ ಮುಖ್ಯವಾಗಿದೆ. ಈ ವೇಳೆ ಪೊಲೀಸರಿಗೆ ಹಲವು ಮಹತ್ವದ ಸಾಕ್ಷ್ಯಗಳು ಸಿಗಬೇಕಿದೆ. ಇದುವರೆಗೂ ಘಟನೆಗೆ ಬಳಸಿದ ಆ-ಯುಧ ಪತ್ತೆಯಾಗಿಲ್ಲ. ಇದಲ್ಲದೇ ಶ್ರದ್ಧಾಳ ತಲೆಯ ಭಾ-ಗ ಪತ್ತೆಯಾಗಿಲ್ಲ ಹಾಗೂ ದೇಹದ ಇತರ ಕೆಲವು ಪ್ರಮುಖ ಭಾಗಗಳೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಭಾಗಿಯಾಗಿರುವ ಬಟ್ಟೆಗಳು ಸಹ ಪತ್ತೆಯಾಗಿಲ್ಲ ಮತ್ತು ಪೊಲೀಸರು ಶ್ರದ್ಧಾಳ ಫೋನ್‌ಗಾಗಿ ಹುಡುಕುತ್ತಿದ್ದಾರೆ.

ನಾರ್ಕೋ ಟೆಸ್ಟ್ ಗೂ ಮುನ್ನ ನಡೆಯಲಿದೆ ಅಫ್ತಾಬ್‌ನ ಪಾಲಿಗ್ರಾಫಿ‌‌ ಟೆಸ್ಟ್

ನಾರ್ಕೋ ಟೆಸ್ಟ್ ಗೂ ನಡೆಸುವ ಮುನ್ನ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನ ಪಾಲಿಗ್ರಫಿ ಟೆಸ್ಟ್ ನಡೆಸಲು ದೆಹಲಿ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ. ಮುಂದಿನ ನಾಲ್ಕು ದಿನಗಳಲ್ಲಿ ಪೊಲೀಸರು ಅಫ್ತಾಬ್‌ನ ಪಾಲಿಗ್ರಫಿ ಟೆಸ್ಟ್ ಮತ್ತು ನಾರ್ಕೋ ಟೆಸ್ಟ್ ನ್ನೂ ಸಹ ಮಾಡಬಹುದು ಎಂದು ಹೇಳಲಾಗುತ್ತಿದೆ.

ಡೇಟಿಂಗ್ ಆ್ಯಪ್ ಮೂಲಕ ಪರಿಚಯ, ಬಳಿಕ ಲವ್ ಹಾಗು ಮರ್ಡರ್

ಮುಂಬೈ ಮೂಲದ ಶ್ರದ್ಧಾ ಮತ್ತು ಅಫ್ತಾಬ್ ಅವರ ಪ್ರೀತಿ ಡೇಟಿಂಗ್ ಅಪ್ಲಿಕೇಶನ್‌ ಮೂಲಕ ಶುರುವಾಗಿತ್ತು. ಇದಾದ ನಂತರ ಇಬ್ಬರೂ ಲಿವ್-ಇನ್‌ನಲ್ಲಿ ಇರಲು ನಿರ್ಧರಿಸಿದರು ಮತ್ತು ಶ್ರದ್ಧಾ ತನ್ನ ಮನೆಯನ್ನು ತೊರೆದು ಅಫ್ತಾಬ್‌ನೊಂದಿಗೆ ಮುಂಬೈನಲ್ಲಿ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಶುರು ಮಾಡಿದಳು. ಶ್ರದ್ಧಾಳ ನಿರ್ಧಾರದಿಂದ ಮನೆಯವರು ಕೋಪಗೊಂಡಿದ್ದು, ಇದರಿಂದ ಶ್ರದ್ಧಾ ತನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಳು. ಮುಂಬೈನಲ್ಲಿ ಕೆಲವು ತಿಂಗಳು ನೆಲೆಸಿದ ಶ್ರದ್ಧಾ ಮತ್ತು ಅಫ್ತಾಬ್ ದೆಹಲಿಗೆ ತೆರಳಿದರು. ಶ್ರದ್ಧಾ ಮತ್ತು ಅಫ್ತಾಬ್ ಈ ವರ್ಷ ಮೇ 8 ರಂದು ದೆಹಲಿಗೆ ಬಂದು ಛತ್ತರ್‌ಪುರ ಪ್ರದೇಶದ ಮನೆಯೊಂದರಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಮೇ 18ರಂದು ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಇದೇ ವೇಳೆ ಅಫ್ತಾಬ್ ಶ್ರದ್ಧಾಳನ್ನು ಕೊಂ-ದಿದ್ದಾನೆ. ಹ-ತ್ಯೆ-ಯ ನಂತರ ಅಫ್ತಾಬ್ ಶ್ರದ್ಧಾಳ ದೇ-ಹದ 35 ತುಂ-ಡುಗಳನ್ನು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದಾನೆ.

Advertisement
Share this on...